<p><strong>ಬಸವಕಲ್ಯಾಣ:</strong> ಶರಣು ಸಲಗರ ಅವರ ದಾಖಲೆಗಳಲ್ಲಿನ ಹೆಸರು ಶರಣಬಸಪ್ಪ ಇದ್ದರೂ ‘ಶರಣು’ ಆಗಿ ಬಸವಣ್ಣನವರ ಕಾರ್ಯಕ್ಷೇತ್ರ ಕಲ್ಯಾಣಕ್ಕೆ ಬಂದು ಕೋವಿಡ್ ಲಾಕ್ಡೌನ್ನಲ್ಲಿನ ಸೇವಾ ಕೈಂಕರ್ಯದಿಂದ ಮತದಾರರ ಮನಗೆದ್ದು ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಈ ಕ್ಷೇತ್ರದ 15ನೇ ಶಾಸಕರಾಗಿದ್ದಾರೆ.</p>.<p>ಇವರ ಹುಟ್ಟೂರು ಈ ವಿಧಾನಸಭಾ ಕ್ಷೇತ್ರದ ಗಡಿ ಗ್ರಾಮ ಕೊಹಿನೂರನಿಂದ ಕೇವಲ 2 ಕಿ.ಮೀ. ಅಂತರದಲ್ಲಿರುವ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ವಿ.ಕೆ.ಸಲಗರ. ಆ ಊರಿನ ಹೆಸರನ್ನು ಅಡ್ಡ ಹೆಸರಾಗಿ ಇಟ್ಟುಕೊಂಡು ‘ಶರಣು ಸಲಗರ’ ಆಗಿದ್ದಾರೆ. ಆದರೆ, ಸಲಗರದಲ್ಲಿ ಯಾರಿಗೆ ವಿಚಾರಿಸಿದರೂ ‘ಹಿರೇನಾಗಾಂವ’ ಮನೆತನದವರು ಎಂದೇ ಇವರನ್ನು ಗುರುತಿಸುತ್ತಾರೆ.</p>.<p>ಹಿರೇನಾಗಾಂವ ಗ್ರಾಮವು ಬಸವಕಲ್ಯಾಣ ತಾಲ್ಲೂಕಿನ ಮುಡಬಿ ಹೋಬಳಿಯಲ್ಲಿದೆ. ಇವರ ಪೂರ್ವಜರು ವ್ಯಾಪಾರ ನಿಮಿತ್ತ ಇಲ್ಲಿಂದ ಸಲಗರಗೆ ವಲಸೆ ಹೋಗಿದ್ದರಿಂದ ಅಲ್ಲಿ ಈ ಊರಿನ ಹೆಸರು ಮನೆತನದ ಹೆಸರಾಗಿ ಚಾಲ್ತಿಗೆ ಬಂದಿದೆ. ಆದರೂ, ಹಿರೇನಾಗಾಂವ ಎಂಬ ಅಡ್ಡ ಹೆಸರು ಬಳಸದೆ ಸಲಗರ ಎಂದು ಇಟ್ಟುಕೊಂಡಿದಕ್ಕೆ ಚುನಾವಣೆಯಲ್ಲಿ ಇವರು ಹೊರಗಿನವರು ಎಂಬ ನೆಪ ಮುಂದೆ ಮಾಡಿ ಕೆಲವರು ವ್ಯಕ್ತಪಡಿಸಿದ ಪ್ರಬಲ ವಿರೋಧವನ್ನು ಎದುರಿಸಬೇಕಾಯಿತು.</p>.<p>ಇವರ ಆಯ್ಕೆಯಿಂದ ಮೂರು ಶಾಸಕರನ್ನು ನೀಡಿದ ನೆಲ ಎಂದೇ ಗುರುತಿಸಿಕೊಳ್ಳುವ ಕೊಹಿನೂರ ಮತ್ತು ಸಲಗರ ಹೋಬಳಿಗಳ ಸರಹದ್ದು ಈಗ ನಾಲ್ವರು ಶಾಸಕರ ನೆಲ ಎಂದೇ ಗುರುತಿಸಿಕೊಳ್ಳಲಿದೆ. ಸಲಗರದಿಂದ ಕೇವಲ 3 ಕಿ.ಮೀ ಅಂತರದಲ್ಲಿನ ಅಟ್ಟೂರ್ ಗ್ರಾಮವು ಈ ಕ್ಷೇತ್ರದಲ್ಲಿ ಐದು ಸಲ ಶಾಸಕರಾಗಿದ್ದ ಬಸವರಾಜ ಪಾಟೀಲ ಅಟ್ಟೂರ್ ಅವರ ಊರು. ಅಲ್ಲಿಂದ 2 ಕಿ.ಮೀ ದೂರದ ಬೆಳಮಗಿ ತಾಂಡಾ ಮಾಜಿ ಸಚಿವ ರೇವುನಾಯಕ ಬೆಳಮಗಿ ಅವರ ಸ್ವಂತ ಗ್ರಾಮ. ಅಲ್ಲಿಂದ ಮುಂದೆ 4 ಕಿ.