<p><strong>ಕಮಲನಗರ:</strong> ತಾಲ್ಲೂಕಿನ ವಿವಿಧ ಶಾಲೆಗಳಿಗೆ ಮಂಗಳವಾರ ಭೇಟಿ ನೀಡಿದ ಬಿಆರ್ಸಿ ಪ್ರಕಾಶ ರಾಠೋಡ ನೇತೃತ್ವದ ಅಧಿಕಾರಿಗಳು, ಶಾಲೆಗಳಲ್ಲಿನ ಮೂಲಸೌಕರ್ಯ ಹಾಗೂ ಮಕ್ಕಳ ದಾಖಲಾತಿ ಬಗ್ಗೆ ಪರಿಶೀಲನೆ ನಡೆಸಿದರು.</p>.<p>ನಂತರ ಮಾತನಾಡಿದ ಬಿಆರಸಿ ಪ್ರಕಾಶ ರಾಠೋಡ, ಸರ್ಕಾರಿ ಶಾಲೆಗಳಲ್ಲಿ ಆರಂಭಿಕ ಹಂತದಿಂದಲೇ ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತಮಗೊಳಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಮಿಂಚಿನ ಸಂಚಾರ ಹಮ್ಮಿಕೊಂಡು ಶಾಲೆಯ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.</p>.<p>ಮದನೂರ, ಖತಗಾಂವ, ಡೋಣಗಾಂವ(ಎಂ), ಬೆಳಕೋಣಿ(ಭೋ), ಕೋಟಗ್ಯಾಳ ಶಾಲೆಗಳಿಗೆ ಭೇಟಿ ನೀಡಿ, ಶಿಕ್ಷಕರ ಬೋಧನೆ ಮಾಡುವ ಪದ್ಧತಿ, ಪಾಠ ಟಿಪ್ಪಣಿ, ವಾರ್ಷಿಕ ದಾಖಲೆ, ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿ ಹಾಗೂ ಸೇತುಬಂಧ ಕಾರ್ಯಕ್ರಮಗಳ ಬಗ್ಗೆ ಶಿಕ್ಷಕರಿಗೆ ಮಾರ್ಗದರ್ಶನ ನೀಡಲಾಯಿತು.</p>.<p>ಸಿಆರ್ಸಿಗಳಾದ ರೋಹಿದಾಸ ಮೇತ್ರೆ, ವೆಂಕಟರಾವ ನಾಗಲಗಿದ್ದೆ, ಶಿಕ್ಷಕರಾದ ಗಣಪತರಾವ ದೇವಕತ್ತೆ, ಗೋವಿಂದರಾವ ಮಸೋಟೆ, ಸುಧಾಕರ ಬಾಬರೆ, ಮಾರುತಿ ರೇಡ್ಡಿ, ದಿಲೀಪ ವಾನಖೇಡೆ, ಸರಸ್ವತಿ ಡೊಂಗರೆ, ಸುಭಾಷ ಹಾಗೂ ಇನ್ನಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಮಲನಗರ:</strong> ತಾಲ್ಲೂಕಿನ ವಿವಿಧ ಶಾಲೆಗಳಿಗೆ ಮಂಗಳವಾರ ಭೇಟಿ ನೀಡಿದ ಬಿಆರ್ಸಿ ಪ್ರಕಾಶ ರಾಠೋಡ ನೇತೃತ್ವದ ಅಧಿಕಾರಿಗಳು, ಶಾಲೆಗಳಲ್ಲಿನ ಮೂಲಸೌಕರ್ಯ ಹಾಗೂ ಮಕ್ಕಳ ದಾಖಲಾತಿ ಬಗ್ಗೆ ಪರಿಶೀಲನೆ ನಡೆಸಿದರು.</p>.<p>ನಂತರ ಮಾತನಾಡಿದ ಬಿಆರಸಿ ಪ್ರಕಾಶ ರಾಠೋಡ, ಸರ್ಕಾರಿ ಶಾಲೆಗಳಲ್ಲಿ ಆರಂಭಿಕ ಹಂತದಿಂದಲೇ ಶೈಕ್ಷಣಿಕ ಚಟುವಟಿಕೆಗಳನ್ನು ಉತ್ತಮಗೊಳಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ. ಈ ನಿಟ್ಟಿನಲ್ಲಿ ಮಿಂಚಿನ ಸಂಚಾರ ಹಮ್ಮಿಕೊಂಡು ಶಾಲೆಯ ಸ್ಥಿತಿಗತಿಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.</p>.<p>ಮದನೂರ, ಖತಗಾಂವ, ಡೋಣಗಾಂವ(ಎಂ), ಬೆಳಕೋಣಿ(ಭೋ), ಕೋಟಗ್ಯಾಳ ಶಾಲೆಗಳಿಗೆ ಭೇಟಿ ನೀಡಿ, ಶಿಕ್ಷಕರ ಬೋಧನೆ ಮಾಡುವ ಪದ್ಧತಿ, ಪಾಠ ಟಿಪ್ಪಣಿ, ವಾರ್ಷಿಕ ದಾಖಲೆ, ವಿದ್ಯಾರ್ಥಿಗಳ ದಾಖಲಾತಿ ಮತ್ತು ಹಾಜರಾತಿ ಹಾಗೂ ಸೇತುಬಂಧ ಕಾರ್ಯಕ್ರಮಗಳ ಬಗ್ಗೆ ಶಿಕ್ಷಕರಿಗೆ ಮಾರ್ಗದರ್ಶನ ನೀಡಲಾಯಿತು.</p>.<p>ಸಿಆರ್ಸಿಗಳಾದ ರೋಹಿದಾಸ ಮೇತ್ರೆ, ವೆಂಕಟರಾವ ನಾಗಲಗಿದ್ದೆ, ಶಿಕ್ಷಕರಾದ ಗಣಪತರಾವ ದೇವಕತ್ತೆ, ಗೋವಿಂದರಾವ ಮಸೋಟೆ, ಸುಧಾಕರ ಬಾಬರೆ, ಮಾರುತಿ ರೇಡ್ಡಿ, ದಿಲೀಪ ವಾನಖೇಡೆ, ಸರಸ್ವತಿ ಡೊಂಗರೆ, ಸುಭಾಷ ಹಾಗೂ ಇನ್ನಿತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>