<p><strong>ಚಾಮರಾಜನಗರ: </strong>ಗಡಿ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 42 ಕೋವಿಡ್–19 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ 571ಕ್ಕೆ ಏರಿದೆ.</p>.<p>ಮಂಗಳವಾರ 18 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಈ ವರೆಗೆ ಸೋಂಕುಮುಕ್ತರಾದವರ ಸಂಖ್ಯೆ 340ಕ್ಕೆ ಹಿಗ್ಗಿದೆ. 225 ಸಕ್ರಿಯ ಪ್ರಕರಣಗಳಿವೆ. ಎಲ್ಲರೂ ಕೋವಿಡ್ ಆಸ್ಪತ್ರೆ ಹಾಗೂ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ಐಸಿಯುನಲ್ಲಿ ಸದ್ಯ ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಏಳು ಮಂದಿ ಇದ್ದರು. ಚೇತರಿಸಿಕೊಂಡ ಇಬ್ಬರನ್ನು ಸಾಮಾನ್ಯ ವಾರ್ಡ್ಗೆ ಸ್ಥಳಾಂತರಿಸಲಾಗಿದೆ.</p>.<p class="Subhead"><strong>20 ಸಾವಿರ ದಾಟಿದ ಪರೀಕ್ಷೆ: </strong>ಈ ಮಧ್ಯೆ, ಜಿಲ್ಲೆಯಲ್ಲಿ ಇದುವರೆಗೆ ನಡೆಸಲಾದ ಕೋವಿಡ್–19 ಪರೀಕ್ಷೆಗಳ ಸಂಖ್ಯೆ 20 ಸಾವಿರ ದಾಟಿದೆ.</p>.<p>ಮಂಗಳವಾರ 700 ಮಂದಿಯ ಗಂಟಲು ದ್ರವ ಮಾದರಿಯ ಪರೀಕ್ಷೆ ನಡೆಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ನಡೆಸಿರುವ ಪರೀಕ್ಷೆಗಳ ಸಂಖ್ಯೆ 20,571ಕ್ಕೆ ತಲುಪಿದೆ. 19,990 ವರದಿಗಳು ನೆಗೆಟಿವ್ ಬಂದಿವೆ.</p>.<p>ಬುಧವಾರ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ಕಿಟ್ ಮೂಲಕ 679 ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 37 ಮಂದಿಗೆ ಸೋಂಕು ಕಂಡು ಬಂದಿದೆ. 21 ಗಂಟಲು ದ್ರವ ಮಾದರಿಗಳನ್ನು ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಐವರಲ್ಲಿ ಕೋವಿಡ್–19 ದೃಢಪಟ್ಟಿದೆ.</p>.<p>ಮಂಗಳವಾರ ಸೋಂಕು ದೃಢಪಟ್ಟ 42 ಜನರಲ್ಲಿ ಆರು ಮಂದಿ ನೆರೆಯ ಮೈಸೂರು ಜಿಲ್ಲೆಯವರು (ಮೂವರು ಮೈಸೂರು, ತಿ.ನರಸೀಪುರ ತಾಲ್ಲೂಕಿನ ಇಬ್ಬರು ಮತ್ತು ನಂಜನಗೂಡು ತಾಲ್ಲೂಕಿನ ಒಬ್ಬರು).