ಬೀದರ್: ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಜಿಲ್ಲೆಯ ಸುವಿತ್ ಸೂರ್ಯಕಾಂತ ಮೋರೆ ಸೇರಿ ಮೂವರಿಗೆ ಕರ್ನಾಟಕ ಯೂತ್ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಕೊಡಲಾಗುವ ಕ್ರೀಡಾರತ್ನ ರಾಜ್ಯ ಪ್ರಶಸ್ತಿ ಲಭಿಸಿದೆ.
ಯೋಗೇಶ್ವರಿ ಸ್ವಾಮಿ ಹಾಗೂ ಮಣಿರತ್ನ ಮಲ್ಲಿಕಾರ್ಜುನ ಮನ್ನಳ್ಳಿ ಪ್ರಶಸ್ತಿಗೆ ಭಾಜನರಾದ ಇತರ ಇಬ್ಬರು.
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಅಭಿನವ ಶ್ರೀಕಂಠ ಸ್ವಾಮೀಜಿ, ಡಾ.ಜಿ.ಸದಾನಂದ ಸ್ವಾಮಿ, ಅಸೋಸಿಯೇಷನ್ ಸಂಸ್ಥಾಪಕ ಡಾ.ಎ.ಪಿ.ಶ್ರೀನಾಥ ಹಾಗೂ ಕಾರ್ಯದರ್ಶಿ ಬಾಬು ಇದ್ದರು.