<p><strong>ಬೀದರ್</strong>: ಸಾಮಾನ್ಯವಾಗಿ ಮಳೆಗಾಲದಲ್ಲಿ ಶುರುವಾಗುತ್ತಿದ್ದ ಶಾಲೆಗಳು ಈ ಬಾರಿ ಬೇಸಿಗೆಯಲ್ಲೇ ಆರಂಭವಾಗಿವೆ. ಪಾಲಕರು ಕೆಂಡದಂತಹ ಬಿಸಿಲಿನಲ್ಲಿ ಮಕ್ಕಳನ್ನು ಶಾಲೆಗೆ ಹೇಗೆ ಕಳಿಸುವುದು ಎನ್ನುವ ಆತಂಕದಲ್ಲಿದ್ದರು. ಆದರೆ, ಸೂರ್ಯದೇವ ಮೋಡದಲ್ಲಿ ಅವಿತುಕೊಂಡರೆ, ವರುಣದೇವರು ಮಳೆಯ ಸಿಂಚನ ಮಾಡಿ ಮಕ್ಕಳು ಸಂಭ್ರಮದೊಂದಿಗೆ ಶಾಲೆಗೆ ಬರಲು ಅನುವು ಮಾಡಿಕೊಟ್ಟರು.</p>.<p>ಮಕ್ಕಳು ಅಚ್ಚುಕಟ್ಟಾಗಿ ಸಮವಸ್ತ್ರ ಧರಿಸಿ ತಂಪಾದ ವಾತಾವರಣದಲ್ಲಿ ಖುಷಿಯಿಂದ ಶಾಲೆಯತ್ತ ಹೆಜ್ಜೆ ಹಾಕಿದರು. ಕೆಲ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಆವರಣದಲ್ಲಿ ಶಿಕ್ಷಕಿಯರು ಅಂದದ ರಂಗೋಲಿ ಬಿಡಿಸಿದ್ದರು.</p>.<p>ಮಕ್ಕಳಲ್ಲಿ ಉತ್ಸಾಹ ತುಂಬಲು ಶಾಲಾ ಸಿಬ್ಬಂದಿ ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳ ಮೇಲೆ ಹೂಮಳೆ ಗರೆದರು. ಮಕ್ಕಳು ಸರತಿ ಸಾಲಿನಲ್ಲಿ ಬಂದು ಕೊಠಡಿಗಳಿಗೆ ತೆರಳಿದರು.</p>.<p>ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಸರಸ್ವತಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿ ನಾಡಗೀತೆ ಹಾಡಿದರು. ಕೆಲ ಶಾಲೆಗಳಲ್ಲಿ ಮೊದಲ ದಿನವೇ ಮಕ್ಕಳಿಗೆ ನೋಟ್ಬುಕ್, ಪೆನ್ ಹಾಗೂ ಪೆನ್ಸಿಲ್ ವಿತರಿಸಿದ್ದರಿಂದ ಮಕ್ಕಳು ಅವುಗಳನ್ನು ಪಡೆದು ಖುಷಿಪಟ್ಟರು.</p>.<p>ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆ ಸಿಹಿ ವಿತರಿಸಲಾಯಿತು. ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಬಾಳೆಹಣ್ಣು ಕೊಡಲಾಯಿತು. ಶಾಲೆಗಳಲ್ಲಿ ಬೇಸಿಗೆ ಮುಗಿಯಿತು ಬಾ ಹೋಗೋಣ ಶಾಲೆಗೆ ಎಂದು ಬ್ಯಾನರ್ ಬರೆಯಲಾಗಿತ್ತು.</p>.<p>ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಣಪತಿ ಬಾರಾಟಕ್ಕೆ, ಜಿಲ್ಲೆಯ ಆಯಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ವಿಷಯ ಪರಿವೀಕ್ಷಕರು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.</p>.