ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಪ್ಪಿದ ಅಪಘಾತ: 40 ಮಂದಿ ಪಾರು

Last Updated 22 ಫೆಬ್ರುವರಿ 2021, 5:08 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಿಂದ ಅನೇಕಲ್‌ಗೆ ತೆರಳುತ್ತಿದ್ದ ಸರ್ಕಾರಿ ಬಸ್ ಭಾನುವಾರ ಎದುರಿನಿಂದ ಬಂದ ಕಾರಿಗೆ ಜಾಗ ಬಿಡಲು ರಸ್ತೆ ಪಕ್ಕಕ್ಕೆ ಚಲಿಸಿದಾಗ ಜಾರಿ ವಾಲಿ ನಿಂತಿದೆ. ಇದರಿಂದ 40ಕ್ಕೂ ಹೆಚ್ಚು ಪ್ರಯಾಣಿಕರು ಪಾರಾಗಿದ್ದಾರೆ.

‘ಹೊಸದಾಗಿ ಬೆಟ್ಟದ ರಸ್ತೆಯ ತಿರುವುಗಳಲ್ಲಿ ವಾಹನ ಚಲಾಯಿಸುವ ಚಾಲಕರು ಎಚ್ಚರ ವಹಿಸಬೇಕು. ದೊಡ್ಡ ವಾಹನಗಳು ಬರುವಾಗ ಅಗಲವಾದ ರಸ್ತೆಯಲ್ಲಿ ನಿಂತು ಹೊರಡಬೇಕು. ಏಕಾಏಕಿ ಕಾರು ಬಂದಾಗ ಬಸ್ ಚಾಲಕ ಅಪಘಾತ ತಪ್ಪಿಸಲು ರಸ್ತೆ ಬದಿಗೆ ಬಂದಾಗ ಕೊರಕಲಿಗೆ ಇಳಿದು ನಿಂತಿದೆ. ಇದರಿಂದ ದೊಡ್ಡ ಅಪಘಾತ ತಪ್ಪಿದೆ’ ಎಂದು ಪೊಲೀಸರು ತಿಳಿಸಿದರು.

ಪಿಎಸ್ಐ ಶಿವಕುಮಾರ್ ಮತ್ತು ಉಸ್ಮಾನ್ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್‌ನಿಂದ ಇಳಿಸಿ, ಗ್ರಾಮಗಳತ್ತ ತೆರಳಲು ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT