ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದ ಬೀದಿಯಲ್ಲಿ ಕುಲಸ್ಥರ ಸಮ್ಮುಖದಲ್ಲಿ ಯಜಮಾನರು ಅಕ್ರಮ ಮದ್ಯ ಮಾರಾಟವನ್ನು ನಿಷೇಧಿಸಿ ತೀರ್ಮಾನ ಕೈಗೊಂಡಿದ್ದಾರೆ. ಗ್ರಾಮದ ಮಹಿಳಾ ಸಂಘದ ಪದಾಧಿಕಾರಿಗಳು ಹಾಗೂ ಯುವಕರ ಸಂಘದ ದೂರಿನನ್ವಯ ಗ್ರಾಮದಲ್ಲಿ ಕುಲಸ್ಥರ ಸಮ್ಮುಖದಲ್ಲಿ ಯಜಮಾನ ಚಾಮರಾಜು, ಲಕ್ಷ್ಮಣ ಸ್ವಾಮಿ, ಧರ್ಮರತ್ನಾಕರ, ಕಾಂತರಾಜು, ಮಾದಯ್ಯ, ಮಹೇಂದ್ರ, ಶ್ರೀನಿವಾಸ್, ಎಂ.ಮಹದೇವ, ಸಿ.ಎಂ.ಮಹದೇವ, ಲಿಂಗರಾಜು, ದೊರೆಸ್ವಾಮಿ ಸೇರಿ ಇತರರು ಸಭೆ ಸೇರಿ ಈ ಮಹತ್ವದ ನಿರ್ಣಯ ಕೈಗೊಂಡಿದ್ದಾರೆ.