ಹುಮನಾಬಾದ್: ‘ಕೋವಿಡ್ ವೇಳೆ ಪತ್ರಿಕಾ ವಿತರಕರು ಪ್ರಾಣದ ಹಂಗು ತೊರೆದು ಓದುಗರಿಗೆ ಪತ್ರಿಕೆ ತಲುಪಿಸಿರುವುದು ಶ್ಲಾಘನೀಯ’ ಎಂದು ಪರಿಸರ ಪ್ರೇಮಿ ಶೈಲೇಂದ್ರ ಕಾವಡಿ ಹೇಳಿದರು.
ಪಟ್ಟಣದಲ್ಲಿ ಪತ್ರಿಕಾ ವಿತರಕರನ್ನು ಸನ್ಮಾನಿಸಿ ಮಾತನಾಡಿ,‘ಓದುಗರು ಪ್ರತಿ ತಿಂಗಳು ವಿತರಕರಿಗೆ ಹಣ ನೀಡಿ ಸಹಕರಿಸಬೇಕು’ ಎಂದರು.
ಹಿರಿಯ ಪತ್ರಿಕಾ ವಿತರಕ ಬಸವರಾಜ ಮಾತನಾಡಿ,‘ಸರ್ಕಾರ ಕೋವಿಡ್ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡಿದವರಿಗೆ ಸಹಕಾರ ನೀಡಿದೆ. ಪತ್ರಿಕಾ ವಿತರಕರೂ ಸಂಕಷ್ಟಗಳನ್ನು ಎದುರಿಸಿದ್ದೇವೆ. ಸರ್ಕಾರ ನಿರ್ಲಕ್ಷ್ಯ ಮಾಡುತ್ತಿರುವುದು ಬೇಸರದ ಸಂಗತಿ’ ಎಂದರು.
ನಾಗಭೂಷಣ, ರೇವಣಸಿದ್ದಪ್ಪ, ಪ್ರಶಾಂತ ಸೇರಿದಂತೆ ಹಲವರು ಇದ್ದರು.