ಬಸವಣ್ಣನವರ ಹಾಗೆ ವಿಶ್ವಮಾನ್ಯವಾದ ಪ್ರಗತಿ ಪರ ವಿಚಾರಧಾರೆಗಳನ್ನು ಹಿಂದೆ ಯಾರೂ ಮಂಡಿಸಿರಲಿಲ್ಲ. ಅದಕ್ಕಾಗಿಯೇ ಅಂದಿನ ಕಾಲಮಾನದಲ್ಲಿ ಅವರ ವಿಚಾರಧಾರೆಗಳನ್ನು ಒಪ್ಪಿಕೊಂಡು, ದೇಶದ ನಾನಾ ಭಾಗಗಳ ಎಲ್ಲ ಜಾತಿ, ಮತ, ಪಂಥಗಳ ಜನ ಬಸವಕಲ್ಯಾಣದತ್ತ ಮುಖ ಮಾಡಿದರು. ಆಗ ಹೊಸ ಪರಂಪರೆಯೇ ಉದಯಿಸಿತು. ಅದುವೇ ಬಸವ ಪರಂಪರೆ, ಶರಣ ಪರಂಪರೆ ಹಾಗೂ ವಚನ ಪರಂಪರೆ ಎಂದು ತಿಳಿಸಿದ್ದಾರೆ.