<p><strong>ಬೀದರ್: </strong>ಜಮಾಅತೆ ಇಸ್ಲಾಮಿ ಹಿಂದ್ ಅಕ್ಟೋಬರ್ 23ರಿಂದ ನವೆಂಬರ್ 5ರ ವರೆಗೆ ‘ಪ್ರವಾದಿ ಮಹಮ್ಮದ್– ಮಾನವತೆಯ ಮಾರ್ಗದರ್ಶಕ’ ಎನ್ನುವ ಘೋಷವಾಕ್ಯದೊಂದಿಗೆ ರಾಜ್ಯದಾದ್ಯಂತ ಅಭಿಯಾನ ಹಮ್ಮಿಕೊಂಡಿದೆ.</p>.<p>ರಬೀವುಲ್ ಅವ್ವಲ್ ಪ್ರವಾದಿ ಮಹಮ್ಮದ್ ಜನಿಸಿರುವ ತಿಂಗಳಾಗಿದೆ. ಅವರ ಪಾವನ ಜೀವನ, ಅತ್ಯುನ್ನತ ಗುಣ, ನಡತೆಗಳು ಹಾಗೂ ಮಹತ್ವದ ಸಂದೇಶ ಸಾರಲಾಗುವುದು. ವೈಯಕ್ತಿಕ ಭೇಟಿ, ಸಾರ್ವಜನಿಕ ಚರ್ಚೆ, ಚಿಕ್ಕದಾದ ಸಭೆ ನಡೆಸಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗುವುದು.</p>.<p>ಬೀದರ್ನಲ್ಲಿ ಶುಕ್ರವಾರ ವಿವಿಧ ಮಸೀದಿಗಳಲ್ಲಿ ಪ್ರವಚನ ನಡೆಯಲಿದೆ. ಅಭಿಯಾನದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ, ಸರ್ಕಾರಿ ಅಧಿಕಾರಿ ಹಾಗೂ ಶಿಕ್ಷಕ ವೃಂದದವರನ್ನು ಭೇಟಿ ಮಾಡಿ ಸೀರತ್ ಸಾಹಿತ್ಯ ನೀಡಲಾಗುವುದು. ಮನೆ-ಮನೆಗೆ ಭೇಟಿ ನೀಡಿ ಕನ್ನಡ, ಇಂಗ್ಲಿಷ್ ಹಾಗೂ ಉರ್ದುವಿನಲ್ಲಿರುವ ಕರಪತ್ರಗಳನ್ನು ವಿತರಿಸಲಾಗುವುದು.</p>.<p>ಅಲ್-ಅಮೀನ್ ಕಾಲೇಜಿನಲ್ಲಿ ನವೆಂಬರ್ 1 ರಂದು ಬೆಳಿಗ್ಗೆ 11 ಗಂಟೆಗೆ ಕನ್ನಡ, ಹಿಂದಿ ಹಾಗೂ ಉರ್ದು ಕವಿಗೋಷ್ಠಿ ನಡೆಯಲಿದೆ. ನ.2 ರಂದು ಬೆಳಿಗ್ಗೆ 7 ಗಂಟೆಗೆ ಚೌಬಾರಾದಿಂದ ಫತೇಹ್ ದರ್ವಾಜಾ ಅವರಿಗೆ ಸ್ವಚ್ಛತಾ ಅಭಿಯಾನ ನಡೆಸಲಾಗುವುದು.</p>.<p>‘ಪ್ರವಾದಿ ಮುಹಮ್ಮದ್-ಮಾನವತೆಯ ಮಾರ್ಗದರ್ಶಕ’ ವಿಷಯವಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತರು ಎರಡು ಸಾವಿರ ಶಬ್ದಗಳಲ್ಲಿ ಬರೆದು ನವೆಂಬರ್ 5ರೊಳಗೆ ಮೇಲ್ ಮೂಲಕ ಕಳಿಸಿಕೊಡಬೇಕು. ವಿಜೇತರಿಗೆ ಪ್ರಥಮ ಬಹುಮಾನ ₹ 5 ಸಾವಿರ, ದ್ವಿತೀಯ ಬಹುಮಾನ 3 ಸಾವಿರ ಹಾಗೂ ತೃತೀಯ ಬಹುಮಾನ ₹ 1 ಸಾವಿರ ಹಾಗೂ ಆರು ಸಮಾಧಾನಕರ ನಗದು ಬಹುಮಾನ ನೀಡಲಾಗುವುದು.</p>.