ಬೀದರ್: ‘ಧರ್ಮ ಮಾರ್ಗದಲ್ಲಿ ಸಾಗಿದರೆ ಮನುಷ್ಯನಿಗೆ ಸಹಜವಾಗಿಯೇ ಶಾಂತಿ, ನೆಮ್ಮದಿ ದೊರಕುತ್ತದೆ’ ಎಂದು ಆಣದೂರಿನ ವರಜ್ಯೋತಿ ಭಂತೆ ನುಡಿದರು.
ಬ್ಯಾಂಕ್ ಕಾಲೊನಿಯ ಸಿದ್ಧಾರ್ಥ ಬುದ್ಧ ವಿಹಾರದಲ್ಲಿ ಆಯೋಜಿಸಿದ್ದ ವರ್ಷ ವಾಸದ 12ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಪ್ರವಚನ ನೀಡಿದರು.
‘ಪಂಚೇಂದ್ರಿಯಗಳು ವ್ಯಕ್ತಿಯ ಹಿಡಿತದಲ್ಲಿದ್ದರೆ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುತ್ತದೆ. ಸಜ್ಜನ ಸಂಗ ಮಾಡಬೇಕು, ದುಷ್ಟರಿಂದ ದೂರವಾಗಬೇಕು, ಗುರು ಹಿರಿಯರ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು, ಇದರಿಂದ ಜೀವನ ಸುಖವಾಗುತ್ತದೆ’ ಎಂದರು.