<p><strong>ಚಾಮರಾಜನಗರ:</strong> ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವಿವಿಧ ವಲಯಗಳಲ್ಲಿ ವ್ಯವಸ್ಥಿತವಾಗಿ ಬೆಂಕಿ ರೇಖೆ (ಫೈರ್ಲೈನ್) ನಿರ್ಮಿಸದಿರುವುದೇ ಕಾಳ್ಗಿಚ್ಚಿಗೆ ಪ್ರಮುಖ ಕಾರಣ ಎಂದು ಅರಣ್ಯ ಇಲಾಖೆಯು ವರದಿ ನೀಡಿದ್ದು, ಅಧಿಕಾರಿಗಳ ಕರ್ತವ್ಯಲೋಪದತ್ತ ಬೊಟ್ಟು ಮಾಡಿದೆ.</p>.<p>ಫೆಬ್ರುವರಿ 21ರಂದು ಕುಂದುಕೆರೆ ವಲಯದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ 4,419.54 ಹೆಕ್ಟೇರ್ ಅರಣ್ಯವನ್ನು (11,049 ಎಕರೆ) ಆಹುತಿ ತೆಗೆದುಕೊಂಡಿತ್ತು. ತನಿಖೆಗಾಗಿ ಇಲಾಖೆಯ ಕಾನೂನು ಘಟಕದ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹರಿಕುಮಾರ್ ಝಾ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.</p>.<p class="Subhead">ಬೆಂಕಿ ರೇಖೆಯೇ ಇಲ್ಲ: ಕಾಳ್ಗಿಚ್ಚಿನಿಂದಾಗಿ ಕುಂದುಕೆರೆ ವಲಯ, ಬಂಡೀಪುರ ವಲಯ, ಗೋಪಾಲಸ್ವಾಮಿ ಬೆಟ್ಟ (ಜಿಎಸ್ ಬೆಟ್ಟ) ವಲಯ, ಮದ್ದೂರು ವಲಯಗಳಲ್ಲಿ ತೀವ್ರ ಹಾನಿಯಾಗಿತ್ತು.</p>.<p>‘ರಾಷ್ಟ್ರೀಯ ಹೆದ್ದಾರಿ ಹಾಗೂ ಸಫಾರಿಗೆ ಹೋಗುವ ಮಾರ್ಗಗಳ ಎರಡೂ ಬದಿಗಳಲ್ಲಿ ಮಾತ್ರ ಬೆಂಕಿ ರೇಖೆಯನ್ನು ತುಂಬಾ ಅಗಲವಾಗಿ ಹಾಗೂ ವ್ಯವಸ್ಥಿತವಾಗಿ ಮಾಡಲಾಗಿದೆ. ಉಳಿದ ಕಡೆಗಳಲ್ಲಿ 3ರಿಂದ 4 ಮೀಟರ್ ಅಗಲಕ್ಕೆ (ಕನಿಷ್ಠ 10 ಮೀಟರ್ ಇರಬೇಕು) ಬೆಂಕಿ ರೇಖೆ ನಿರ್ಮಿಸಲಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ 3 ಮೀಟರ್ಗಿಂತಲೂ ಕಡಿಮೆ ಇದೆ. ಬಂಡೀಪುರ, ಮೊಳೆಯೂರು, ಜಿಎಸ್ ಬೆಟ್ಟ ವಲಯಗಳ ಕೆಲವು ಕಡೆ ಬೆಂಕಿರೇಖೆ ಯನ್ನೇ ನಿರ್ಮಿಸಿರಲಿಲ್ಲ. ಬಂಡೀಪುರ ಉಪ ವಿಭಾಗದಲ್ಲಿ ಬೆಂಕಿ ರೇಖೆ ನಿರ್ಮಾಣ ಮಾಡಿದವರಿಗೆ ಹಣ ಪಾವತಿ ಮಾಡದಿರುವುದೂ ಕಂಡು ಬಂದಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>.