<p><strong>ಚಿಟಗುಪ್ಪ</strong>: ‘ಮಣ್ಣು ಎಲ್ಲರ ಬದುಕಿನ ಜೀವನಾಡಿ. ಮಣ್ಣಿನ ಸಂರಕ್ಷಣೆಯಿಂದ ಸಕಲ ಜೀವರಾಶಿಗಳ ಉಳಿವು ಸಾಧ್ಯ’ ಎಂದು ಬೀದರ್ ತೋಟಗಾರಿಕೆ ವಿಸ್ತರಣಾ ಘಟಕದ ಮುಂದಾಳು ಶ್ರೀನಿವಾಸ್.ಎನ್ ಅವರು ತಿಳಿಸಿದರು.</p>.<p>ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಬೀದರ್ನ ತೋಟಗಾರಿಕೆ ವಿಸ್ತರಣಾ ಘಟಕ ಮತ್ತು ಬೀದರ್ನ ಕ್ರಿಯಾಜೆನ್ ಅಗ್ರಿ ಕಂಪನಿ ಸಹಯೋಗದಲ್ಲಿ ನಡೆದ ಮಣ್ಣು-ಆಹಾರದ ಕುರಿತ ರೈತರ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ರೈತರು ಸಾವಯವ ಗೊಬ್ಬರ ಬಳಕೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಎರೆಹುಳುಗಳ ಸಂಖ್ಯೆ ಹೆಚ್ಚಾಗಿ ಬೆಳೆಗಳಿಗೆ ಹೆಚ್ಚಿನ ಪೌಷ್ಟಿಕಾಂಶ ಲಭಿಸುತ್ತದೆ ಎಂದರು.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷ ಕಿರಣ, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಪ್ರವೀಣ ನಾಯಿಕೊಡಿ ಮಾತನಾಡಿದರು.</p>.<p>ಪ್ರಶಾಂತ ರಡ್ಡಿ, ಡಾ.ಎಂ.ಡಿ.ಫಾರೂಕ್, ಡಾ.ಅರುಣ ಕುಮಾರ್, ಕೃಷಿ ಅಧಿಕಾರಿ ನೀಲಾಂಬಿಕಾ, ಮಾರುತಿ, ರೈತರಾದ ಶಂಕರರಾವ್ ಪಾಟೀಲ, ಯಾಮಾರಡ್ಡಿ, ಶರಣು ಕಾಶೆಂಪೂರ, ಸುನೀಲ ರಡ್ಡಿ ಹಾಗೂ ದೀಪಕ್ ರಡ್ಡಿ ಇದ್ದರು. ಡಾ.ಎ.ಜಿ.ಪಾಟೀಲ ಸ್ವಾಗತಿಸಿದರು. ಡಾ.ಪ್ರಶಾಂತ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಟಗುಪ್ಪ</strong>: ‘ಮಣ್ಣು ಎಲ್ಲರ ಬದುಕಿನ ಜೀವನಾಡಿ. ಮಣ್ಣಿನ ಸಂರಕ್ಷಣೆಯಿಂದ ಸಕಲ ಜೀವರಾಶಿಗಳ ಉಳಿವು ಸಾಧ್ಯ’ ಎಂದು ಬೀದರ್ ತೋಟಗಾರಿಕೆ ವಿಸ್ತರಣಾ ಘಟಕದ ಮುಂದಾಳು ಶ್ರೀನಿವಾಸ್.ಎನ್ ಅವರು ತಿಳಿಸಿದರು.</p>.<p>ವಿಶ್ವ ಮಣ್ಣು ದಿನಾಚರಣೆ ಅಂಗವಾಗಿ ತಾಲ್ಲೂಕಿನ ನಿರ್ಣಾ ಗ್ರಾಮದಲ್ಲಿ ಬಾಗಲಕೋಟೆ ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯ, ಬೀದರ್ನ ತೋಟಗಾರಿಕೆ ವಿಸ್ತರಣಾ ಘಟಕ ಮತ್ತು ಬೀದರ್ನ ಕ್ರಿಯಾಜೆನ್ ಅಗ್ರಿ ಕಂಪನಿ ಸಹಯೋಗದಲ್ಲಿ ನಡೆದ ಮಣ್ಣು-ಆಹಾರದ ಕುರಿತ ರೈತರ ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ರೈತರು ಸಾವಯವ ಗೊಬ್ಬರ ಬಳಕೆ ಮಾಡುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಎರೆಹುಳುಗಳ ಸಂಖ್ಯೆ ಹೆಚ್ಚಾಗಿ ಬೆಳೆಗಳಿಗೆ ಹೆಚ್ಚಿನ ಪೌಷ್ಟಿಕಾಂಶ ಲಭಿಸುತ್ತದೆ ಎಂದರು.</p>.<p>ಗ್ರಾಮ ಪಂಚಾಯಿತಿ ಅಧ್ಯಕ್ಷ ಕಿರಣ, ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ ಹಾಗೂ ಸಹಾಯಕ ಪ್ರಾಧ್ಯಾಪಕ ಡಾ.ಪ್ರವೀಣ ನಾಯಿಕೊಡಿ ಮಾತನಾಡಿದರು.</p>.<p>ಪ್ರಶಾಂತ ರಡ್ಡಿ, ಡಾ.ಎಂ.ಡಿ.ಫಾರೂಕ್, ಡಾ.ಅರುಣ ಕುಮಾರ್, ಕೃಷಿ ಅಧಿಕಾರಿ ನೀಲಾಂಬಿಕಾ, ಮಾರುತಿ, ರೈತರಾದ ಶಂಕರರಾವ್ ಪಾಟೀಲ, ಯಾಮಾರಡ್ಡಿ, ಶರಣು ಕಾಶೆಂಪೂರ, ಸುನೀಲ ರಡ್ಡಿ ಹಾಗೂ ದೀಪಕ್ ರಡ್ಡಿ ಇದ್ದರು. ಡಾ.ಎ.ಜಿ.ಪಾಟೀಲ ಸ್ವಾಗತಿಸಿದರು. ಡಾ.ಪ್ರಶಾಂತ್ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>