ಮೀ ದಾಟಿದರೆ ಬರುವ ತಡಕಲ್ ಗ್ರಾಮವು ಮಾಜಿ ಸಚಿವ ಸುಭಾಷ ಗುತ್ತೇದಾರ್ ಅವರ ಊರಾಗಿದೆ.</p>.<p>ಇವರ ಪತ್ನಿ ಸಾವಿತ್ರಿ ಸಲಗರ ಅವರು 2016ರಲ್ಲಿ ಕೆಎಎಸ್ ಉತ್ತೀರ್ಣರಾಗಿ ಬಸವಕಲ್ಯಾಣದ ತಹಶೀಲ್ದಾರ್ ಹುದ್ದೆಗೆ ನೇಮಕಗೊಂಡಿದ್ದರಿಂದ ಸಹಜವಾಗಿಯೇ ಈ ಕ್ಷೇತ್ರದ ಜತೆ ಸಂಪರ್ಕ ಇಟ್ಟುಕೊಂಡು ಸಮಾಜಸೇವೆ ಆರಂಭಿಸಿದರು. 2020ರ ಕೋವಿಡ್ ಲಾಕ್ಡೌನ್ ಕಾಲದಲ್ಲಿ ತಾಲ್ಲೂಕಿನ ಹಳ್ಳಿಗಳಿಗೆ ಹೋಗಿ 50 ಸಾವಿರಕ್ಕಿಂತ ಹೆಚ್ಚಿನ ಜನರಿಗೆ ಆಹಾರಧಾನ್ಯ ವಿತರಿಸಿದರಲ್ಲದೆ ಇತರೆ ರೂಪದಲ್ಲಿಯೂ ಸಹಾಯ ಸಹಕಾರ ನೀಡಿದರು.</p>.<p>ಇದೇ ಸಮಯದಲ್ಲಿ ಶಾಸಕ ಬಿ.ನಾರಾಯಣರಾವ್ ಅವರ ನಿಧನ ಆಗಿದ್ದರಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಹತ್ತಾರು ಆಕಾಂಕ್ಷಿಗಳನ್ನು ಹಿಂದಿಕ್ಕಿ ಟಿಕೆಟ್ ಪಡೆದರಲ್ಲದೆ ಚುನಾವಣೆಯಲ್ಲಿ ವಿಜೇತರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಸವಕಲ್ಯಾಣ:</strong> ಶರಣು ಸಲಗರ ಅವರ ದಾಖಲೆಗಳಲ್ಲಿನ ಹೆಸರು ಶರಣಬಸಪ್ಪ ಇದ್ದರೂ ‘ಶರಣು’ ಆಗಿ ಬಸವಣ್ಣನವರ ಕಾರ್ಯಕ್ಷೇತ್ರ ಕಲ್ಯಾಣಕ್ಕೆ ಬಂದು ಕೋವಿಡ್ ಲಾಕ್ಡೌನ್ನಲ್ಲಿನ ಸೇವಾ ಕೈಂಕರ್ಯದಿಂದ ಮತದಾರರ ಮನಗೆದ್ದು ಶಾಸಕರಾಗಿ ಆಯ್ಕೆಗೊಂಡಿದ್ದಾರೆ. ಈ ಕ್ಷೇತ್ರದ 15ನೇ ಶಾಸಕರಾಗಿದ್ದಾರೆ.</p>.<p>ಇವರ ಹುಟ್ಟೂರು ಈ ವಿಧಾನಸಭಾ ಕ್ಷೇತ್ರದ ಗಡಿ ಗ್ರಾಮ ಕೊಹಿನೂರನಿಂದ ಕೇವಲ 2 ಕಿ.ಮೀ. ಅಂತರದಲ್ಲಿರುವ ಕಲಬುರ್ಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ವಿ.ಕೆ.ಸಲಗರ. ಆ ಊರಿನ ಹೆಸರನ್ನು ಅಡ್ಡ ಹೆಸರಾಗಿ ಇಟ್ಟುಕೊಂಡು ‘ಶರಣು ಸಲಗರ’ ಆಗಿದ್ದಾರೆ. ಆದರೆ, ಸಲಗರದಲ್ಲಿ ಯಾರಿಗೆ ವಿಚಾರಿಸಿದರೂ ‘ಹಿರೇನಾಗಾಂವ’ ಮನೆತನದವರು ಎಂದೇ ಇವರನ್ನು ಗುರುತಿಸುತ್ತಾರೆ.</p>.