<p><strong>ಬೀದರ್:</strong> ಜಿಲ್ಲೆಯ ವಿವಿಧೆಡೆ ಭಾನುವಾರ ಜಿಟಿ ಜಿಟಿ ಮಳೆಯಾಗಿದೆ. ಬೀದರ್, ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ, ಹುಲಸೂರು, ಕಮಲನಗರ ತಾಲ್ಲೂಕಿನ ವಿವಿಧೆಡೆ ಮಳೆ ಸುರಿದಿದೆ.</p>.<p>ಮಧ್ಯಾಹ್ನ ಮೋಡ ಕವಿದ ವಾತಾವರಣ ನಿರ್ಮಾಣಗೊಂಡಿತು. ಗುಡುಗು, ಮಿಂಚು ಕಾಣಿಸಿಕೊಂಡ ನಂತರ ಮಳೆ ಆರಂಭವಾಯಿತು.</p>.<p>ಬೀದರ್ ತಾಲ್ಲೂಕಿನ ಕಾಶೆಂಪೂರ್ (ಪಿ)ದಲ್ಲಿ ಹೊಲದ ಕೆಲಸ ಮಾಡುವಾಗ ಸಿಡಿಲು ಬಡಿದು ಚಿದಾನಂದ ಬಂಡೆಪ್ಪ (40) ಶನಿವಾರ ಮೃತಪಟ್ಟಿದ್ದಾರೆ.</p>.<p>ಕಮಲನಗರ ತಾಲ್ಲೂಕಿನ ಧನಸಿಂಗ್ ತಾಂಡಾದಲ್ಲಿ ಭಾನುವಾರ ಹೊಲದಲ್ಲಿನ ಕಸಕಡ್ಡಿಗಳನ್ನು ಸ್ವಚ್ಛ ಮಾಡುತ್ತಿರುವಾಗ ವಿಜಯಕುಮಾರ ಶಂಕರ್ ರಾಠೋಡ್ (34) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಠಾಣಾಕುಶನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಕಮಲನಗರ ತಾಲ್ಲೂಕಿನ ಮುಧೋಳ (ಬಿ) ಗ್ರಾಮದ ಹೊರವಲಯದಲ್ಲಿ ಬಸವರಾಜ ಜ್ಞಾನೋಬಾ ಕೋಳಿ ಅವರ 9 ಆಡುಗಳು ಸಿಡಿಲು ಬಡಿದು ಸಾವನ್ನಪಿವೆ.</p>.<p>‘ಮುಧೋಳ(ಬಿ) ಗ್ರಾಮದ ಕುರಿಗಾಯಿ ಬಸವರಾಜ ಅವರು ಸೇರಿದ 30 ಆಡುಗಳನ್ನು ತೋರಣಾ-ಮುಧೋಳ ಗ್ರಾಮದ ಮಧ್ಯ ಮೇಯಿಸಲು ಹೋದಾಗ ಮಳೆ ಬಂದಿದೆ. ಮರದ ಕೆಳಗಡೆ ಆಸರೆ ಪಡೆದಾಗ ಸಿಡಿಲು ಬಡಿದು 9 ಆಡುಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಗಜಾನಂದ ವಟಗೆ ತಿಳಿಸಿದ್ದಾರೆ.</p>.<p>ಘಟನಾ ಸ್ಥಳಕ್ಕೆ ಠಾಣಾಕುಶನುರು ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಠಾಣಾಕುಶನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p class="Briefhead"><strong>ಸಿಡಿಲಿಗೆ ಆಕಳು, ಎತ್ತು, ಹೋರಿ ಬಲಿ</strong></p>.<p>ಭಾಲ್ಕಿ: ತಾಲ್ಲೂಕಿನ ಜೀರಗ್ಯಾಳ ಗ್ರಾಮದ ಆಕಳು ಮತ್ತು ಇಂಚೂರ ಗ್ರಾಮದ ಎತ್ತು ಹಾಗೂ ಹೋರಿ ಭಾನುವಾರ ಸಿಡಿಲಿಗೆ ಬಲಿಯಾಗಿವೆ.</p>.<p>ಜೀರಗ್ಯಾಳ ಗ್ರಾಮದ ಬಾಬುರಾವ್ ಭಾವುರಾವ್ ಟೇಕಳೆ ಅವರಿಗೆ ಸೇರಿದ್ದ ಅಂದಾಜು ₹50 ಸಾವಿರ ಮೌಲ್ಯದ ಆಕಳನ್ನು ಹೊಲದಲ್ಲಿ ಗಿಡದ ಆಸರೆಯಲ್ಲಿ ಕಟ್ಟಲಾಗಿತ್ತು. ಇಂಚೂರ ಗ್ರಾಮದ ರೈತ ದೇವಿದಾಸ ನಾರಾಯಣರಾವ್ ಬಿರಾದಾರ ಅವರಿಗೆ ಸೇರಿದ್ದ 60 ಸಾವಿರ ಮೌಲ್ಯದ ಎತ್ತು ಮತ್ತು ₹50 ಸಾವಿರಹೋರಿ ಸಿಡಿಲಿಗೆ ಬಲಿಯಾಗಿವೆ.</p>.