ಭಾಲ್ಕಿ: ಪಟ್ಟಣದಲ್ಲಿ ಭಾನುವಾರ ಯುವ ಬ್ರಿಗೇಡ್ ಸದಸ್ಯರು ಭಾಲ್ಕೇಶ್ವರ ಮಂದಿರ, ಸಾಯಿ ಮಂದಿರ, ಕುಂಭೇಶ್ವರ, ಸಂಗಮೇಶ್ವರ ಹಾಗೂ ಹನುಮಾನ ಮಂದಿರದಲ್ಲಿ, ಅಕ್ಕಪಕ್ಕ ಬೀಸಾಡಿದ ಹಾಳಾದ ದೇವರ ಭಾವಚಿತ್ರಗಳನ್ನು ಸಂಗ್ರಹಿಸಿ ಸೂಕ್ತ ವಿಲೇವಾರಿ ಮಾಡುವುದರ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.
ಕಣ ಕಣದಲ್ಲೂ ಶಿವ ಎಂಬ ಕಾರ್ಯಕ್ರಮದಡಿ ಎಲ್ಲೆಂದರಲ್ಲಿ ಬಿಸಾಡಿದ ಫೋಟೋಗಳನ್ನು ಸೂಕ್ತ ವಿಲೇವಾರಿ ಮಾಡಿ, ಅಲ್ಲಿ ಒಂದು ಸಸಿ ನೆಟ್ಟು ಅದರಲ್ಲಿಯೇ ಶಿವನನ್ನು ಕಾಣುವ ನಿಜವಾದ ಸಾಮಾಜಿಕ ಕಳಕಳಿ ಇಟ್ಟುಕೊಂಡಿದೆ.