ದೇವಸ್ಥಾನದಲ್ಲಿ ಬೆಳಿಗ್ಗೆ ಸುಪ್ರಭಾತ, ವಿಶೇಷ ಅಭಿಷೇಕ, ಪುಷ್ಪಾಲಂಕಾರ, ಕಮಲ ಪುಷ್ಪ ಯಾಗದ ಸಂಕಲ್ಪ, ಸಾಮೂಹಿಕ ಸತ್ಯನಾರಾಯಣ ವೃತ, ಮಧ್ಯಾಹ್ನ ಪುಷ್ಪ ಯಾಗದ ಪೂರ್ಣಾಹುತಿ, ಮಹಾ ಮಂಗಳಾರತಿ, ಸಾಮೂಹಿಕ ಭಗವದ್ಗೀತೆ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ, ಸಂಜೆ ಪಾಂಡುರಂಗ ಮಹಾರಾಜರಿಂದ ಭಜನೆ, ಕೀರ್ತನೆ ಮತ್ತಿತರ ಕಾರ್ಯಕ್ರಮಗಳು ಜರುಗಿದವು. ಲಕ್ಷ್ಮಿ ಸತ್ಯನಾರಾಯಣ ಚಾರಿಟಬಲ್ ಟ್ರಸ್ಟ್ ಮತ್ತು ಲಕ್ಷ್ಮಿ ಸತ್ಯನಾರಾಯಣ ಗೋಶಾಲೆ ಟ್ರಸ್ಟ್ ಅಧ್ಯಕ್ಷ ಪ್ರಭಾಕರ ಮೈಲಾಪುರ, ನರಸಿಂಹ ವಾಸುದೇವ ದೀಕ್ಷಿತ ಭಾಗವಹಿಸಿದ್ದರು. ಅನಂತಶಯನ ಮಂದಿರದಲ್ಲಿಯೂ ಆಚರಿಸಲಾಯಿತು.