<p><strong>ಕೊಳ್ಳೇಗಾಲ:</strong> ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದವರಿಗೆ ₹ 10 ಸಾವಿರ ದಂಡ, ಮಾರುವವರ ಪತ್ತೆ ಹಚ್ವಿಕೊಟ್ಟವರಿಗೆ ₹ 5 ಸಾವಿರ ಬಹುಮಾನವನ್ನು ನೀಡಲಾಗುವುದು ಎಂದು ಇಲ್ಲಿನ ಗ್ರಾಮಸ್ಥರು ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ.</p>.<p>ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಬೀದಿಯಲ್ಲಿ ಕುಲಸ್ಥರ ಸಮ್ಮುಖದಲ್ಲಿ ಯಜಮಾನರು ಅಕ್ರಮ ಮದ್ಯ ಮಾರಾಟವನ್ನು ನಿಷೇಧಿಸಿ ತೀರ್ಮಾನ ಕೈಗೊಂಡಿದ್ದಾರೆ. ಗ್ರಾಮದ ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಯುವಕರ ಸಂಘದ ದೂರಿನನ್ವಯ ಗ್ರಾಮದಲ್ಲಿ ಕುಲಸ್ಥರ ಸಮ್ಮುಖದಲ್ಲಿ ಯಜಮಾನ ಚಾಮರಾಜು, ಲಕ್ಷ್ಮಣ ಸ್ವಾಮಿ, ಧರ್ಮರತ್ನಾಕರ, ಕಾಂತರಾಜು, ಮಾದಯ್ಯ, ಮಹೇಂದ್ರ, ಶ್ರೀನಿವಾಸ್, ಎಂ.ಮಹದೇವ, ಸಿ.ಎಂ.ಮಹದೇವ, ಲಿಂಗರಾಜು, ದೊರೆಸ್ವಾಮಿ ಸೇರಿ ಇತರರು ಸಭೆ ಸೇರಿ ಈ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.</p>.<p>ಆಗೊಂದು ವೇಳೆ ನಿಷೇಧ ತೀರ್ಮಾನ ಉಲ್ಲಂಘಿಸಿ ಅಕ್ರಮವಾಗಿ ಮನೆಯಲ್ಲಿ, ಮದ್ಯ ಮಾರಾಟ ಮಾಡುವ ಕಿರಾಣಿ ಅಂಗಡಿಯವರಿಗೆ ₹ 10 ಸಾವಿರ ದಂಡ ವಿಧಿಸಲಾಗುತ್ತದೆ. ಜಗಳ ಮಾಡಿದವರಿಗೆ ₹ 5 ಸಾವಿರ ದಂಡ ಹಾಗೂ ಮಾಲು ಸಮೇತ ಅಕ್ರಮ ಮದ್ಯ ಮಾರಾಟವನ್ನು ಪತ್ತೆ ಹಚ್ಚಿ ಕೊಟ್ಟವರಿಗೆ ₹ 5 ಸಾವಿರ ಬಹುಮಾನ ಘೋಷಣೆ ಮಾಡಿ ಲಿಖಿತ ಪ್ರಕಟಣೆ ಹೊರಡಿಸಿದ್ದಾರೆ.</p>.<p>ಈ ಕುರಿತು ಪ್ರಕಟಣೆಯನ್ನು ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಹಳೆ ಹಾಗೂ ಹೊಸ ಬಡಾವಣೆಗಳ ಹಲವು ಕಡೆಗಳಲ್ಲಿ ಹತ್ತಾರು ಕಡೆಗಳಲ್ಲಿ ಗೋಡೆಗೆ ಅಂಟಿಸಿದ್ದಾರೆ. ಗ್ರಾಮದ ವಿವಿಧ ಸಮುದಾಯದ ಬೀದಿಗಳ ಜನತೆಯಲ್ಲದೆ, ನೆರೆ ಗ್ರಾಮಗಳಲ್ಲಿ ಈ ವಿಚಾರ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ:</strong> ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿದವರಿಗೆ ₹ 10 ಸಾವಿರ ದಂಡ, ಮಾರುವವರ ಪತ್ತೆ ಹಚ್ವಿಕೊಟ್ಟವರಿಗೆ ₹ 5 ಸಾವಿರ ಬಹುಮಾನವನ್ನು ನೀಡಲಾಗುವುದು ಎಂದು ಇಲ್ಲಿನ ಗ್ರಾಮಸ್ಥರು ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ.</p>.<p>ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಬೀದಿಯಲ್ಲಿ ಕುಲಸ್ಥರ ಸಮ್ಮುಖದಲ್ಲಿ ಯಜಮಾನರು ಅಕ್ರಮ ಮದ್ಯ ಮಾರಾಟವನ್ನು ನಿಷೇಧಿಸಿ ತೀರ್ಮಾನ ಕೈಗೊಂಡಿದ್ದಾರೆ. ಗ್ರಾಮದ ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಯುವಕರ ಸಂಘದ ದೂರಿನನ್ವಯ ಗ್ರಾಮದಲ್ಲಿ ಕುಲಸ್ಥರ ಸಮ್ಮುಖದಲ್ಲಿ ಯಜಮಾನ ಚಾಮರಾಜು, ಲಕ್ಷ್ಮಣ ಸ್ವಾಮಿ, ಧರ್ಮರತ್ನಾಕರ, ಕಾಂತರಾಜು, ಮಾದಯ್ಯ, ಮಹೇಂದ್ರ, ಶ್ರೀನಿವಾಸ್, ಎಂ.ಮಹದೇವ, ಸಿ.ಎಂ.ಮಹದೇವ, ಲಿಂಗರಾಜು, ದೊರೆಸ್ವಾಮಿ ಸೇರಿ ಇತರರು ಸಭೆ ಸೇರಿ ಈ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.</p>.<p>ಆಗೊಂದು ವೇಳೆ ನಿಷೇಧ ತೀರ್ಮಾನ ಉಲ್ಲಂಘಿಸಿ ಅಕ್ರಮವಾಗಿ ಮನೆಯಲ್ಲಿ, ಮದ್ಯ ಮಾರಾಟ ಮಾಡುವ ಕಿರಾಣಿ ಅಂಗಡಿಯವರಿಗೆ ₹ 10 ಸಾವಿರ ದಂಡ ವಿಧಿಸಲಾಗುತ್ತದೆ. ಜಗಳ ಮಾಡಿದವರಿಗೆ ₹ 5 ಸಾವಿರ ದಂಡ ಹಾಗೂ ಮಾಲು ಸಮೇತ ಅಕ್ರಮ ಮದ್ಯ ಮಾರಾಟವನ್ನು ಪತ್ತೆ ಹಚ್ಚಿ ಕೊಟ್ಟವರಿಗೆ ₹ 5 ಸಾವಿರ ಬಹುಮಾನ ಘೋಷಣೆ ಮಾಡಿ ಲಿಖಿತ ಪ್ರಕಟಣೆ ಹೊರಡಿಸಿದ್ದಾರೆ.</p>.<p>ಈ ಕುರಿತು ಪ್ರಕಟಣೆಯನ್ನು ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಹಳೆ ಹಾಗೂ ಹೊಸ ಬಡಾವಣೆಗಳ ಹಲವು ಕಡೆಗಳಲ್ಲಿ ಹತ್ತಾರು ಕಡೆಗಳಲ್ಲಿ ಗೋಡೆಗೆ ಅಂಟಿಸಿದ್ದಾರೆ. ಗ್ರಾಮದ ವಿವಿಧ ಸಮುದಾಯದ ಬೀದಿಗಳ ಜನತೆಯಲ್ಲದೆ, ನೆರೆ ಗ್ರಾಮಗಳಲ್ಲಿ ಈ ವಿಚಾರ ಸಾರ್ವಜನಿಕವಾಗಿ ಚರ್ಚೆಗೆ ಗ್ರಾಸವಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>