<p>ಮೇಹಕರ ಪೋಲಿಸ್ ಠಾಣೆಯ ಪಿಎಸ್ಐ ನಂದಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮೇಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> ಜಿಲ್ಲೆಯ ವಿವಿಧೆಡೆ ಭಾನುವಾರ ಜಿಟಿ ಜಿಟಿ ಮಳೆಯಾಗಿದೆ. ಬೀದರ್, ಭಾಲ್ಕಿ, ಹುಮನಾಬಾದ್, ಬಸವಕಲ್ಯಾಣ, ಹುಲಸೂರು, ಕಮಲನಗರ ತಾಲ್ಲೂಕಿನ ವಿವಿಧೆಡೆ ಮಳೆ ಸುರಿದಿದೆ.</p>.<p>ಮಧ್ಯಾಹ್ನ ಮೋಡ ಕವಿದ ವಾತಾವರಣ ನಿರ್ಮಾಣಗೊಂಡಿತು. ಗುಡುಗು, ಮಿಂಚು ಕಾಣಿಸಿಕೊಂಡ ನಂತರ ಮಳೆ ಆರಂಭವಾಯಿತು.</p>.<p>ಬೀದರ್ ತಾಲ್ಲೂಕಿನ ಕಾಶೆಂಪೂರ್ (ಪಿ)ದಲ್ಲಿ ಹೊಲದ ಕೆಲಸ ಮಾಡುವಾಗ ಸಿಡಿಲು ಬಡಿದು ಚಿದಾನಂದ ಬಂಡೆಪ್ಪ (40) ಶನಿವಾರ ಮೃತಪಟ್ಟಿದ್ದಾರೆ.</p>.<p>ಕಮಲನಗರ ತಾಲ್ಲೂಕಿನ ಧನಸಿಂಗ್ ತಾಂಡಾದಲ್ಲಿ ಭಾನುವಾರ ಹೊಲದಲ್ಲಿನ ಕಸಕಡ್ಡಿಗಳನ್ನು ಸ್ವಚ್ಛ ಮಾಡುತ್ತಿರುವಾಗ ವಿಜಯಕುಮಾರ ಶಂಕರ್ ರಾಠೋಡ್ (34) ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಠಾಣಾಕುಶನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ಕಮಲನಗರ ತಾಲ್ಲೂಕಿನ ಮುಧೋಳ (ಬಿ) ಗ್ರಾಮದ ಹೊರವಲಯದಲ್ಲಿ ಬಸವರಾಜ ಜ್ಞಾನೋಬಾ ಕೋಳಿ ಅವರ 9 ಆಡುಗಳು ಸಿಡಿಲು ಬಡಿದು ಸಾವನ್ನಪಿವೆ.</p>.<p>‘ಮುಧೋಳ(ಬಿ) ಗ್ರಾಮದ ಕುರಿಗಾಯಿ ಬಸವರಾಜ ಅವರು ಸೇರಿದ 30 ಆಡುಗಳನ್ನು ತೋರಣಾ-ಮುಧೋಳ ಗ್ರಾಮದ ಮಧ್ಯ ಮೇಯಿಸಲು ಹೋದಾಗ ಮಳೆ ಬಂದಿದೆ. ಮರದ ಕೆಳಗಡೆ ಆಸರೆ ಪಡೆದಾಗ ಸಿಡಿಲು ಬಡಿದು 9 ಆಡುಗಳು ಸ್ಥಳದಲ್ಲಿಯೇ ಸಾವನ್ನಪ್ಪಿವೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಗಜಾನಂದ ವಟಗೆ ತಿಳಿಸಿದ್ದಾರೆ.</p>.<p>ಘಟನಾ ಸ್ಥಳಕ್ಕೆ ಠಾಣಾಕುಶನುರು ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಠಾಣಾಕುಶನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p class="Briefhead"><strong>ಸಿಡಿಲಿಗೆ ಆಕಳು, ಎತ್ತು, ಹೋರಿ ಬಲಿ</strong></p>.<p>ಭಾಲ್ಕಿ: ತಾಲ್ಲೂಕಿನ ಜೀರಗ್ಯಾಳ ಗ್ರಾಮದ ಆಕಳು ಮತ್ತು ಇಂಚೂರ ಗ್ರಾಮದ ಎತ್ತು ಹಾಗೂ ಹೋರಿ ಭಾನುವಾರ ಸಿಡಿಲಿಗೆ ಬಲಿಯಾಗಿವೆ.</p>.<p>ಜೀರಗ್ಯಾಳ ಗ್ರಾಮದ ಬಾಬುರಾವ್ ಭಾವುರಾವ್ ಟೇಕಳೆ ಅವರಿಗೆ ಸೇರಿದ್ದ ಅಂದಾಜು ₹50 ಸಾವಿರ ಮೌಲ್ಯದ ಆಕಳನ್ನು ಹೊಲದಲ್ಲಿ ಗಿಡದ ಆಸರೆಯಲ್ಲಿ ಕಟ್ಟಲಾಗಿತ್ತು. ಇಂಚೂರ ಗ್ರಾಮದ ರೈತ ದೇವಿದಾಸ ನಾರಾಯಣರಾವ್ ಬಿರಾದಾರ ಅವರಿಗೆ ಸೇರಿದ್ದ 60 ಸಾವಿರ ಮೌಲ್ಯದ ಎತ್ತು ಮತ್ತು ₹50 ಸಾವಿರಹೋರಿ ಸಿಡಿಲಿಗೆ ಬಲಿಯಾಗಿವೆ.</p>.<p>ಮೇಹಕರ ಪೋಲಿಸ್ ಠಾಣೆಯ ಪಿಎಸ್ಐ ನಂದಕುಮಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮೇಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>