ಸಂಸದರು ಕಷ್ಟಕಾಲದಲ್ಲಿರುವ ಬಡ ಕೂಲಿಕಾರರು, ಕೃಷಿ ಕಾರ್ಮಿಕರು, ಬೀದಿ ವ್ಯಾಪಾರಿಗಳು, ವಾಹನ ಚಾಲಕರ ಸಮಸ್ಯೆಗೆ ಸ್ಪಂದಿಸಲು ಯತ್ನಿಸಬೇಕಿತ್ತು. ಜವಾಬ್ದಾರಿಯಿಂದ ನುಣುಚಿಕೊಳ್ಳಲು ಇಂತಹ ಮಾರ್ಗ ಹುಡುಕಿಕೊಂಡಿರುವುದು ಖಂಡನೀಯ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲಾಕ್ಡೌನ್ ನಂತರ ಬೀದಿಯ ಬದಿಗೆ ಬದುಕುವವರ ಸ್ಥಿತಿ ಏನಾಗಿದೆ, ದಿನಗೂಲಿಗಳ ಕುಟುಂಬದ ನಿರ್ವಹಣೆ ಹೇಗೆ?, ಎನ್ನುವುದನ್ನು ಅರಿಯಲು ಜನಪ್ರತಿನಿಧಿಗಳು ಒಮ್ಮೆ ಮನೆಯಿಂದ ಹೊರಬರಲಿ, ಇವರೆಲ್ಲರ ಹಸಿವಿನ ಜೋಳಿಗೆ ತುಂಬಿಸುವ ನಿಟ್ಟಿನಲ್ಲಿ ಒಮ್ಮೆ ಯೋಚಿಸಲಿ ಎಂದು ಜಿಲ್ಲಾ ಕಲಾವಿದರ ಬಳಗದ ಅಧ್ಯಕ್ಷ ವಿಜಯಕುಮಾರ್ ಸೋನಾರೆ ಮನವಿ ಮಾಡಿದ್ದಾರೆ.