ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

‘ರಾಮೋತ್ಸವ’ ಭಕ್ತಿಯ ಗಂಗೆಯಲ್ಲಿ ಮಿಂದೇಳಿ: ರಾಜೇಶ್ವರ ಶಿವಾಚಾರ್ಯರು

Published : 18 ಜನವರಿ 2024, 7:20 IST
Last Updated : 18 ಜನವರಿ 2024, 7:20 IST
ಫಾಲೋ ಮಾಡಿ
Comments
50 ಅಡಿ ಎತ್ತರದ ರಾಮನ ಕಟೌಟ್‌
ಕಾರ್ಯಕ್ರಮ ನಡೆಯಲಿರುವ ಸಾಯಿ ಆದರ್ಶ ಶಾಲೆಯ ಮೈದಾನದಲ್ಲಿ 50 ಅಡಿ ಎತ್ತರದ ರಾಮನ ಕಟೌಟ್‌ ನಿರ್ಮಿಸಲಾಗುವುದು. ಜಿಲ್ಲೆಯ ಕಲಾವಿದರೇ ಅದನ್ನು ಮಾಡುತ್ತಿದ್ದಾರೆ. ಇಷ್ಟೇ ಅಲ್ಲ ರಾಮಮಂದಿರ ನಿರ್ಮಾಣದ ಕರ ಸೇವೆ ಮಾಡಿದವರನ್ನು ಕರೆಸಿ ಕಾರ್ಯಕ್ರಮದಲ್ಲಿ ಗೌರವಿಸಲಾಗುವುದು. ಜಿಲ್ಲೆಯಲ್ಲಿ 50ಕ್ಕೂ ಹೆಚ್ಚು ಜನ ಕರ ಸೇವೆ ಮಾಡಿದವರು ಇದ್ದಾರೆ. ಇದರಲ್ಲಿ ಕೆಲವರು ನಿಧನರಾಗಿದ್ದಾರೆ ಎಂದು ತಡೋಳಾ ರಾಜೇಶ್ವರ ಶಿವಾಚಾರ್ಯರು ವಿವರಿಸಿದರು.
ಮನೆಗಳಲ್ಲಿ ದೀಪ ಬೆಳಗಿ
ಭಗವಾ ಧ್ವಜ ಹಾರಿಸಿ ‘ರಾಮನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ದೀಪಾವಳಿ ಹಬ್ಬದ ತರಹ ಆಚರಿಸಬೇಕು. ಪ್ರತಿಯೊಂದು ಮನೆಗಳಲ್ಲಿ ಜ. 21ರಿಂದ 23ರ ವರೆಗೆ ದೀಪ ಬೆಳಗಿಸಬೇಕು. ಮನೆಗಳ ಮೇಲೆ ಎಲ್ಲರೂ ಭಗವಾ ಧ್ವಜ ಹಾರಿಸಬೇಕು. ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಎಲ್ಲರನ್ನೂ ಮಾಧ್ಯಮಗಳ ಮೂಲಕ ಆಹ್ವಾನಿಸುತ್ತಿದ್ದೇವೆ. ವೈಯಕ್ತಿಕವಾಗಿ ಯಾರನ್ನೂ ಆಹ್ವಾನಿಸಲ್ಲ’ ಎಂದು ತಡೋಳಾ ರಾಜೇಶ್ವರ ಶಿವಾಚಾರ್ಯರು ಹೇಳಿದರು.
ಹಿಂದೆ 14 ವರ್ಷ ಈಗ 498 ವರ್ಷ ವನವಾಸ
‘ಹಿಂದೆ ರಾಮ 14 ವರ್ಷ ವನವಾಸ ಅನುಭವಿಸಿದ್ದ. ಈಗ 498 ವರ್ಷ ವನವಾಸ ಆಗಿದೆ. ನಮ್ಮ ದೇಶದಲ್ಲಿ ದೇವಸ್ಥಾನಕ್ಕಾಗಿ ದೊಡ್ಡ ಹೋರಾಟ ನಡೆಯಿತು. ಈಗ ರಾಮಮಂದಿರ ನಿರ್ಮಾಣವಾಗಿದೆ. ಇದಕ್ಕಿಂತ ದೊಡ್ಡ ಪುಣ್ಯ ಬೇರೇನೂ ಇಲ್ಲ’ ಎಂದು ರಾಮಲೀಲಾ ಉತ್ಸವ ಸಮಿತಿ ಮುಖಂಡ ಈಶ್ವರ ಸಿಂಗ್‌ ಠಾಕೂರ್‌ ಹೇಳಿದರು. 498 ವರ್ಷಗಳ ಸುದೀರ್ಘ ಹೋರಾಟ ಮುಗಿದಿದೆ. 1992ರಲ್ಲಿ ಕಳಂಕಿತ ಗುಂಬಜ್‌ ಕೆಡವಿ ಮೂರುವರೆ ಲಕ್ಷ ಕರ ಸೇವಕರು ಪ್ರಾಣ ಕಳೆದುಕೊಂಡಿದ್ದಾರೆ. ರಾಮಮಂದಿರಕ್ಕಾಗಿ ಹಿಂದೆ ದೇಶದಲ್ಲಿ ಲಾಲ್‌ಕೃಷ್ಣ ಅಡ್ವಾಣಿ ಮುರಳಿ ಮನೋಹರ್‌ ಜೋಶಿ ಅಶೋಕ್‌ ಸಿಂಘಾಲ್‌ ಸೇರಿದಂತೆ ಹಲವರು ರಥಯಾತ್ರೆ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಅದರ ಸಂಚಾಲಕರಾಗಿದ್ದರು ಎಂದು ನೆನಪಿಸಿದರು. ‘ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಅಡ್ವಾಣಿಯವರನ್ನು ಕಡೆಗಣಿಸಿದ್ದಾರಲ್ಲ’ ಎಂದು ಪತ್ರಕರ್ತರು ಪ್ರಶ್ನಿಸಿದರು. ಅದಕ್ಕವರು ‘ಈಗ ಆ ವಿಷಯ ಬೇಡ’ ಎಂದು ಜಾರಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT