<p><strong>ಚಿಟಗುಪ್ಪ:</strong> 18 ತಿಂಗಳ ಸಂಬಳ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ನೌಕರರು ಹಾಗೂಸಫಾಯಿ ಕರ್ಮಚಾರಿಗಳು ಶುಕ್ರವಾರ ಪ್ರತಿಟನೆ ನಡೆಸಿದರು.</p>.<p>ಸಿಬ್ಬಂದಿ ಶಿವಕುಮಾರ ಅತಿವಾಳ್ ಮಾತನಾಡಿ, ‘ಪಂಚಾಯಿತಿಯಿಂದ 18 ತಿಂಗಳಿನಿಂದ ಸಂಬಳ ವಿತರಿಸಿಲ್ಲ. ನೌಕರರಿಗೆ ಪಾವತಿಸಬೇಕಾದ ಸಂಬಳದ ಹಣ ಜೆಸ್ಕಾಂ ಖಾತೆಗೆ ₹ 3.50 ಲಕ್ಷವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಮೆ ಮಾಡಿದ್ದಾರೆ. ಈ ಬಗ್ಗೆ ಇದುವರೆಗೂ ಯಾವುದೇ ಉತ್ತರ ನೀಡುತ್ತಿಲ್ಲ. ನಮ್ಮ ಬೇಡಿಕೆಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.</p>.<p>ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರತಿಭಟನೆ ಆರಂಭಿಸಿದ ನೌಕರರು, ಪಂಚಾಯಿತಿ ವಿರುದ್ಧ ಘೋಷಣೆ ಕೂಗಿದರು. ಸುನೀಲ್ ರಾಜೇಂದ್ರ, ಅಶೋಕವೀರಪ್ಪ, ಶಾಂತಮ್ಮ ದೇವಿಂದ್ರ, ಲಕ್ಷ್ಮಿ ಕಲ್ಲಪ್ಪ, ಸುರೇಶ ದಶರಥ, ರುದ್ರಪ್ಪ ಹಣಮಂತಪ್ಪ, ರತ್ನಮ್ಮ ದಶರಥ, ಸುನೀಲ ಅರ್ಜುನ, ಸುಗಂಧ ಮಾರುತಿ ಪಾಲ್ಗೊಂಡಿದ್ದರು.</p>.<p>ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ಕನಕ ಮಾತನಾಡಿ, ‘ಸಧ್ಯಕ್ಕೆ ಒಂದು ತಿಂಗಳ ಸಂಬಳ ವಿತರಿಸಲಾಗುತ್ತದೆ. ಉಳಿದ ಸಂಬಳ ನಿಧಿ–2ರಿಂದ ಕ್ರಮೇಣ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.</p>.<p>ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶರಣು ಕಾಶಂಪೂರ, ತಿಪ್ಪಣ್ಣ ಮಾಲೆ, ಶೇಖರ ಚಿರ್ಚಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಂಜೀವ ರೆಡ್ಡಿ ಹಾಸರೆಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಟಗುಪ್ಪ:</strong> 18 ತಿಂಗಳ ಸಂಬಳ ನೀಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ತಾಲ್ಲೂಕಿನ ನಿರ್ಣಾ ಗ್ರಾಮ ಪಂಚಾಯಿತಿ ನೌಕರರು ಹಾಗೂಸಫಾಯಿ ಕರ್ಮಚಾರಿಗಳು ಶುಕ್ರವಾರ ಪ್ರತಿಟನೆ ನಡೆಸಿದರು.</p>.<p>ಸಿಬ್ಬಂದಿ ಶಿವಕುಮಾರ ಅತಿವಾಳ್ ಮಾತನಾಡಿ, ‘ಪಂಚಾಯಿತಿಯಿಂದ 18 ತಿಂಗಳಿನಿಂದ ಸಂಬಳ ವಿತರಿಸಿಲ್ಲ. ನೌಕರರಿಗೆ ಪಾವತಿಸಬೇಕಾದ ಸಂಬಳದ ಹಣ ಜೆಸ್ಕಾಂ ಖಾತೆಗೆ ₹ 3.50 ಲಕ್ಷವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಜಮೆ ಮಾಡಿದ್ದಾರೆ. ಈ ಬಗ್ಗೆ ಇದುವರೆಗೂ ಯಾವುದೇ ಉತ್ತರ ನೀಡುತ್ತಿಲ್ಲ. ನಮ್ಮ ಬೇಡಿಕೆಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ’ ಎಂದು ದೂರಿದರು.</p>.<p>ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರತಿಭಟನೆ ಆರಂಭಿಸಿದ ನೌಕರರು, ಪಂಚಾಯಿತಿ ವಿರುದ್ಧ ಘೋಷಣೆ ಕೂಗಿದರು. ಸುನೀಲ್ ರಾಜೇಂದ್ರ, ಅಶೋಕವೀರಪ್ಪ, ಶಾಂತಮ್ಮ ದೇವಿಂದ್ರ, ಲಕ್ಷ್ಮಿ ಕಲ್ಲಪ್ಪ, ಸುರೇಶ ದಶರಥ, ರುದ್ರಪ್ಪ ಹಣಮಂತಪ್ಪ, ರತ್ನಮ್ಮ ದಶರಥ, ಸುನೀಲ ಅರ್ಜುನ, ಸುಗಂಧ ಮಾರುತಿ ಪಾಲ್ಗೊಂಡಿದ್ದರು.</p>.<p>ಸ್ಥಳಕ್ಕೆ ಆಗಮಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶಂಕರ ಕನಕ ಮಾತನಾಡಿ, ‘ಸಧ್ಯಕ್ಕೆ ಒಂದು ತಿಂಗಳ ಸಂಬಳ ವಿತರಿಸಲಾಗುತ್ತದೆ. ಉಳಿದ ಸಂಬಳ ನಿಧಿ–2ರಿಂದ ಕ್ರಮೇಣ ಪಾವತಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ತಿಳಿಸಿದರು.</p>.<p>ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶರಣು ಕಾಶಂಪೂರ, ತಿಪ್ಪಣ್ಣ ಮಾಲೆ, ಶೇಖರ ಚಿರ್ಚಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಂಜೀವ ರೆಡ್ಡಿ ಹಾಸರೆಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>