ಈ ಕೊಳವೆ ಬಾವಿಯ ನೀರನ್ನೇ ಜನರು ಸೇವನೆ ಮಾಡಬೇಕಾಗಿರುವುದರಿಂದ ಗ್ರಾಮಸ್ಥರಿಗೆ ರೋಗ ಭಯ ಕಾಡುತ್ತಿದೆ. ಗ್ರಾಮದ ಬಹುತೇಕ ಮನೆಗಳ ನಳಗಳಿಗೆ ಈ ಕೊಳವೆ ಬಾವಿಯೇ ಆಧಾರ ಆಗಿದೆ. ಹಾಗಾಗಿ, ಸಾರ್ವಜನಿಕರು ಕುಡಿಯಲು ಸಹ ಇದೇ ಕೊಳವೆ ಬಾವಿ ನೀರು ಬಳಸುತ್ತಾರೆ. ಈಗ ಮಳೆಗಾಲ ಇರುವುದರಿಂದ ತಿಪ್ಪೆಗುಂಡಿಗಳ ಕಲುಷಿತ ನೀರು ಕೋಳವೆ ಬಾವಿಗೆ ಸೇರ್ಪಡೆಗೊಳ್ಳುತ್ತಿದ್ದು, ಜನರಿಗೆ ನಾನಾ ಕಾಯಿಲೆಗಳ ಭಯ ಕಾಡುತ್ತಿದೆ. ಗ್ರಾಮಸ್ಥರು ಕೊರೊನಾ ಭಯಕ್ಕಿಂತ ಹೆಚ್ಚಾಗಿ ಈ ನೀರಿನ ಸೇವನೆಯಿಂದ ಬರಬಹುದಾದ ರೋಗಗಳಿಂದ ಚಿಂತಿತರಾಗಿದ್ದಾರೆ.