<p><strong>ಬೀದರ್: </strong>‘ಜೀವನದಲ್ಲಿ ಎದುರಾಗುವ ಕಷ್ಟಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ. ಕಷ್ಟಗಳಿಗೆ ಹೆದರದೆ ಧೈರ್ಯ, ಸಾಹಸ, ಸತತ ಪ್ರಯತ್ನದಿಂದ ಮುನ್ನಡೆಯಬೇಕು’ ಎಂದು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಗೀತಾ ಎಸ್. ಗಡ್ಡಿ ತಿಳಿಸಿದರು.</p>.<p>ಸಮಾಜ ಸೇವಾ ಸಮಿತಿಯ ಶಾಖೆಯ ವತಿಯಿಂದ ಕುಂಬಾರವಾಡ ರಸ್ತೆಯಲ್ಲಿರುವ ಕರುನಾಡು ಸಾಂಸ್ಕೃತಿಕ ಭವನದಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತ ಆಯೋಜಿಸಿದ್ದ ’ಮಹಿಳಾ ಜಾಗೃತಿ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸಾಹಿತಿ ರೇಣುಕಾ ಎನ್.ಬಿ. ಮಾತನಾಡಿ, ‘ಪುರುಷರ ಸಹಕಾರದಿಂದ ಮಹಿಳೆಯರ ಸಬಲೀಕರಣ ಸಾಧ್ಯ. ದುಡಿಯುವ ಸಾಮರ್ಥ್ಯ ಮಹಿಳೆಯರನ್ನು ಆತ್ಮವಿಶ್ವಾಸದೆಡೆಗೆ ಕರೆದುಕೊಂಡು ಹೋಗುತ್ತದೆ’ ಎಂದರು.</p>.<p>ಮುಖ್ಯ ಅತಿಥಿಗಳಾಗಿದ್ದ ಹಿರಿಯ ಚಿಂತಕ ರಾಮಕೃಷ್ಣ ಸಾಳೆ ಹಾಗೂ ಹಿರಿಯ ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಮಾತನಾಡಿದರು. ವೈದ್ಯೆ ಡಾ.ಎ.ಸಿ.ಲಲಿತಮ್ಮ ಅಧ್ಯಕ್ಷತೆ ವಹಿಸಿದ್ದರು.</p>.<p>ನೀಲಮ್ಮ ಮಸೂದಿ-ಅರ್ಚನಾ ಮಸೂದಿ, ಶಶಿಕಲಾ ಕೊಡಿಮನಿ-ರತಿದೇವಿ ಕೊಡಿಮನಿ, ನರಸಮ್ಮ ಧರಮಗೊಂಡ-ಸವಿತಾ ಧರಮಗೊಂಡ, ಉತ್ತಮ ಶಿಕ್ಷಕ ದಂಪತಿ ಸರೂಬಾಯಿ-ಶಿವರಾಜ ಶ್ರೀಮಂಗಲೆ, ಅನ್ನಪೂರ್ಣ-ರಘನಾಥ ಮೇತ್ರೆ, ಸುಮಂಗಲಾ-ರಾಚಯ್ಯ ಸ್ವಾಮಿ, ಶ್ರೀದೇವಿ-ಧನರಾಜ್ ಕುಮಾರಚಿಂಚೊಳೆ, ಶ್ರೀಲತಾ- ಸಂಜೀವಕುಮಾರ ಅತಿವಾಳೆ, ಉತ್ತಮ ಶಿಕ್ಷಕ ಶಿವಶಂಕರಯ್ಯ ಸ್ವಾಮಿ, ದೇವಿಂದ್ರ ಡಿಗ್ಗಿ, ವೈಜಿನಾಥ ಬಾಬಶೆಟ್ಟೆ, ಶರಣಪ್ಪ ನಾಗೋರಾ, ಶಾರದಾ ಗಡಮೆ, ಇಂದುಮತಿ ಹತ್ತೆ, ವಿದ್ಯಾವತಿ ನೌಬಾದೆ, ಸರಿತಾ ಹುಡಗಿಕರ್, ಹರಿಯಾಲಾಬಾಯಿ ವಾಲೆ, ಭಾನುಪ್ರಿಯ ಅರಳಿ, ಶೋಭಾ ಜಕ್ಕಾ, ಅನುರಾಧಾ ಜಗದೀಶ ಅವರನ್ನು ಸನ್ಮಾನಿಸಲಾಯಿತು.</p>.