<p class="Subhead"><strong>ಕಿಡಿಗೇಡಿಗಳ ನಿಯಂತ್ರಣಕ್ಕೆ ವಿಫಲ: ‘</strong>ಈ ಕಾಳ್ಗಿಚ್ಚು ಮಾನವ ನಿರ್ಮಿತ. ಕಾಡಂಚಿನ ಪ್ರದೇಶದ ಕಿಡಿಗೇಡಿಗಳು ಕೊಟ್ಟ ಬೆಂಕಿಯೇ ಕಾಳ್ಗಿಚ್ಚಾಗಿರುವ ಸಾಧ್ಯತೆ ಇದೆ. ಕಿಡಿಗೇಡಿಗಳನ್ನು ನಿಯಂತ್ರಿಸಲು, ಮುನ್ನೆಚ್ಚರಿಕೆ ಕೈಗೊಳ್ಳಲು ಸಿಬ್ಬಂದಿ ವಿಫಲರಾಗಿದ್ದಾರೆ. ಇಲಾಖೆಯ ಉನ್ನತ ಅಧಿಕಾರಿಗಳು ಹೊರಡಿಸುವ ಆದೇಶಗಳು ಪಾಲಿಸುವುದರಲ್ಲೂ ಅಧಿಕಾರಿಗಳು ಲೋಪವೆಸಗಿದ್ದಾರೆ’ ಎಂದೂ ವರದಿಯಲ್ಲಿ ಝಾ ಹೇಳಿದ್ದಾರೆ.</p>.<p>ಕಾಳ್ಗಿಚ್ಚಿನ ಸಂದರ್ಭದಲ್ಲಿ ಅಂಬಾಡಿ ಮಾಧವ್ ಅವರು ಬಂಡೀಪುರ ನಿರ್ದೇಶಕರಾಗಿದ್ದರು. ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಸಿಸಿಎಫ್) ವರ್ಗವಾಗಿದ್ದರೂ ಹೆಚ್ಚುವರಿಯಾಗಿ ನಿರ್ದೇಶಕರ ಹುದ್ದೆಯಲ್ಲಿ ಮುಂದುವರಿದಿದ್ದರು. ಈಗ ಅವರು ನಿವೃತ್ತರಾಗಿದ್ದಾರೆ.</p>.<p>ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಅಂಬಾಡಿ ಮಾಧವ್, ‘2017–18ರಲ್ಲೂ ನಾನೇ ನಿರ್ದೇಶಕನಾಗಿದ್ದೆ. ಆ ವರ್ಷ ಕಾಳ್ಗಿಚ್ಚು ಸಂಭವಿಸಿರಲಿಲ್ಲ. ಈ ಬಾರಿಯೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿತ್ತು. ಬೆಂಕಿ ರೇಖೆಯನ್ನೂ ನಿರ್ಮಿಸಲಾಗಿತ್ತು. ಎಲ್ಲರಿಗೆ ಹಣವನ್ನೂ ಪಾವತಿಸಲಾಗಿದೆ. ಆ ಸಂದರ್ಭದಲ್ಲಿ ಶೇ 50ರಷ್ಟು ಸಿಬ್ಬಂದಿ ಕೊರತೆ ಇತ್ತು. ಅದೇ ಸಮಯದಲ್ಲಿ ಗಡಿಯಂಚಿನ ಪ್ರದೇಶಗಳಲ್ಲಿ ಹುಲಿಗಳು ಕಾಣಿಸಿಕೊಂಡಿದ್ದರಿಂದ ಅವುಗಳ ನಿಯಂತ್ರಣಕ್ಕೂ ಗಮನ ಕೊಡಬೇಕಾಯಿತು’ ಎಂದರು.</p>.<p><strong>ಸಿಬ್ಬಂದಿ ಕೊರತೆಯೂ ಕಾರಣ</strong></p>.<p>ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಳಹಂತದ ಸಿಬ್ಬಂದಿ ಕೊರತೆ ಇರುವುದನ್ನೂ ವರದಿ ಉಲ್ಲೇಖಿಸಿದೆ.</p>.<p>ಬಂಡೀಪುರಕ್ಕೆ ಆರ್ಎಫ್ಒ (13), ಡಿಆರ್ಎಫ್ (30) ಅರಣ್ಯ ರಕ್ಷಕರು (113) ಹಾಗೂ ವೀಕ್ಷಕರು (90) ಸೇರಿದಂತೆ 246 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 140 ಹುದ್ದೆಗಳನ್ನು ಮಾತ್ರ ಭರ್ತಿಮಾಡಲಾಗಿದೆ. ಕಾಳ್ಗಿಚ್ಚಿನ ಸಮಯದಲ್ಲಿ ಸಿಬ್ಬಂದಿ ಕೊರತೆ ಇದ್ದರೆ ಕಾರ್ಯಾಚರಣೆಗೆ ಹಿನ್ನಡೆಯಾಗುತ್ತದೆ ಎಂದು ವರದಿ ಹೇಳಿದೆ.</p>.<p><strong>ತಿಂಗಳ ಹಿಂದೆ ಮತ್ತೊಂದು ವರದಿ</strong></p>.<p>ಹರಿಕುಮಾರ್ ಝಾ ಅವರ ವರದಿ ಮಾರ್ಚ್ನಲ್ಲೇ ಸರ್ಕಾರಕ್ಕೆಸಲ್ಲಿಕೆಯಾಗಿತ್ತು. ಆ ಬಳಿಕ, ಅರಣ್ಯ ಇಲಾಖೆ ಗುಪ್ತಚರ ವಿಭಾಗದಿಂದ ಮತ್ತೊಮ್ಮೆ ತನಿಖೆ ನಡೆಸಿದೆ. ಹಿರಿಯ ಐಎಫ್ಎಸ್ ಅಧಿಕಾರಿ ಪೂವಯ್ಯ ತಿಂಗಳ ಹಿಂದೆ ವರದಿ ಸಲ್ಲಿಸಿದ್ದಾರೆ.</p>.<p>ಝಾ ಸಲ್ಲಿಸಿರುವ ವರದಿಯಲ್ಲಿರುವ ಅಂಶಗಳನ್ನೇ ಹೊಸ ವರದಿಯು ಪುನರಾವರ್ತಿಸಿದೆ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವಿವಿಧ ವಲಯಗಳಲ್ಲಿ ವ್ಯವಸ್ಥಿತವಾಗಿ ಬೆಂಕಿ ರೇಖೆ (ಫೈರ್ಲೈನ್) ನಿರ್ಮಿಸದಿರುವುದೇ ಕಾಳ್ಗಿಚ್ಚಿಗೆ ಪ್ರಮುಖ ಕಾರಣ ಎಂದು ಅರಣ್ಯ ಇಲಾಖೆಯು ವರದಿ ನೀಡಿದ್ದು, ಅಧಿಕಾರಿಗಳ ಕರ್ತವ್ಯಲೋಪದತ್ತ ಬೊಟ್ಟು ಮಾಡಿದೆ.</p>.<p>ಫೆಬ್ರುವರಿ 21ರಂದು ಕುಂದುಕೆರೆ ವಲಯದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ 4,419.54 ಹೆಕ್ಟೇರ್ ಅರಣ್ಯವನ್ನು (11,049 ಎಕರೆ) ಆಹುತಿ ತೆಗೆದುಕೊಂಡಿತ್ತು. ತನಿಖೆಗಾಗಿ ಇಲಾಖೆಯ ಕಾನೂನು ಘಟಕದ ಹೆಚ್ಚುವರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹರಿಕುಮಾರ್ ಝಾ ನೇತೃತ್ವದಲ್ಲಿ ಸಮಿತಿ ರಚಿಸಿತ್ತು.</p>.<p class="Subhead">ಬೆಂಕಿ ರೇಖೆಯೇ ಇಲ್ಲ: ಕಾಳ್ಗಿಚ್ಚಿನಿಂದಾಗಿ ಕುಂದುಕೆರೆ ವಲಯ, ಬಂಡೀಪುರ ವಲಯ, ಗೋಪಾಲಸ್ವಾಮಿ ಬೆಟ್ಟ (ಜಿಎಸ್ ಬೆಟ್ಟ) ವಲಯ, ಮದ್ದೂರು ವಲಯಗಳಲ್ಲಿ ತೀವ್ರ ಹಾನಿಯಾಗಿತ್ತು.