ಮಣ್ಣಿನ ಅಧ್ಯಯನ, ಬೆಳೆ ಸಂಯೋಜನೆ, ಗಿಡಗಳಲ್ಲಿ ಪೋಷಕಾಂಶ ಕೊರತೆ, ಸೂಕ್ಷ್ಮ ಜೀವಾಣುಗಳ ಹಾಗೂ ಕಾಂಪೋಸ್ಟ್ ಗೊಬ್ಬರ ತಯಾರಿಕೆ, ತೋಟಗಳ ಸಮಗ್ರ ಅಧ್ಯಯನದ ಬಗ್ಗೆ ಪ್ರಾತ್ಯಕ್ಷಿಕೆ ಇರಲಿದೆ. ಸಹಜ ಕೃಷಿ ವಿಜ್ಞಾನಿ ತುಮಕೂರು ಎಚ್.ಮಂಜುನಾಥ ಹಾಗೂ ಅನುಭವಿ ಕೃಷಿಕರು ಭಾಗವಹಿಸಲಿದ್ದಾರೆ. ಮೇ.26ರೊಳಗೆ ನೋಂದಣಿಗೆ ಅವಕಾಶ ಇದೆ ಎಂದು ಜಿಎಸ್ಬಿ ಪ್ರತಿಷ್ಠಾನದ ಅಧ್ಯಕ್ಷ ಎಸ್.ಶಶಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.