<p>ವಿವರಗಳಿಗೆ (ಮೊಬೈಲ್ 97391 90102) ಎಂದು ಅಭಿಯಾನದ ಸಂಚಾಲಕ ರಫೀಕ್ ಅಹ್ಮದ್ ಹಾಗೂ ಜಮಾತೆ ಇಸ್ಲಾಮಿ ಹಿಂದ್ ಬೀದರ್ನ ಅಧ್ಯಕ್ಷ ಮುಹಮ್ಮದ್ ನಿಜಾಮುದ್ದೀನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>ಜಮಾಅತೆ ಇಸ್ಲಾಮಿ ಹಿಂದ್ ಅಕ್ಟೋಬರ್ 23ರಿಂದ ನವೆಂಬರ್ 5ರ ವರೆಗೆ ‘ಪ್ರವಾದಿ ಮಹಮ್ಮದ್– ಮಾನವತೆಯ ಮಾರ್ಗದರ್ಶಕ’ ಎನ್ನುವ ಘೋಷವಾಕ್ಯದೊಂದಿಗೆ ರಾಜ್ಯದಾದ್ಯಂತ ಅಭಿಯಾನ ಹಮ್ಮಿಕೊಂಡಿದೆ.</p>.<p>ರಬೀವುಲ್ ಅವ್ವಲ್ ಪ್ರವಾದಿ ಮಹಮ್ಮದ್ ಜನಿಸಿರುವ ತಿಂಗಳಾಗಿದೆ. ಅವರ ಪಾವನ ಜೀವನ, ಅತ್ಯುನ್ನತ ಗುಣ, ನಡತೆಗಳು ಹಾಗೂ ಮಹತ್ವದ ಸಂದೇಶ ಸಾರಲಾಗುವುದು. ವೈಯಕ್ತಿಕ ಭೇಟಿ, ಸಾರ್ವಜನಿಕ ಚರ್ಚೆ, ಚಿಕ್ಕದಾದ ಸಭೆ ನಡೆಸಿ ಸಾರ್ವಜನಿಕರಿಗೆ ತಿಳಿವಳಿಕೆ ನೀಡಲಾಗುವುದು.</p>.<p>ಬೀದರ್ನಲ್ಲಿ ಶುಕ್ರವಾರ ವಿವಿಧ ಮಸೀದಿಗಳಲ್ಲಿ ಪ್ರವಚನ ನಡೆಯಲಿದೆ. ಅಭಿಯಾನದ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ, ಸರ್ಕಾರಿ ಅಧಿಕಾರಿ ಹಾಗೂ ಶಿಕ್ಷಕ ವೃಂದದವರನ್ನು ಭೇಟಿ ಮಾಡಿ ಸೀರತ್ ಸಾಹಿತ್ಯ ನೀಡಲಾಗುವುದು. ಮನೆ-ಮನೆಗೆ ಭೇಟಿ ನೀಡಿ ಕನ್ನಡ, ಇಂಗ್ಲಿಷ್ ಹಾಗೂ ಉರ್ದುವಿನಲ್ಲಿರುವ ಕರಪತ್ರಗಳನ್ನು ವಿತರಿಸಲಾಗುವುದು.</p>.<p>ಅಲ್-ಅಮೀನ್ ಕಾಲೇಜಿನಲ್ಲಿ ನವೆಂಬರ್ 1 ರಂದು ಬೆಳಿಗ್ಗೆ 11 ಗಂಟೆಗೆ ಕನ್ನಡ, ಹಿಂದಿ ಹಾಗೂ ಉರ್ದು ಕವಿಗೋಷ್ಠಿ ನಡೆಯಲಿದೆ. ನ.2 ರಂದು ಬೆಳಿಗ್ಗೆ 7 ಗಂಟೆಗೆ ಚೌಬಾರಾದಿಂದ ಫತೇಹ್ ದರ್ವಾಜಾ ಅವರಿಗೆ ಸ್ವಚ್ಛತಾ ಅಭಿಯಾನ ನಡೆಸಲಾಗುವುದು.</p>.<p>‘ಪ್ರವಾದಿ ಮುಹಮ್ಮದ್-ಮಾನವತೆಯ ಮಾರ್ಗದರ್ಶಕ’ ವಿಷಯವಾಗಿ ಪ್ರಬಂಧ ಸ್ಪರ್ಧೆ ಏರ್ಪಡಿಸಲಾಗಿದೆ. ಆಸಕ್ತರು ಎರಡು ಸಾವಿರ ಶಬ್ದಗಳಲ್ಲಿ ಬರೆದು ನವೆಂಬರ್ 5ರೊಳಗೆ ಮೇಲ್ ಮೂಲಕ ಕಳಿಸಿಕೊಡಬೇಕು. ವಿಜೇತರಿಗೆ ಪ್ರಥಮ ಬಹುಮಾನ ₹ 5 ಸಾವಿರ, ದ್ವಿತೀಯ ಬಹುಮಾನ 3 ಸಾವಿರ ಹಾಗೂ ತೃತೀಯ ಬಹುಮಾನ ₹ 1 ಸಾವಿರ ಹಾಗೂ ಆರು ಸಮಾಧಾನಕರ ನಗದು ಬಹುಮಾನ ನೀಡಲಾಗುವುದು.</p>.<p>ವಿವರಗಳಿಗೆ (ಮೊಬೈಲ್ 97391 90102) ಎಂದು ಅಭಿಯಾನದ ಸಂಚಾಲಕ ರಫೀಕ್ ಅಹ್ಮದ್ ಹಾಗೂ ಜಮಾತೆ ಇಸ್ಲಾಮಿ ಹಿಂದ್ ಬೀದರ್ನ ಅಧ್ಯಕ್ಷ ಮುಹಮ್ಮದ್ ನಿಜಾಮುದ್ದೀನ್ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>