<p><strong>ಹುಲಸೂರ:</strong> ‘ತನ್ನ ಅಂತರಂಗದ ಬೆಳಕಿನಿಂದ ತನ್ನ ತಾ ಕಾಣಬೇಕು ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.</p>.<p>ಹುಲಸೂರ ತಾಲ್ಲೂಕಿನ ಲಿಂಗಾಯತ ಮಹಾಮಠ ಗೋರ್ಟಾ (ಬಿ ) ಗ್ರಾಮದಲ್ಲಿ ಶ್ರಾವಣ ಮಾಸದ ಶರಣರ ಜೀವನ ದರ್ಶನ ಪ್ರವಚನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>‘ಅರಿವು ನಮಗಾಗಲೆಂದೇ ಶರಣರು ನಮಗೆ ವಚನಗಳು ಹಾಗೂ ಇಷ್ಟ ಲಿಂಗವನ್ನು ಕೊಟ್ಟಿದ್ದಾರೆ. ಇಷ್ಟಲಿಂಗ ಅರಿವಿನ ಕುರುಹು, ವಚನಗಳು ಬದುಕಿನ ದಾರಿದೀಪ’ ಎಂದು ಹೇಳಿದರು.</p>.<p>ಕಾರ್ಯಕ್ರಮದ ಮುಖ್ಯ ಅತಿಥಿ ಚನ್ನಬಸಪ್ಪ ಪತಂಗೆ ಮಾತನಾಡಿ, ‘ನಮ್ಮ ಶ್ರೀಮಠವು ಕರ್ನಾಟಕಕ್ಕೆ ಮಾದರಿ. ಎಲ್ಲಾ ಕಡೆ ಶ್ರಾವಣ ಮಾಸದಲ್ಲಿ ಪ್ರವಚನಕಾರರನ್ನು ಕರೆಸಿ ಪ್ರವಚನಗಳನ್ನು ಮಾಡಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಗುರುಗಳು ನೀಲಮ್ಮನ ಬಳಗದ ತಾಯಂದಿರಿಂದ ಚಿಂತನೆ ಮಾಡುವುದನ್ನು ಹಾಕಿ ಕೊಟ್ಟು ಮಾದರಿಯ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ’ ಎಂದರು.</p>.<p>ಬಸವರಾಜ ಕಣಜೆಯವರು ಮಾತನಾಡಿದರು. ಕಾರ್ಯಕ್ರಮದ ಷಟಸ್ಥಲ ಧ್ವಜಾರೋಹಣವನ್ನು ಮಲ್ಲಮ್ಮ ಸುಭಾಷ ಪತಂಗೆ ನೆರವೇರಿಸಿದರು. ಉದ್ಘಾಟನೆಯನ್ನು ನಿವೃತ್ತ ಶಿಕ್ಷಕ ಬಸವರಾಜ ಮಾಶೆಟ್ಟಿ ನಡೆಸಿಕೊಟ್ಟರು.</p>.<p>ಲಿಂಗಾಯತ ಮಹಾಮಠದ ಗೋದಾವರಿ ತಾಯಿ, ವಿಮಲಾಬಾಯಿ ಪೊಲೀಸ್ ಪಾಟೀಲ, ಸುರೇಖಾ ವೀರಶೆಟ್ಟಿ ರಾಜೋಳೆ ಉಪಸ್ಥಿತರಿದ್ದರು. ಪ್ರಜ್ವಲ್ ರಾಜೋಳೆ ಸ್ವಾಗತಿಸಿದರು. ಪ್ರಜ್ವಲ್ ಪತಂಗೆ ನಿರೂಪಿಸಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಲಸೂರ:</strong> ‘ತನ್ನ ಅಂತರಂಗದ ಬೆಳಕಿನಿಂದ ತನ್ನ ತಾ ಕಾಣಬೇಕು ಎಂದು ಲಿಂಗಾಯತ ಮಹಾಮಠದ ಪ್ರಭುದೇವ ಸ್ವಾಮೀಜಿ ಹೇಳಿದರು.</p>.<p>ಹುಲಸೂರ ತಾಲ್ಲೂಕಿನ ಲಿಂಗಾಯತ ಮಹಾಮಠ ಗೋರ್ಟಾ (ಬಿ ) ಗ್ರಾಮದಲ್ಲಿ ಶ್ರಾವಣ ಮಾಸದ ಶರಣರ ಜೀವನ ದರ್ಶನ ಪ್ರವಚನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>‘ಅರಿವು ನಮಗಾಗಲೆಂದೇ ಶರಣರು ನಮಗೆ ವಚನಗಳು ಹಾಗೂ ಇಷ್ಟ ಲಿಂಗವನ್ನು ಕೊಟ್ಟಿದ್ದಾರೆ. ಇಷ್ಟಲಿಂಗ ಅರಿವಿನ ಕುರುಹು, ವಚನಗಳು ಬದುಕಿನ ದಾರಿದೀಪ’ ಎಂದು ಹೇಳಿದರು.</p>.<p>ಕಾರ್ಯಕ್ರಮದ ಮುಖ್ಯ ಅತಿಥಿ ಚನ್ನಬಸಪ್ಪ ಪತಂಗೆ ಮಾತನಾಡಿ, ‘ನಮ್ಮ ಶ್ರೀಮಠವು ಕರ್ನಾಟಕಕ್ಕೆ ಮಾದರಿ. ಎಲ್ಲಾ ಕಡೆ ಶ್ರಾವಣ ಮಾಸದಲ್ಲಿ ಪ್ರವಚನಕಾರರನ್ನು ಕರೆಸಿ ಪ್ರವಚನಗಳನ್ನು ಮಾಡಿಸುತ್ತಿರುವ ಈ ಸಂದರ್ಭದಲ್ಲಿ ನಮ್ಮ ಗುರುಗಳು ನೀಲಮ್ಮನ ಬಳಗದ ತಾಯಂದಿರಿಂದ ಚಿಂತನೆ ಮಾಡುವುದನ್ನು ಹಾಕಿ ಕೊಟ್ಟು ಮಾದರಿಯ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ’ ಎಂದರು.</p>.<p>ಬಸವರಾಜ ಕಣಜೆಯವರು ಮಾತನಾಡಿದರು. ಕಾರ್ಯಕ್ರಮದ ಷಟಸ್ಥಲ ಧ್ವಜಾರೋಹಣವನ್ನು ಮಲ್ಲಮ್ಮ ಸುಭಾಷ ಪತಂಗೆ ನೆರವೇರಿಸಿದರು. ಉದ್ಘಾಟನೆಯನ್ನು ನಿವೃತ್ತ ಶಿಕ್ಷಕ ಬಸವರಾಜ ಮಾಶೆಟ್ಟಿ ನಡೆಸಿಕೊಟ್ಟರು.</p>.<p>ಲಿಂಗಾಯತ ಮಹಾಮಠದ ಗೋದಾವರಿ ತಾಯಿ, ವಿಮಲಾಬಾಯಿ ಪೊಲೀಸ್ ಪಾಟೀಲ, ಸುರೇಖಾ ವೀರಶೆಟ್ಟಿ ರಾಜೋಳೆ ಉಪಸ್ಥಿತರಿದ್ದರು. ಪ್ರಜ್ವಲ್ ರಾಜೋಳೆ ಸ್ವಾಗತಿಸಿದರು. ಪ್ರಜ್ವಲ್ ಪತಂಗೆ ನಿರೂಪಿಸಿದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>