<p><strong>ಜನಸೇವಾ ಶಾಲೆ: ವಿದ್ಯಾರ್ಥಿಗಳಿಗೆ ಅಪೂರ್ವ ಸ್ವಾಗತ</strong></p>.<p>2022-23ನೇ ಶೈಕ್ಷಣಿಕ ವರ್ಷದ ಮೊದಲ ದಿನವಾದ ಸೋಮವಾರ ಇಲ್ಲಿಯ ಪ್ರತಾಪನಗರದ ಜನಸೇವಾ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಪೂರ್ವ ಸ್ವಾಗತ ನೀಡಲಾಯಿತು.<br />ಶಾಲೆಗೆ ಬಂದ ವಿದ್ಯಾರ್ಥಿಗಳ ಮೇಲೆ ಆಡಳಿತ ಮಂಡಳಿ ಸದಸ್ಯರು, ಅತಿಥಿಗಳು ಹಾಗೂ ಶಿಕ್ಷಕರು ಪುಷ್ಪ ವೃಷ್ಟಿ ಮಾಡಿ, ಸ್ವಾಗತಿಸಿ ಬರಮಾಡಿಕೊಂಡರು.<br />ಇದಕ್ಕೂ ಮುನ್ನ ವಿದ್ಯಾರ್ಥಿಗಳಿಂದ ಗೋ ಪೂಜೆ ನಡೆಯಿತು. ಮೊದಲ ದಿನವನ್ನು ವಿದ್ಯಾರ್ಥಿಗಳು ಆಟೋಟ, ಸಾಂಸ್ಕøತಿಕ ಚಟುವಟಿಕೆ ಮೊದಲಾದವುಗಳಲ್ಲೇ ಸಂಭ್ರಮದಿಂದ ಕಳೆದರು.</p>.<p class="Subhead"><strong>ಶಾಲೆ ಕಾರ್ಯ ಶ್ಲಾಘನೀಯ:</strong></p>.<p>ಶಾಲಾ ಆರಂಭೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಬೀದರ್ ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರ, ಗುಣಮಟ್ಟದ ಶಿಕ್ಷಣದ ಜತೆಗೆ ಮಕ್ಕಳಲ್ಲಿ ಭಾರತೀಯ ಸಂಸ್ಕøತಿ ಬೆಳೆಸುತ್ತಿರುವ ಜನಸೇವಾ ಶಾಲೆ ಕಾರ್ಯ ಶ್ಲಾಘನೀಯವಾಗಿದೆ. ಇಂಥ ಶಾಲೆಗಳ ಹೆಚ್ಚು ಹೆಚ್ಚು ಅವಶ್ಯಕತೆ ಇದೆ ಎಂದರು.<br />ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.<br />ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದೇ ಶಾಲೆಯ ಧ್ಯೇಯವಾಗಿದೆ. ಶಾಲೆಯಲ್ಲಿ ಗುರುಕುಲ ಪದ್ಧತಿಯ ಶಿಕ್ಷಣ ನೀಡಲಾತ್ತಿದೆ. ಮಕ್ಕಳಿಗೆ ಅಕ್ಷರ ಜ್ಞಾನದೊಂದಿಗೆ ಭಾರತೀಯ ಸಂಸ್ಕೃತಿ, ಸಾಮಾಜಿಕ ಹೊಣೆಗಾರಿಕೆಯ ಅರಿವನ್ನೂ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.<br />ಹಾಸ್ಯ ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ಅವರು ಒಂದೂವರೆ ತಾಸು ನಗೆ ಚಟಾಕಿಗಳನ್ನು ಹಾರಿಸಿದರು. ನಗೆ ಹನಿಗಳ ಮೂಲಕವೇ ಕನ್ನಡ ನೆಲ, ಜಲ, ಭಾಷೆಯ ಶ್ರೇಷ್ಠತೆಯನ್ನು ಮನವರಿಕೆ ಮಾಡಿದರು.<br />ಶಾಲೆಯ ಅಧ್ಯಕ್ಷ ಬಸವರಾಜ ಸ್ವಾಮಿ, ಹಿರಿಯ ಸದಸ್ಯರಾದ ಬಿ.