</p>.<p>ಕೊಳ್ಳೇಗಾಲ ತಾಲ್ಲೂಕಿನಲ್ಲಿ ಅತಿ ಹೆಚ್ಚು, 14 ಪ್ರಕರಣಗಳು ವರದಿಯಾಗಿವೆ. ಯಳಂದೂರು ತಾಲ್ಲೂಕಿನಲ್ಲಿ 10, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಎಂಟು ಹಾಗೂ ಚಾಮರಾಜನಗರದಲ್ಲಿ ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿದೆ.ಸೋಂಕಿತರಲ್ಲಿ ಎರಡು ವರ್ಷ ಗಂಡು ಮಗು, ನಾಲ್ಕು ವರ್ಷದ ಒಬ್ಬ ಬಾಲಕ ಹಾಗೂ ಬಾಲಕಿ ಇದ್ದಾರೆ.</p>.<p>ಸೋಂಕಿತರ ಸಂಪರ್ಕ ಹೊಂದಿದ್ದ 26 ಮಂದಿ, ಐಎಲ್ಐ ರೋಗ ಲಕ್ಷಗಳಿರುವ 11, ಬೆಂಗಳೂರಿನಿಂದ ಬಂದಿರುವ ಇಬ್ಬರು, ಮೈಸೂರಿನಿಂದ ಬಂದಿರುವ ಒಬ್ಬರು ಕೋವಿಡ್–19ಗೆ ತುತ್ತಾಗಿದ್ದಾರೆ. ಇಬ್ಬರ ಸೋಂಕಿನ ಮೂಲ ತಿಳಿದು ಬಂದಿಲ್ಲ.</p>.<p>ಕೊಳ್ಳೇಗಾಲ ತಾಲ್ಲೂಕಿನ ಎಂಟು ಮಂದಿ, ಗುಂಡ್ಲುಪೇಟೆ ತಾಲ್ಲೂಕಿನ ಐವರು, ಚಾಮರಾಜನಗರ ತಾಲ್ಲೂಕಿನ ಮೂವರು ಹಾಗೂ ಯಳಂದೂರಿನ ಇಬ್ಬರು ಗುಣಮುಖರಾಗಿದ್ದಾರೆ.</p>.<p class="Briefhead"><strong>ಯಳಂದೂರು ತಾಲ್ಲೂಕು ಕಚೇರಿ ಸೀಲ್ಡೌನ್</strong></p>.<p>ಯಳಂದೂರುಪಟ್ಟಣದ ತಾಲ್ಲೂಕು ಪಂಚಾಯತಿ ಕಚೇರಿಯಲ್ಲಿ ಇರುವ ಸರ್ಕಾರಿ ಖಜಾನೆ ಕಚೇರಿಗಳ ನೌಕರರಲ್ಲಿ ಸೋಂಕು ದೃಢಪಟ್ಟಿರುವುದರಿಂದ ಮೂರು ದಿನಗಳ ಕಾಲ ಕಚೇರಿ ಸುತ್ತಮುತ್ತಲ ಆವರಣಗಳನ್ನು ಸೀಲ್ಡೌನ್ ಮಾಡಲಾಗಿದೆ.</p>.<p>ಗಣಕ ಕೇಂದ್ರದಲ್ಲಿ ಹೊರ ಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ. ದ್ವಿತೀಯ ದರ್ಜೆ ನೌಕರರೊಬ್ಬರಿಗೆ ಸೋಮವಾರ ದೃಢಪಟ್ಟಿತ್ತು.</p>.<p>‘ಮುಂಜಾಗ್ರತಾ ಕ್ರಮವಾಗಿ ಕಚೇರಿಗಳನ್ನು ಸೀಲ್ಡೌನ್ ಮಾಡಲಾಗಿದೆ. ಕಚೇರಿಯನ್ನು ಸ್ವಚ್ಛಗೊಳಿಸಲಾಗುವುದು. ಕಚೇರಿಯ ಸುತ್ತಮುತ್ತ ಸ್ವಚ್ಛತೆ ಮತ್ತು ಅಕ್ಕಪಕ್ಕದ ಕಚೇರಿಗಳಿಗೆ ಸೋಂಕು ನಿವಾರಕ ಸಿಂಪಡಿಸಲಾಗುವುದು’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಮಂಜುನಾಥ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ಗಡಿ ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 42 ಕೋವಿಡ್–19 ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಜಿಲ್ಲೆಯಲ್ಲಿ ವರದಿಯಾದ ಪ್ರಕರಣಗಳ ಸಂಖ್ಯೆ 571ಕ್ಕೆ ಏರಿದೆ.