ಹಿಂದೆ 14 ವರ್ಷ ಈಗ 498 ವರ್ಷ ವನವಾಸ
‘ಹಿಂದೆ ರಾಮ 14 ವರ್ಷ ವನವಾಸ ಅನುಭವಿಸಿದ್ದ. ಈಗ 498 ವರ್ಷ ವನವಾಸ ಆಗಿದೆ. ನಮ್ಮ ದೇಶದಲ್ಲಿ ದೇವಸ್ಥಾನಕ್ಕಾಗಿ ದೊಡ್ಡ ಹೋರಾಟ ನಡೆಯಿತು. ಈಗ ರಾಮಮಂದಿರ ನಿರ್ಮಾಣವಾಗಿದೆ. ಇದಕ್ಕಿಂತ ದೊಡ್ಡ ಪುಣ್ಯ ಬೇರೇನೂ ಇಲ್ಲ’ ಎಂದು ರಾಮಲೀಲಾ ಉತ್ಸವ ಸಮಿತಿ ಮುಖಂಡ ಈಶ್ವರ ಸಿಂಗ್ ಠಾಕೂರ್ ಹೇಳಿದರು. 498 ವರ್ಷಗಳ ಸುದೀರ್ಘ ಹೋರಾಟ ಮುಗಿದಿದೆ. 1992ರಲ್ಲಿ ಕಳಂಕಿತ ಗುಂಬಜ್ ಕೆಡವಿ ಮೂರುವರೆ ಲಕ್ಷ ಕರ ಸೇವಕರು ಪ್ರಾಣ ಕಳೆದುಕೊಂಡಿದ್ದಾರೆ. ರಾಮಮಂದಿರಕ್ಕಾಗಿ ಹಿಂದೆ ದೇಶದಲ್ಲಿ ಲಾಲ್ಕೃಷ್ಣ ಅಡ್ವಾಣಿ ಮುರಳಿ ಮನೋಹರ್ ಜೋಶಿ ಅಶೋಕ್ ಸಿಂಘಾಲ್ ಸೇರಿದಂತೆ ಹಲವರು ರಥಯಾತ್ರೆ ನಡೆಸಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ಅದರ ಸಂಚಾಲಕರಾಗಿದ್ದರು ಎಂದು ನೆನಪಿಸಿದರು. ‘ರಾಮನ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿಯವರು ಅಡ್ವಾಣಿಯವರನ್ನು ಕಡೆಗಣಿಸಿದ್ದಾರಲ್ಲ’ ಎಂದು ಪತ್ರಕರ್ತರು ಪ್ರಶ್ನಿಸಿದರು. ಅದಕ್ಕವರು ‘ಈಗ ಆ ವಿಷಯ ಬೇಡ’ ಎಂದು ಜಾರಿಕೊಂಡರು.