ಎಸ್. ಕುದುರೆ, ಶಿವರಾಜ ಹುಡೇದ್, ಆಡಳಿತಾಧಿಕಾರಿ ಸೌಭಾಗ್ಯವತಿ, ಶಿಕ್ಷಕರಾದ ರಾಹುಲ್, ಕಾಶೀನಾಥ ಪಂಢರಾಪುರಕರ್ ಇದ್ದರು.<br />ರೇಣುಕಾ ನಿರೂಪಿಸಿದರು. ಮುಖ್ಯಶಿಕ್ಷಕ ಶಿವಾನಂದ ಮಲ್ಲ ವಂದಿಸಿದರು.</p>.<p>* *</p>.<p class="Briefhead"><strong>ಗುಲಾಬಿ ಹೂಕೊಟ್ಟು ಮಕ್ಕಳನ್ನು ಬರಮಾಡಿಕೊಂಡ ಶಿಕ್ಷಕರು</strong></p>.<p>ಬೀದರ್: ನಗರದ ಚಿದಂಬರ ಶಿಕ್ಷಣ ಸಂಸ್ಥೆ ಸಂಚಾಲಿತ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯಲ್ಲಿ ಮೊದಲ ದಿನ ಶಾಲೆಗೆ ಬಂದ ಮಕ್ಕಳಿಗೆ ಶಿಕ್ಷಕರು ಗುಲಾಬಿ ಹೂ ಕೊಟ್ಟು ಬರಮಾಡಿಕೊಂಡರು.</p>.<p>ಶಿಕ್ಷಕರು ಶಾಲೆ ಮುಖ್ಯದ್ವಾರದಲ್ಲೇ ನಿಂತುಕೊಂಡು, ಮಕ್ಕಳ ಮೇಲೆ ಹೂ ಮಳೆ ಸುರಿಸಿ, ಅವರಿಗೆ ಗುಲಾಬಿ ಹೂ ಕೊಟ್ಟು ಸ್ವಾಗತ ಕೋರಿದರು. ಮಕ್ಕಳು ಉತ್ಸಾಹದಿಂದಲೇ ವರ್ಗ ಕೋಣೆಗಳತ್ತ ಹೆಜ್ಜೆ ಹಾಕಿದರು.</p>.<p class="Subhead"><strong>ಕಲಿಕಾ ಚೇತರಿಕೆ ವರ್ಷಾಚರಣೆ:</strong></p>.<p>2022-23ನೇ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಈ ವರ್ಷ ಮಕ್ಕಳ ಕಲಿಕೆ ಚೇತರಿಕೆಗೆ ಸರ್ವ ಪ್ರಯತ್ನ ಮಾಡಲಾಗುವುದು ಎಂದು ಶಾಲೆಯಲ್ಲಿ ನಡೆದ ಶಾಲಾ ಆರಂಭೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ಹೇಳಿದರು.</p>.<p>ಕೋವಿಡ್ ಸಂದರ್ಭದಲ್ಲೂ ಶಾಲೆ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ ಎಂದು ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಎಸ್.ಎಂ. ಐನಾಪುರ ನುಡಿದರು.</p>.<p>ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಚಂದ್ರಪ್ಪ ಭತಮುರ್ಗೆ, ಶಾಂತಕುಮಾರ ರಗಟೆ, ನಿರ್ಮಲಾ ಕುಲಕರ್ಣಿ, ಕಾಶೀನಾಥ ಸಂಖ್, ಸತ್ಯವಾನ್ ಭೋಸ್ಲೆ, ಸಾಗರ್, ನಾಗನಾಥ, ನಾಗಪ್ಪ, ಶರಣಪ್ಪ ಪಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್</strong>: ಸಾಮಾನ್ಯವಾಗಿ ಮಳೆಗಾಲದಲ್ಲಿ ಶುರುವಾಗುತ್ತಿದ್ದ ಶಾಲೆಗಳು ಈ ಬಾರಿ ಬೇಸಿಗೆಯಲ್ಲೇ ಆರಂಭವಾಗಿವೆ. ಪಾಲಕರು ಕೆಂಡದಂತಹ ಬಿಸಿಲಿನಲ್ಲಿ ಮಕ್ಕಳನ್ನು ಶಾಲೆಗೆ ಹೇಗೆ ಕಳಿಸುವುದು ಎನ್ನುವ ಆತಂಕದಲ್ಲಿದ್ದರು. ಆದರೆ, ಸೂರ್ಯದೇವ ಮೋಡದಲ್ಲಿ ಅವಿತುಕೊಂಡರೆ, ವರುಣದೇವರು ಮಳೆಯ ಸಿಂಚನ ಮಾಡಿ ಮಕ್ಕಳು ಸಂಭ್ರಮದೊಂದಿಗೆ ಶಾಲೆಗೆ ಬರಲು ಅನುವು ಮಾಡಿಕೊಟ್ಟರು.