</p>.<p>ಮಂಗಳವಾರ 18 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಈ ವರೆಗೆ ಸೋಂಕುಮುಕ್ತರಾದವರ ಸಂಖ್ಯೆ 340ಕ್ಕೆ ಹಿಗ್ಗಿದೆ. 225 ಸಕ್ರಿಯ ಪ್ರಕರಣಗಳಿವೆ. ಎಲ್ಲರೂ ಕೋವಿಡ್ ಆಸ್ಪತ್ರೆ ಹಾಗೂ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.</p>.<p>ಐಸಿಯುನಲ್ಲಿ ಸದ್ಯ ಐವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ ಏಳು ಮಂದಿ ಇದ್ದರು. ಚೇತರಿಸಿಕೊಂಡ ಇಬ್ಬರನ್ನು ಸಾಮಾನ್ಯ ವಾರ್ಡ್ಗೆ ಸ್ಥಳಾಂತರಿಸಲಾಗಿದೆ.</p>.<p class="Subhead"><strong>20 ಸಾವಿರ ದಾಟಿದ ಪರೀಕ್ಷೆ: </strong>ಈ ಮಧ್ಯೆ, ಜಿಲ್ಲೆಯಲ್ಲಿ ಇದುವರೆಗೆ ನಡೆಸಲಾದ ಕೋವಿಡ್–19 ಪರೀಕ್ಷೆಗಳ ಸಂಖ್ಯೆ 20 ಸಾವಿರ ದಾಟಿದೆ.</p>.<p>ಮಂಗಳವಾರ 700 ಮಂದಿಯ ಗಂಟಲು ದ್ರವ ಮಾದರಿಯ ಪರೀಕ್ಷೆ ನಡೆಸಲಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ನಡೆಸಿರುವ ಪರೀಕ್ಷೆಗಳ ಸಂಖ್ಯೆ 20,571ಕ್ಕೆ ತಲುಪಿದೆ. 19,990 ವರದಿಗಳು ನೆಗೆಟಿವ್ ಬಂದಿವೆ.</p>.<p>ಬುಧವಾರ ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷಾ ಕಿಟ್ ಮೂಲಕ 679 ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 37 ಮಂದಿಗೆ ಸೋಂಕು ಕಂಡು ಬಂದಿದೆ. 21 ಗಂಟಲು ದ್ರವ ಮಾದರಿಗಳನ್ನು ಆರ್ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ಐವರಲ್ಲಿ ಕೋವಿಡ್–19 ದೃಢಪಟ್ಟಿದೆ.</p>.<p>ಮಂಗಳವಾರ ಸೋಂಕು ದೃಢಪಟ್ಟ 42 ಜನರಲ್ಲಿ ಆರು ಮಂದಿ ನೆರೆಯ ಮೈಸೂರು ಜಿಲ್ಲೆಯವರು (ಮೂವರು ಮೈಸೂರು, ತಿ.