</p>.<p>‘ರಾಷ್ಟ್ರೀಯ ಹೆದ್ದಾರಿ ಹಾಗೂ ಸಫಾರಿಗೆ ಹೋಗುವ ಮಾರ್ಗಗಳ ಎರಡೂ ಬದಿಗಳಲ್ಲಿ ಮಾತ್ರ ಬೆಂಕಿ ರೇಖೆಯನ್ನು ತುಂಬಾ ಅಗಲವಾಗಿ ಹಾಗೂ ವ್ಯವಸ್ಥಿತವಾಗಿ ಮಾಡಲಾಗಿದೆ. ಉಳಿದ ಕಡೆಗಳಲ್ಲಿ 3ರಿಂದ 4 ಮೀಟರ್ ಅಗಲಕ್ಕೆ (ಕನಿಷ್ಠ 10 ಮೀಟರ್ ಇರಬೇಕು) ಬೆಂಕಿ ರೇಖೆ ನಿರ್ಮಿಸಲಾಗಿದೆ. ಇನ್ನೂ ಕೆಲವು ಕಡೆಗಳಲ್ಲಿ 3 ಮೀಟರ್ಗಿಂತಲೂ ಕಡಿಮೆ ಇದೆ. ಬಂಡೀಪುರ, ಮೊಳೆಯೂರು, ಜಿಎಸ್ ಬೆಟ್ಟ ವಲಯಗಳ ಕೆಲವು ಕಡೆ ಬೆಂಕಿರೇಖೆ ಯನ್ನೇ ನಿರ್ಮಿಸಿರಲಿಲ್ಲ. ಬಂಡೀಪುರ ಉಪ ವಿಭಾಗದಲ್ಲಿ ಬೆಂಕಿ ರೇಖೆ ನಿರ್ಮಾಣ ಮಾಡಿದವರಿಗೆ ಹಣ ಪಾವತಿ ಮಾಡದಿರುವುದೂ ಕಂಡು ಬಂದಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.</p>.<p class="Subhead"><strong>ಕಿಡಿಗೇಡಿಗಳ ನಿಯಂತ್ರಣಕ್ಕೆ ವಿಫಲ: ‘</strong>ಈ ಕಾಳ್ಗಿಚ್ಚು ಮಾನವ ನಿರ್ಮಿತ. ಕಾಡಂಚಿನ ಪ್ರದೇಶದ ಕಿಡಿಗೇಡಿಗಳು ಕೊಟ್ಟ ಬೆಂಕಿಯೇ ಕಾಳ್ಗಿಚ್ಚಾಗಿರುವ ಸಾಧ್ಯತೆ ಇದೆ. ಕಿಡಿಗೇಡಿಗಳನ್ನು ನಿಯಂತ್ರಿಸಲು, ಮುನ್ನೆಚ್ಚರಿಕೆ ಕೈಗೊಳ್ಳಲು ಸಿಬ್ಬಂದಿ ವಿಫಲರಾಗಿದ್ದಾರೆ. ಇಲಾಖೆಯ ಉನ್ನತ ಅಧಿಕಾರಿಗಳು ಹೊರಡಿಸುವ ಆದೇಶಗಳು ಪಾಲಿಸುವುದರಲ್ಲೂ ಅಧಿಕಾರಿಗಳು ಲೋಪವೆಸಗಿದ್ದಾರೆ’ ಎಂದೂ ವರದಿಯಲ್ಲಿ ಝಾ ಹೇಳಿದ್ದಾರೆ.</p>.<p>ಕಾಳ್ಗಿಚ್ಚಿನ ಸಂದರ್ಭದಲ್ಲಿ ಅಂಬಾಡಿ ಮಾಧವ್ ಅವರು ಬಂಡೀಪುರ ನಿರ್ದೇಶಕರಾಗಿದ್ದರು. ಮೈಸೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ (ಸಿಸಿಎಫ್) ವರ್ಗವಾಗಿದ್ದರೂ ಹೆಚ್ಚುವರಿಯಾಗಿ ನಿರ್ದೇಶಕರ ಹುದ್ದೆಯಲ್ಲಿ ಮುಂದುವರಿದಿದ್ದರು. ಈಗ ಅವರು ನಿವೃತ್ತರಾಗಿದ್ದಾರೆ.</p>.