ರೈತರ ಆದಾಯ ಹೆಚ್ಚಿಸಲು ಹಾಗೂ ಆಡು ಸಾಕಾಣಿಕೆ ಲಾಭದಾಯಕವಾಗಿಸಲು ತರಬೇತಿ ಹಮ್ಮಿಕೊಳ್ಳಲಾಗಿದೆ. ಆಡು ಉದ್ಯಮದಲ್ಲಿನ ಬದಲಾವಣೆ, ಸಮಗ್ರ ಕೃಷಿ ಪದ್ಧತಿಯಲ್ಲಿ ಆಡು ಸಾಕಾಣಿಕೆ ಮಹತ್ವ, ಸಮತೋಲನ ಆಹಾರ ನಿರ್ವಹಣೆ, ಮೇವಿನ ಬೆಳೆ ಉತ್ಪಾದನೆ, ಅಜೋಲ್ಲಾ ಹಾಗೂ ಲಸಿಕೆ ಪ್ರಾಮುಖ್ಯತೆ ಕುರಿತು ತಜ್ಞ ವಿಜ್ಞಾನಿಗಳು ಹಾಗೂ ಅನುಭವಿ ರೈತರು ಮಾಹಿತಿ ನೀಡಲಿದ್ದಾರೆ ಎಂದು ಹೇಳಿದ್ದಾರೆ.