ನರಸೀಪುರ ತಾಲ್ಲೂಕಿನ ಇಬ್ಬರು ಮತ್ತು ನಂಜನಗೂಡು ತಾಲ್ಲೂಕಿನ ಒಬ್ಬರು).</p>.<p>ಕೊಳ್ಳೇಗಾಲ ತಾಲ್ಲೂಕಿನಲ್ಲಿ ಅತಿ ಹೆಚ್ಚು, 14 ಪ್ರಕರಣಗಳು ವರದಿಯಾಗಿವೆ. ಯಳಂದೂರು ತಾಲ್ಲೂಕಿನಲ್ಲಿ 10, ಗುಂಡ್ಲುಪೇಟೆ ತಾಲ್ಲೂಕಿನಲ್ಲಿ ಎಂಟು ಹಾಗೂ ಚಾಮರಾಜನಗರದಲ್ಲಿ ನಾಲ್ಕು ಮಂದಿಗೆ ಸೋಂಕು ದೃಢಪಟ್ಟಿದೆ.ಸೋಂಕಿತರಲ್ಲಿ ಎರಡು ವರ್ಷ ಗಂಡು ಮಗು, ನಾಲ್ಕು ವರ್ಷದ ಒಬ್ಬ ಬಾಲಕ ಹಾಗೂ ಬಾಲಕಿ ಇದ್ದಾರೆ.</p>.<p>ಸೋಂಕಿತರ ಸಂಪರ್ಕ ಹೊಂದಿದ್ದ 26 ಮಂದಿ, ಐಎಲ್ಐ ರೋಗ ಲಕ್ಷಗಳಿರುವ 11, ಬೆಂಗಳೂರಿನಿಂದ ಬಂದಿರುವ ಇಬ್ಬರು, ಮೈಸೂರಿನಿಂದ ಬಂದಿರುವ ಒಬ್ಬರು ಕೋವಿಡ್–19ಗೆ ತುತ್ತಾಗಿದ್ದಾರೆ. ಇಬ್ಬರ ಸೋಂಕಿನ ಮೂಲ ತಿಳಿದು ಬಂದಿಲ್ಲ.</p>.<p>ಕೊಳ್ಳೇಗಾಲ ತಾಲ್ಲೂಕಿನ ಎಂಟು ಮಂದಿ, ಗುಂಡ್ಲುಪೇಟೆ ತಾಲ್ಲೂಕಿನ ಐವರು, ಚಾಮರಾಜನಗರ ತಾಲ್ಲೂಕಿನ ಮೂವರು ಹಾಗೂ ಯಳಂದೂರಿನ ಇಬ್ಬರು ಗುಣಮುಖರಾಗಿದ್ದಾರೆ.</p>.<p class="Briefhead"><strong>ಯಳಂದೂರು ತಾಲ್ಲೂಕು ಕಚೇರಿ ಸೀಲ್ಡೌನ್</strong></p>.<p>ಯಳಂದೂರುಪಟ್ಟಣದ ತಾಲ್ಲೂಕು ಪಂಚಾಯತಿ ಕಚೇರಿಯಲ್ಲಿ ಇರುವ ಸರ್ಕಾರಿ ಖಜಾನೆ ಕಚೇರಿಗಳ ನೌಕರರಲ್ಲಿ ಸೋಂಕು ದೃಢಪಟ್ಟಿರುವುದರಿಂದ ಮೂರು ದಿನಗಳ ಕಾಲ ಕಚೇರಿ ಸುತ್ತಮುತ್ತಲ ಆವರಣಗಳನ್ನು ಸೀಲ್ಡೌನ್ ಮಾಡಲಾಗಿದೆ.</p>.<p>ಗಣಕ ಕೇಂದ್ರದಲ್ಲಿ ಹೊರ ಗುತ್ತಿಗೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ. ದ್ವಿತೀಯ ದರ್ಜೆ ನೌಕರರೊಬ್ಬರಿಗೆ ಸೋಮವಾರ ದೃಢಪಟ್ಟಿತ್ತು.</p>.<p>‘ಮುಂಜಾಗ್ರತಾ ಕ್ರಮವಾಗಿ ಕಚೇರಿಗಳನ್ನು ಸೀಲ್ಡೌನ್ ಮಾಡಲಾಗಿದೆ. ಕಚೇರಿಯನ್ನು ಸ್ವಚ್ಛಗೊಳಿಸಲಾಗುವುದು. ಕಚೇರಿಯ ಸುತ್ತಮುತ್ತ ಸ್ವಚ್ಛತೆ ಮತ್ತು ಅಕ್ಕಪಕ್ಕದ ಕಚೇರಿಗಳಿಗೆ ಸೋಂಕು ನಿವಾರಕ ಸಿಂಪಡಿಸಲಾಗುವುದು’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಮಂಜುನಾಥ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>