ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಮಾಶೆಟ್ಟೆ ಮಾತನಾಡಿ, ‘ಕೋವಿಡ್ 2ನೇ ಅಲೆ ಪ್ರಾರಂಭ ಆದಾಗಿನಿಂದ ಶಾಸಕ ಖಂಡ್ರೆ ಕೋವಿಡ್ ರೋಗಿಗಳ ಉತ್ತಮ ಉಪಚಾರಕ್ಕಾಗಿ ಅವಿರತ ಶ್ರಮಿಸುತ್ತಿದ್ದಾರೆ. ಹಗಲು, ರಾತ್ರಿ ಸಚಿವರು, ಉನ್ನತ ಅಧಿಕಾರಿಗಳು, ಜಿಲ್ಲೆಯ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು, ವೈದ್ಯರ ಜೊತೆ ಸಂಪರ್ಕದಲ್ಲಿದ್ದು, ಸೋಂಕಿತರ ಕಷ್ಟಕ್ಕೆ ಸ್ಪಂದಿಸುತ್ತಿದ್ದಾರೆ. ಈಗ ತಾಲ್ಲೂಕು ಆಸ್ಪತ್ರೆಗೆ ಎರಡು ಸುಸಜ್ಜಿತ ಆಂಬುಲೆನ್ಸ್ ಉಚಿತವಾಗಿ ಸಲ್ಲಿಸಿದ್ದಾರೆ’ ಎಂದರು.