</p>.<p>ಮಕ್ಕಳು ಅಚ್ಚುಕಟ್ಟಾಗಿ ಸಮವಸ್ತ್ರ ಧರಿಸಿ ತಂಪಾದ ವಾತಾವರಣದಲ್ಲಿ ಖುಷಿಯಿಂದ ಶಾಲೆಯತ್ತ ಹೆಜ್ಜೆ ಹಾಕಿದರು. ಕೆಲ ಶಾಲೆಗಳನ್ನು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಆವರಣದಲ್ಲಿ ಶಿಕ್ಷಕಿಯರು ಅಂದದ ರಂಗೋಲಿ ಬಿಡಿಸಿದ್ದರು.</p>.<p>ಮಕ್ಕಳಲ್ಲಿ ಉತ್ಸಾಹ ತುಂಬಲು ಶಾಲಾ ಸಿಬ್ಬಂದಿ ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳ ಮೇಲೆ ಹೂಮಳೆ ಗರೆದರು. ಮಕ್ಕಳು ಸರತಿ ಸಾಲಿನಲ್ಲಿ ಬಂದು ಕೊಠಡಿಗಳಿಗೆ ತೆರಳಿದರು.</p>.<p>ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳು ಸರಸ್ವತಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿ ನಾಡಗೀತೆ ಹಾಡಿದರು. ಕೆಲ ಶಾಲೆಗಳಲ್ಲಿ ಮೊದಲ ದಿನವೇ ಮಕ್ಕಳಿಗೆ ನೋಟ್ಬುಕ್, ಪೆನ್ ಹಾಗೂ ಪೆನ್ಸಿಲ್ ವಿತರಿಸಿದ್ದರಿಂದ ಮಕ್ಕಳು ಅವುಗಳನ್ನು ಪಡೆದು ಖುಷಿಪಟ್ಟರು.</p>.<p>ಕೆಲ ಶಾಲೆಗಳಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜತೆ ಸಿಹಿ ವಿತರಿಸಲಾಯಿತು. ಎಲ್ಲ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳಿಗೆ ಬಾಳೆಹಣ್ಣು ಕೊಡಲಾಯಿತು. ಶಾಲೆಗಳಲ್ಲಿ ಬೇಸಿಗೆ ಮುಗಿಯಿತು ಬಾ ಹೋಗೋಣ ಶಾಲೆಗೆ ಎಂದು ಬ್ಯಾನರ್ ಬರೆಯಲಾಗಿತ್ತು.</p>.<p>ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಗಣಪತಿ ಬಾರಾಟಕ್ಕೆ, ಜಿಲ್ಲೆಯ ಆಯಾ ತಾಲ್ಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ವಿಷಯ ಪರಿವೀಕ್ಷಕರು ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.</p>.<p><strong>ಜನಸೇವಾ ಶಾಲೆ: ವಿದ್ಯಾರ್ಥಿಗಳಿಗೆ ಅಪೂರ್ವ ಸ್ವಾಗತ</strong></p>.