ಕಮಲನಗರ: ಖತಗಾಂವ್ ಕ್ರಾಸ್ ಹತ್ತಿರ ಲೋಕಶಾಹಿ ಅಣ್ಣಾ ಭಾವುಸಾಠೆ ವೃತ್ತದಲ್ಲಿನ ಅಣ್ಣಾಭಾವು ಸಾಠೆ ಅವರ ಭಾವಚಿತ್ರ ಹೊಂದಿದ ಫಲಕ ಮತ್ತು ಅದರ ಕಬ್ಬಿಣದ ಪೈಪ್ನ್ನು ಕಿಡಿಗೇಡಿಗಳು ಕಳವು ಮಾಡಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಕರ್ನಾಟಕ ರಾಜ್ಯ ಆದಿ ಜಾಂಬವ ಸಂಘ ತಾಲ್ಲೂಕು ಘಟಕ ವತಿಯಿಂದ ನಿಲೇಶ ಘಾಗರೆ ಅವರು ಕಮಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಿಎಸ್ಐ ತಾನಾಜಿ ಬೆಳಕಟ್ಟೆ ಅವರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
‘ಅಣ್ಣಾ ಭಾವು ಸಾಠೆ ಅವರ ಭಾವಚಿತ್ರಕ್ಕೆ ಅಪಮಾನ ಮಾಡಿದ ಕಿಡಿಗೇಡಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು. 24 ಗಂಟೆ ಒಳಗೆ ಅವರ ಭಾವಚಿತ್ರ ಅಳವಡಿಸಬೇಕು. ಇಲ್ಲದಿದ್ದರೆ, ಹೋರಾಟ ಮಾಡಲಾಗುವುದು’ ಎಂದು ಸಂಘದ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.