ಒಣಗಿದ ಮರದ ಪೊಟರೆಗಳಲ್ಲಿ ಹತ್ತಿ, ಆಲದಮರ, ಮತ್ತಿ, ಗೋಣಿ, ಬಸುರಿ ಸೇರಿದಂತೆ ಪ್ರಾಣಿಗಳ ಮೇವಿಗೆ ಆಗುವ ಗಿಡಗಳನ್ನು ನೆಡುವ ಕಾರ್ಯ ಸಂರಕ್ಷಿತ ಪ್ರದೇಶದಾದ್ಯಂತ ಚಾಲ್ತಿಯಲ್ಲಿದೆ. ಬಂಡೀಪುರ ವ್ಯಾಪ್ತಿಯಲ್ಲಿ 13 ವಲಯಗಳಿದ್ದು ಕನಿಷ್ಠ 10 ಸಾವಿರ ಗಿಡಗಳನ್ನು ನೆಡುವ ಗುರಿಯನ್ನು ಅಧಿಕಾರಿಗಳು ಹೊಂದಿದ್ದಾರೆ. ಒಂದು ವಲಯದಲ್ಲಿ ಗರಿಷ್ಠ 1000 ಗಿಡಗಳನ್ನು ಈ ವಿಧಾನದ ಮೂಲಕ ಬೆಳೆಸುವ ಯೋಜನೆಯನ್ನು ಇಲಾಖೆ ಹಾಕಿಕೊಂಡಿದೆ.