ಪ್ರಶಸ್ತಿಗೆ ಆಯ್ಕೆಯಾದವರಲ್ಲಿ ಡಾ. ಜಗದೇವಿ ಗಾಯಕವಾಡ(ಸಾಹಿತ್ಯ), ಮಲ್ಲಮ್ಮ ಪಾಟೀಲ ಭಾಲ್ಕಿ (ಶರಣ ಸಾಹಿತ್ಯ), ಸುನೀತಾ ಪಾಟೀಲ (ದೈಹಿಕ ಶಿಕ್ಷಣ), ಸುನೀತಾ ದಾಡಗೆ (ನಾಡು, ನುಡಿ ಸೇವೆ), ಸುಷ್ಮಿತಾ ಮೋರೆ (ಮಾಧ್ಯಮ), ಬುದ್ಧದೇವಿ ಸಂಗಮ (ಶಿಕ್ಷಣ), ಸಾರಿಕಾ ಗಂಗಾ (ಉನ್ನತ ಶಿಕ್ಷಣದಲ್ಲಿ ಸಾಧನೆ) ಮತ್ತು ಸುನೀತಾ ಡೊಣಗಾಂವ (ಸಂಶೋಧನೆ) ಸೇರಿದ್ದಾರೆ ಎಂದು ಹೇಳಿದ್ದಾರೆ.
ನವೆಂಬರ್ 27 ರಂದು ಬೆಳಿಗ್ಗೆ 11ಕ್ಕೆ ನಗರದ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದ್ದಾರೆ.