<p>ಸೃಜನ್ಯ ಅತಿವಾಳೆ, ಯುಕ್ತಿ ಅರಳಿ, ದೀಪ್ತಿ ಸ್ವಾಮಿ ಪ್ರಾರ್ಥನೆ ಗೀತೆ ಹಾಡಿದರು. ಮಹಾದೇವಿ ಬಿರಾದಾರ ಸ್ವಾಗತಿಸಿದರು, ಶ್ರೀಲತಾ ಅತಿವಾಳೆ ನಿರೂಪಿಸಿದರು, ಶಾರದಾ ಗಡಮೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್: </strong>‘ಜೀವನದಲ್ಲಿ ಎದುರಾಗುವ ಕಷ್ಟಗಳು ನಮ್ಮನ್ನು ಗಟ್ಟಿಗೊಳಿಸುತ್ತವೆ. ಕಷ್ಟಗಳಿಗೆ ಹೆದರದೆ ಧೈರ್ಯ, ಸಾಹಸ, ಸತತ ಪ್ರಯತ್ನದಿಂದ ಮುನ್ನಡೆಯಬೇಕು’ ಎಂದು ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿ ಗೀತಾ ಎಸ್. ಗಡ್ಡಿ ತಿಳಿಸಿದರು.</p>.<p>ಸಮಾಜ ಸೇವಾ ಸಮಿತಿಯ ಶಾಖೆಯ ವತಿಯಿಂದ ಕುಂಬಾರವಾಡ ರಸ್ತೆಯಲ್ಲಿರುವ ಕರುನಾಡು ಸಾಂಸ್ಕೃತಿಕ ಭವನದಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ತ ಆಯೋಜಿಸಿದ್ದ ’ಮಹಿಳಾ ಜಾಗೃತಿ’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಸಾಹಿತಿ ರೇಣುಕಾ ಎನ್.ಬಿ. ಮಾತನಾಡಿ, ‘ಪುರುಷರ ಸಹಕಾರದಿಂದ ಮಹಿಳೆಯರ ಸಬಲೀಕರಣ ಸಾಧ್ಯ. ದುಡಿಯುವ ಸಾಮರ್ಥ್ಯ ಮಹಿಳೆಯರನ್ನು ಆತ್ಮವಿಶ್ವಾಸದೆಡೆಗೆ ಕರೆದುಕೊಂಡು ಹೋಗುತ್ತದೆ’ ಎಂದರು.</p>.<p>ಮುಖ್ಯ ಅತಿಥಿಗಳಾಗಿದ್ದ ಹಿರಿಯ ಚಿಂತಕ ರಾಮಕೃಷ್ಣ ಸಾಳೆ ಹಾಗೂ ಹಿರಿಯ ಜಾನಪದ ಕಲಾವಿದ ಶಂಭುಲಿಂಗ ವಾಲ್ದೊಡ್ಡಿ ಮಾತನಾಡಿದರು. ವೈದ್ಯೆ ಡಾ.ಎ.ಸಿ.ಲಲಿತಮ್ಮ ಅಧ್ಯಕ್ಷತೆ ವಹಿಸಿದ್ದರು.</p>.<p>ನೀಲಮ್ಮ ಮಸೂದಿ-ಅರ್ಚನಾ ಮಸೂದಿ, ಶಶಿಕಲಾ ಕೊಡಿಮನಿ-ರತಿದೇವಿ ಕೊಡಿಮನಿ, ನರಸಮ್ಮ ಧರಮಗೊಂಡ-ಸವಿತಾ ಧರಮಗೊಂಡ, ಉತ್ತಮ ಶಿಕ್ಷಕ ದಂಪತಿ ಸರೂಬಾಯಿ-ಶಿವರಾಜ ಶ್ರೀಮಂಗಲೆ, ಅನ್ನಪೂರ್ಣ-ರಘನಾಥ ಮೇತ್ರೆ, ಸುಮಂಗಲಾ-ರಾಚಯ್ಯ ಸ್ವಾಮಿ, ಶ್ರೀದೇವಿ-ಧನರಾಜ್ ಕುಮಾರಚಿಂಚೊಳೆ, ಶ್ರೀಲತಾ- ಸಂಜೀವಕುಮಾರ ಅತಿವಾಳೆ, ಉತ್ತಮ ಶಿಕ್ಷಕ ಶಿವಶಂಕರಯ್ಯ ಸ್ವಾಮಿ, ದೇವಿಂದ್ರ ಡಿಗ್ಗಿ, ವೈಜಿನಾಥ ಬಾಬಶೆಟ್ಟೆ, ಶರಣಪ್ಪ ನಾಗೋರಾ, ಶಾರದಾ ಗಡಮೆ, ಇಂದುಮತಿ ಹತ್ತೆ, ವಿದ್ಯಾವತಿ ನೌಬಾದೆ, ಸರಿತಾ ಹುಡಗಿಕರ್, ಹರಿಯಾಲಾಬಾಯಿ ವಾಲೆ, ಭಾನುಪ್ರಿಯ ಅರಳಿ, ಶೋಭಾ ಜಕ್ಕಾ, ಅನುರಾಧಾ ಜಗದೀಶ ಅವರನ್ನು ಸನ್ಮಾನಿಸಲಾಯಿತು.</p>.<p>ಸೃಜನ್ಯ ಅತಿವಾಳೆ, ಯುಕ್ತಿ ಅರಳಿ, ದೀಪ್ತಿ ಸ್ವಾಮಿ ಪ್ರಾರ್ಥನೆ ಗೀತೆ ಹಾಡಿದರು. ಮಹಾದೇವಿ ಬಿರಾದಾರ ಸ್ವಾಗತಿಸಿದರು, ಶ್ರೀಲತಾ ಅತಿವಾಳೆ ನಿರೂಪಿಸಿದರು, ಶಾರದಾ ಗಡಮೆ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>