<p><strong>ಬಸವಕಲ್ಯಾಣ: </strong>‘ಯುವಕರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಕಲಬುರ್ಗಿ ಸಬ್ ಇನ್ಸ್ಪೆಕ್ಟರ್ ಯುನೂಸ್ ಮಿಯ್ಯಾ ಹೇಳಿದರು.</p>.<p>ತಾಲ್ಲೂಕಿನ ಅಟ್ಟೂರ್ ಗ್ರಾಮದಲ್ಲಿ ಸಹಾರಾ ಕ್ರಿಕೆಟ್ ತಂಡದಿಂದ ಶನಿವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>‘ಗಿಡ– ಮರಗಳ ನಾಶದಿಂದ ಮಳೆ ಕಡಿಮೆಯಾಗಿದೆ. ತಾಪಮಾನ ಹೆಚ್ಚಿದೆ. ಆಮ್ಲಜನಕದ ಕೊರತೆ ಆಗುತ್ತಿದ್ದು, ನಾನಾ ರೋಗಗಳು ಬರುತ್ತಿವೆ. ಈ ಕಾರಣ ಈಗಲಾದರೂ ಎಚ್ಚೆತ್ತು ಸಸಿ ನೆಡುವಿಕೆ ಕೈಗೊಂಡು ಅರಣ್ಯ ಬೆಳೆಸಬೇಕು’ ಎಂದರು.</p>.<p>ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರಮೇಶ ಮುಗಳಿ, ಮಡಿವಾಳ ಪರೀಟ್ ಮಾತನಾಡಿದರು.</p>.<p>ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ನಿಂಬಾಳೆ, ಶರಣು ಪವಾಡಶೆಟ್ಟಿ, ಶಾಂತಪ್ಪ ಬಿರಬಿಟ್ಟೆ, ಸಚಿನ್ ಲೋಖಂಡೆ, ಅಣ್ಣಬಸವ ಪೋಸ್ತೆ, ಅಂಬರೀಶ ನಿಂಬಾಳೆ, ಸಂಜೀವ ಕರಹರಿ, ಅಶೋಕ ರಾಠೋಡ, ಬಲಭೀಮ, ರೇವಣಸಿದ್ದಪ್ಪ ಇದ್ದರು. ಗ್ರಾಮದಲ್ಲಿ 100 ಸಸಿಗಳನ್ನು ನೆಡಲಾಯಿತು.</p>.<p class="Subhead"><strong>ಸಸಿ ನೆಡುವಿಕೆ: </strong>ತಾಲ್ಲೂಕಿನ ಮಲ್ಲಿಕಾರ್ಜುನ ವಾಡಿಯಲ್ಲಿ ಶನಿವಾರ ನಡೆದ ಪರಿಸರ ದಿನಾಚರಣೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಆವರಣ ಹಾಗೂ ಹೊಲಗಳಲ್ಲಿ ಸಸಿಗಳನ್ನು ನೆಡಲಾಯಿತು.</p>.<p>ಮುಖ್ಯಶಿಕ್ಷಕ ಉಮೇಶ ಪುಣೆ, ವಿಷ್ಣುವರ್ಧನ ಪುಣೆ, ಮಚೇಂದ್ರ, ಪ್ರವೀಣ ಪುಣೆ, ಶ್ರೀಕಾಂತ, ಸಂತೋಷ ಹೆಗಡೆ, ಸಾಯಣ್ಣ, ಶ್ರೀಧರ, ಸಾಯನಅಲಿ, ನಾಗಪ್ಪ, ತಿಪ್ಪಣ್ಣ, ಪ್ರಕಾಶ ಜಮಾದಾರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ: </strong>‘ಯುವಕರು ಪರಿಸರ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಕಲಬುರ್ಗಿ ಸಬ್ ಇನ್ಸ್ಪೆಕ್ಟರ್ ಯುನೂಸ್ ಮಿಯ್ಯಾ ಹೇಳಿದರು.</p>.<p>ತಾಲ್ಲೂಕಿನ ಅಟ್ಟೂರ್ ಗ್ರಾಮದಲ್ಲಿ ಸಹಾರಾ ಕ್ರಿಕೆಟ್ ತಂಡದಿಂದ ಶನಿವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಅವರು ಮಾತನಾಡಿದರು.</p>.<p>‘ಗಿಡ– ಮರಗಳ ನಾಶದಿಂದ ಮಳೆ ಕಡಿಮೆಯಾಗಿದೆ. ತಾಪಮಾನ ಹೆಚ್ಚಿದೆ. ಆಮ್ಲಜನಕದ ಕೊರತೆ ಆಗುತ್ತಿದ್ದು, ನಾನಾ ರೋಗಗಳು ಬರುತ್ತಿವೆ. ಈ ಕಾರಣ ಈಗಲಾದರೂ ಎಚ್ಚೆತ್ತು ಸಸಿ ನೆಡುವಿಕೆ ಕೈಗೊಂಡು ಅರಣ್ಯ ಬೆಳೆಸಬೇಕು’ ಎಂದರು.</p>.<p>ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ರಮೇಶ ಮುಗಳಿ, ಮಡಿವಾಳ ಪರೀಟ್ ಮಾತನಾಡಿದರು.</p>.<p>ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ನಿಂಬಾಳೆ, ಶರಣು ಪವಾಡಶೆಟ್ಟಿ, ಶಾಂತಪ್ಪ ಬಿರಬಿಟ್ಟೆ, ಸಚಿನ್ ಲೋಖಂಡೆ, ಅಣ್ಣಬಸವ ಪೋಸ್ತೆ, ಅಂಬರೀಶ ನಿಂಬಾಳೆ, ಸಂಜೀವ ಕರಹರಿ, ಅಶೋಕ ರಾಠೋಡ, ಬಲಭೀಮ, ರೇವಣಸಿದ್ದಪ್ಪ ಇದ್ದರು. ಗ್ರಾಮದಲ್ಲಿ 100 ಸಸಿಗಳನ್ನು ನೆಡಲಾಯಿತು.</p>.<p class="Subhead"><strong>ಸಸಿ ನೆಡುವಿಕೆ: </strong>ತಾಲ್ಲೂಕಿನ ಮಲ್ಲಿಕಾರ್ಜುನ ವಾಡಿಯಲ್ಲಿ ಶನಿವಾರ ನಡೆದ ಪರಿಸರ ದಿನಾಚರಣೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಆವರಣ ಹಾಗೂ ಹೊಲಗಳಲ್ಲಿ ಸಸಿಗಳನ್ನು ನೆಡಲಾಯಿತು.</p>.<p>ಮುಖ್ಯಶಿಕ್ಷಕ ಉಮೇಶ ಪುಣೆ, ವಿಷ್ಣುವರ್ಧನ ಪುಣೆ, ಮಚೇಂದ್ರ, ಪ್ರವೀಣ ಪುಣೆ, ಶ್ರೀಕಾಂತ, ಸಂತೋಷ ಹೆಗಡೆ, ಸಾಯಣ್ಣ, ಶ್ರೀಧರ, ಸಾಯನಅಲಿ, ನಾಗಪ್ಪ, ತಿಪ್ಪಣ್ಣ, ಪ್ರಕಾಶ ಜಮಾದಾರ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>