<p>2022-23ನೇ ಶೈಕ್ಷಣಿಕ ವರ್ಷದ ಮೊದಲ ದಿನವಾದ ಸೋಮವಾರ ಇಲ್ಲಿಯ ಪ್ರತಾಪನಗರದ ಜನಸೇವಾ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಪೂರ್ವ ಸ್ವಾಗತ ನೀಡಲಾಯಿತು.<br />ಶಾಲೆಗೆ ಬಂದ ವಿದ್ಯಾರ್ಥಿಗಳ ಮೇಲೆ ಆಡಳಿತ ಮಂಡಳಿ ಸದಸ್ಯರು, ಅತಿಥಿಗಳು ಹಾಗೂ ಶಿಕ್ಷಕರು ಪುಷ್ಪ ವೃಷ್ಟಿ ಮಾಡಿ, ಸ್ವಾಗತಿಸಿ ಬರಮಾಡಿಕೊಂಡರು.<br />ಇದಕ್ಕೂ ಮುನ್ನ ವಿದ್ಯಾರ್ಥಿಗಳಿಂದ ಗೋ ಪೂಜೆ ನಡೆಯಿತು. ಮೊದಲ ದಿನವನ್ನು ವಿದ್ಯಾರ್ಥಿಗಳು ಆಟೋಟ, ಸಾಂಸ್ಕøತಿಕ ಚಟುವಟಿಕೆ ಮೊದಲಾದವುಗಳಲ್ಲೇ ಸಂಭ್ರಮದಿಂದ ಕಳೆದರು.</p>.<p class="Subhead"><strong>ಶಾಲೆ ಕಾರ್ಯ ಶ್ಲಾಘನೀಯ:</strong></p>.<p>ಶಾಲಾ ಆರಂಭೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಬೀದರ್ ಗ್ರಾಮೀಣ ಸಿಪಿಐ ಶ್ರೀಕಾಂತ ಅಲ್ಲಾಪುರ, ಗುಣಮಟ್ಟದ ಶಿಕ್ಷಣದ ಜತೆಗೆ ಮಕ್ಕಳಲ್ಲಿ ಭಾರತೀಯ ಸಂಸ್ಕøತಿ ಬೆಳೆಸುತ್ತಿರುವ ಜನಸೇವಾ ಶಾಲೆ ಕಾರ್ಯ ಶ್ಲಾಘನೀಯವಾಗಿದೆ. ಇಂಥ ಶಾಲೆಗಳ ಹೆಚ್ಚು ಹೆಚ್ಚು ಅವಶ್ಯಕತೆ ಇದೆ ಎಂದರು.<br />ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ಕನ್ನಡ ಮಾಧ್ಯಮದ ಶಾಲೆಗಳನ್ನು ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದು ಹೇಳಿದರು.<br />ಜನಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ರೇವಣಸಿದ್ದಪ್ಪ ಜಲಾದೆ ಮಾತನಾಡಿ, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವುದೇ ಶಾಲೆಯ ಧ್ಯೇಯವಾಗಿದೆ. ಶಾಲೆಯಲ್ಲಿ ಗುರುಕುಲ ಪದ್ಧತಿಯ ಶಿಕ್ಷಣ ನೀಡಲಾತ್ತಿದೆ. ಮಕ್ಕಳಿಗೆ ಅಕ್ಷರ ಜ್ಞಾನದೊಂದಿಗೆ ಭಾರತೀಯ ಸಂಸ್ಕೃತಿ, ಸಾಮಾಜಿಕ ಹೊಣೆಗಾರಿಕೆಯ ಅರಿವನ್ನೂ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.<br />ಹಾಸ್ಯ ಕಲಾವಿದ ವೈಜಿನಾಥ ಸಜ್ಜನಶೆಟ್ಟಿ ಅವರು ಒಂದೂವರೆ ತಾಸು ನಗೆ ಚಟಾಕಿಗಳನ್ನು ಹಾರಿಸಿದರು. ನಗೆ ಹನಿಗಳ ಮೂಲಕವೇ ಕನ್ನಡ ನೆಲ, ಜಲ, ಭಾಷೆಯ ಶ್ರೇಷ್ಠತೆಯನ್ನು ಮನವರಿಕೆ ಮಾಡಿದರು.<br />ಶಾಲೆಯ ಅಧ್ಯಕ್ಷ ಬಸವರಾಜ ಸ್ವಾಮಿ, ಹಿರಿಯ ಸದಸ್ಯರಾದ ಬಿ.