<p>ಹಿರೇನಾಗಾಂವ ಗ್ರಾಮವು ಬಸವಕಲ್ಯಾಣ ತಾಲ್ಲೂಕಿನ ಮುಡಬಿ ಹೋಬಳಿಯಲ್ಲಿದೆ. ಇವರ ಪೂರ್ವಜರು ವ್ಯಾಪಾರ ನಿಮಿತ್ತ ಇಲ್ಲಿಂದ ಸಲಗರಗೆ ವಲಸೆ ಹೋಗಿದ್ದರಿಂದ ಅಲ್ಲಿ ಈ ಊರಿನ ಹೆಸರು ಮನೆತನದ ಹೆಸರಾಗಿ ಚಾಲ್ತಿಗೆ ಬಂದಿದೆ. ಆದರೂ, ಹಿರೇನಾಗಾಂವ ಎಂಬ ಅಡ್ಡ ಹೆಸರು ಬಳಸದೆ ಸಲಗರ ಎಂದು ಇಟ್ಟುಕೊಂಡಿದಕ್ಕೆ ಚುನಾವಣೆಯಲ್ಲಿ ಇವರು ಹೊರಗಿನವರು ಎಂಬ ನೆಪ ಮುಂದೆ ಮಾಡಿ ಕೆಲವರು ವ್ಯಕ್ತಪಡಿಸಿದ ಪ್ರಬಲ ವಿರೋಧವನ್ನು ಎದುರಿಸಬೇಕಾಯಿತು.</p>.<p>ಇವರ ಆಯ್ಕೆಯಿಂದ ಮೂರು ಶಾಸಕರನ್ನು ನೀಡಿದ ನೆಲ ಎಂದೇ ಗುರುತಿಸಿಕೊಳ್ಳುವ ಕೊಹಿನೂರ ಮತ್ತು ಸಲಗರ ಹೋಬಳಿಗಳ ಸರಹದ್ದು ಈಗ ನಾಲ್ವರು ಶಾಸಕರ ನೆಲ ಎಂದೇ ಗುರುತಿಸಿಕೊಳ್ಳಲಿದೆ. ಸಲಗರದಿಂದ ಕೇವಲ 3 ಕಿ.ಮೀ ಅಂತರದಲ್ಲಿನ ಅಟ್ಟೂರ್ ಗ್ರಾಮವು ಈ ಕ್ಷೇತ್ರದಲ್ಲಿ ಐದು ಸಲ ಶಾಸಕರಾಗಿದ್ದ ಬಸವರಾಜ ಪಾಟೀಲ ಅಟ್ಟೂರ್ ಅವರ ಊರು. ಅಲ್ಲಿಂದ 2 ಕಿ.ಮೀ ದೂರದ ಬೆಳಮಗಿ ತಾಂಡಾ ಮಾಜಿ ಸಚಿವ ರೇವುನಾಯಕ ಬೆಳಮಗಿ ಅವರ ಸ್ವಂತ ಗ್ರಾಮ. ಅಲ್ಲಿಂದ ಮುಂದೆ 4 ಕಿ.ಮೀ ದಾಟಿದರೆ ಬರುವ ತಡಕಲ್ ಗ್ರಾಮವು ಮಾಜಿ ಸಚಿವ ಸುಭಾಷ ಗುತ್ತೇದಾರ್ ಅವರ ಊರಾಗಿದೆ.</p>.<p>ಇವರ ಪತ್ನಿ ಸಾವಿತ್ರಿ ಸಲಗರ ಅವರು 2016ರಲ್ಲಿ ಕೆಎಎಸ್ ಉತ್ತೀರ್ಣರಾಗಿ ಬಸವಕಲ್ಯಾಣದ ತಹಶೀಲ್ದಾರ್ ಹುದ್ದೆಗೆ ನೇಮಕಗೊಂಡಿದ್ದರಿಂದ ಸಹಜವಾಗಿಯೇ ಈ ಕ್ಷೇತ್ರದ ಜತೆ ಸಂಪರ್ಕ ಇಟ್ಟುಕೊಂಡು ಸಮಾಜಸೇವೆ ಆರಂಭಿಸಿದರು. 2020ರ ಕೋವಿಡ್ ಲಾಕ್ಡೌನ್ ಕಾಲದಲ್ಲಿ ತಾಲ್ಲೂಕಿನ ಹಳ್ಳಿಗಳಿಗೆ ಹೋಗಿ 50 ಸಾವಿರಕ್ಕಿಂತ ಹೆಚ್ಚಿನ ಜನರಿಗೆ ಆಹಾರಧಾನ್ಯ ವಿತರಿಸಿದರಲ್ಲದೆ ಇತರೆ ರೂಪದಲ್ಲಿಯೂ ಸಹಾಯ ಸಹಕಾರ ನೀಡಿದರು.</p>.<p>ಇದೇ ಸಮಯದಲ್ಲಿ ಶಾಸಕ ಬಿ.ನಾರಾಯಣರಾವ್ ಅವರ ನಿಧನ ಆಗಿದ್ದರಿಂದ ತೆರವಾದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯ ಹತ್ತಾರು ಆಕಾಂಕ್ಷಿಗಳನ್ನು ಹಿಂದಿಕ್ಕಿ ಟಿಕೆಟ್ ಪಡೆದರಲ್ಲದೆ ಚುನಾವಣೆಯಲ್ಲಿ ವಿಜೇತರಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>