<p>ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ಅಂಬಾಡಿ ಮಾಧವ್, ‘2017–18ರಲ್ಲೂ ನಾನೇ ನಿರ್ದೇಶಕನಾಗಿದ್ದೆ. ಆ ವರ್ಷ ಕಾಳ್ಗಿಚ್ಚು ಸಂಭವಿಸಿರಲಿಲ್ಲ. ಈ ಬಾರಿಯೂ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿತ್ತು. ಬೆಂಕಿ ರೇಖೆಯನ್ನೂ ನಿರ್ಮಿಸಲಾಗಿತ್ತು. ಎಲ್ಲರಿಗೆ ಹಣವನ್ನೂ ಪಾವತಿಸಲಾಗಿದೆ. ಆ ಸಂದರ್ಭದಲ್ಲಿ ಶೇ 50ರಷ್ಟು ಸಿಬ್ಬಂದಿ ಕೊರತೆ ಇತ್ತು. ಅದೇ ಸಮಯದಲ್ಲಿ ಗಡಿಯಂಚಿನ ಪ್ರದೇಶಗಳಲ್ಲಿ ಹುಲಿಗಳು ಕಾಣಿಸಿಕೊಂಡಿದ್ದರಿಂದ ಅವುಗಳ ನಿಯಂತ್ರಣಕ್ಕೂ ಗಮನ ಕೊಡಬೇಕಾಯಿತು’ ಎಂದರು.</p>.<p><strong>ಸಿಬ್ಬಂದಿ ಕೊರತೆಯೂ ಕಾರಣ</strong></p>.<p>ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆಳಹಂತದ ಸಿಬ್ಬಂದಿ ಕೊರತೆ ಇರುವುದನ್ನೂ ವರದಿ ಉಲ್ಲೇಖಿಸಿದೆ.</p>.<p>ಬಂಡೀಪುರಕ್ಕೆ ಆರ್ಎಫ್ಒ (13), ಡಿಆರ್ಎಫ್ (30) ಅರಣ್ಯ ರಕ್ಷಕರು (113) ಹಾಗೂ ವೀಕ್ಷಕರು (90) ಸೇರಿದಂತೆ 246 ಹುದ್ದೆಗಳು ಮಂಜೂರಾಗಿವೆ. ಈ ಪೈಕಿ 140 ಹುದ್ದೆಗಳನ್ನು ಮಾತ್ರ ಭರ್ತಿಮಾಡಲಾಗಿದೆ. ಕಾಳ್ಗಿಚ್ಚಿನ ಸಮಯದಲ್ಲಿ ಸಿಬ್ಬಂದಿ ಕೊರತೆ ಇದ್ದರೆ ಕಾರ್ಯಾಚರಣೆಗೆ ಹಿನ್ನಡೆಯಾಗುತ್ತದೆ ಎಂದು ವರದಿ ಹೇಳಿದೆ.</p>.<p><strong>ತಿಂಗಳ ಹಿಂದೆ ಮತ್ತೊಂದು ವರದಿ</strong></p>.<p>ಹರಿಕುಮಾರ್ ಝಾ ಅವರ ವರದಿ ಮಾರ್ಚ್ನಲ್ಲೇ ಸರ್ಕಾರಕ್ಕೆಸಲ್ಲಿಕೆಯಾಗಿತ್ತು. ಆ ಬಳಿಕ, ಅರಣ್ಯ ಇಲಾಖೆ ಗುಪ್ತಚರ ವಿಭಾಗದಿಂದ ಮತ್ತೊಮ್ಮೆ ತನಿಖೆ ನಡೆಸಿದೆ. ಹಿರಿಯ ಐಎಫ್ಎಸ್ ಅಧಿಕಾರಿ ಪೂವಯ್ಯ ತಿಂಗಳ ಹಿಂದೆ ವರದಿ ಸಲ್ಲಿಸಿದ್ದಾರೆ.</p>.<p>ಝಾ ಸಲ್ಲಿಸಿರುವ ವರದಿಯಲ್ಲಿರುವ ಅಂಶಗಳನ್ನೇ ಹೊಸ ವರದಿಯು ಪುನರಾವರ್ತಿಸಿದೆ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ಖಚಿತಪಡಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>