ಎಸ್. ಕುದುರೆ, ಶಿವರಾಜ ಹುಡೇದ್, ಆಡಳಿತಾಧಿಕಾರಿ ಸೌಭಾಗ್ಯವತಿ, ಶಿಕ್ಷಕರಾದ ರಾಹುಲ್, ಕಾಶೀನಾಥ ಪಂಢರಾಪುರಕರ್ ಇದ್ದರು.<br />ರೇಣುಕಾ ನಿರೂಪಿಸಿದರು. ಮುಖ್ಯಶಿಕ್ಷಕ ಶಿವಾನಂದ ಮಲ್ಲ ವಂದಿಸಿದರು.</p>.<p>* *</p>.<p class="Briefhead"><strong>ಗುಲಾಬಿ ಹೂಕೊಟ್ಟು ಮಕ್ಕಳನ್ನು ಬರಮಾಡಿಕೊಂಡ ಶಿಕ್ಷಕರು</strong></p>.<p>ಬೀದರ್: ನಗರದ ಚಿದಂಬರ ಶಿಕ್ಷಣ ಸಂಸ್ಥೆ ಸಂಚಾಲಿತ ಶ್ರೀಮತಿ ಇಂದಿರಾಬಾಯಿ ಗುರುತಪ್ಪ ಶೆಟಕಾರ್ ಪ್ರೌಢಶಾಲೆಯಲ್ಲಿ ಮೊದಲ ದಿನ ಶಾಲೆಗೆ ಬಂದ ಮಕ್ಕಳಿಗೆ ಶಿಕ್ಷಕರು ಗುಲಾಬಿ ಹೂ ಕೊಟ್ಟು ಬರಮಾಡಿಕೊಂಡರು.</p>.<p>ಶಿಕ್ಷಕರು ಶಾಲೆ ಮುಖ್ಯದ್ವಾರದಲ್ಲೇ ನಿಂತುಕೊಂಡು, ಮಕ್ಕಳ ಮೇಲೆ ಹೂ ಮಳೆ ಸುರಿಸಿ, ಅವರಿಗೆ ಗುಲಾಬಿ ಹೂ ಕೊಟ್ಟು ಸ್ವಾಗತ ಕೋರಿದರು. ಮಕ್ಕಳು ಉತ್ಸಾಹದಿಂದಲೇ ವರ್ಗ ಕೋಣೆಗಳತ್ತ ಹೆಜ್ಜೆ ಹಾಕಿದರು.</p>.<p class="Subhead"><strong>ಕಲಿಕಾ ಚೇತರಿಕೆ ವರ್ಷಾಚರಣೆ:</strong></p>.<p>2022-23ನೇ ಶೈಕ್ಷಣಿಕ ವರ್ಷವನ್ನು ಕಲಿಕಾ ಚೇತರಿಕೆ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಈ ವರ್ಷ ಮಕ್ಕಳ ಕಲಿಕೆ ಚೇತರಿಕೆಗೆ ಸರ್ವ ಪ್ರಯತ್ನ ಮಾಡಲಾಗುವುದು ಎಂದು ಶಾಲೆಯಲ್ಲಿ ನಡೆದ ಶಾಲಾ ಆರಂಭೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಶಿಕ್ಷಕ ಲಕ್ಷ್ಮಣ ಪೂಜಾರಿ ಹೇಳಿದರು.</p>.<p>ಕೋವಿಡ್ ಸಂದರ್ಭದಲ್ಲೂ ಶಾಲೆ ಶಿಕ್ಷಕರು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದ್ದಾರೆ ಎಂದು ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ಉಪನ್ಯಾಸಕ ಎಸ್.ಎಂ. ಐನಾಪುರ ನುಡಿದರು.</p>.<p>ಚಂದ್ರಪ್ಪ ಗೌರಶೆಟ್ಟಿ ಪದವಿಪೂರ್ವ ಕಾಲೇಜು ಪ್ರಾಚಾರ್ಯ ಡಾ. ಚಂದ್ರಪ್ಪ ಭತಮುರ್ಗೆ, ಶಾಂತಕುಮಾರ ರಗಟೆ, ನಿರ್ಮಲಾ ಕುಲಕರ್ಣಿ, ಕಾಶೀನಾಥ ಸಂಖ್, ಸತ್ಯವಾನ್ ಭೋಸ್ಲೆ, ಸಾಗರ್, ನಾಗನಾಥ, ನಾಗಪ್ಪ, ಶರಣಪ್ಪ ಪಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>