<p><strong>ಯಳಂದೂರು:</strong> ತಾಲ್ಲೂಕಿನ ಕಬ್ಬು ಬೆಳೆಗಾರರಿಗೆ ಈಗ ಹುಳುಗಳ ಕಾಟ ಆರಂಭವಾಗಿದೆ. ಅಪರೂಪದ ನೀಲಿ ಬಗ್ ಹಾವಳಿಯಿಂದ ಕಬ್ಬಿನ ಇಳುವರಿ ಕುಸಿಯುವ ಆತಂಕ ಎದುರಾಗಿದ್ದು, ಈ ಬಗ್ಗೆ ಕೀಟ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕಬ್ಬಿನ ತಾಕಿಗೆ ಭೇಟಿ ನೀಡಿ ಮಂಗಳವಾರ ಪರಿಶೀಲಿಸಿದರು.</p>.<p>ತಾಲ್ಲೂಕಿನ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿನ ಹಿಡುವಳಿ ವಿಸ್ತರಿಸಿದೆ. ಕಳೆದೆರಡು ವರ್ಷಗಳಿಂದ ಬರದಿಂದ ಕಂಗೆಟ್ಟಿದ್ದ ರೈತರು, ಮುಂಗಾರು ಹಂಗಾಮಿನಲ್ಲಿ ಹೈಬ್ರಿಡ್ ತಳಿಗಳ ನಾಟಿಗೆ ಮುಂದಾಗಿದ್ದಾರೆ. ಆದರೆ, ಈ ಸಾಲಿನಲ್ಲಿ ಕಬ್ಬಿಗೆ ಹುಳುಗಳ ಕಾಟ ಹಾಗೂ ಬಿಳಿ ಮಾರು ಕಾಣಿಸಿಕೊಂಡು ನಿರೀಕ್ಷಿತ ಇಳುವರಿ ಕಾಣದಾಗಿದೆ.</p>.<p>ಕೆಲವು ಗದ್ದೆಗಳಲ್ಲಿ ಗೊಣ್ಣೆಹುಳು ಬಾಧೆಯೂ ಕಂಡು ಬಂದಿದೆ. ನೀಲಿ ಬಗ್ ಸೋಗನ್ನು ತಿಂದು, ಕಬ್ಬಿನ ಗಾತ್ರ ಕುಸಿಯುವಂತೆ ಮಾಡುತ್ತದೆ. ಇದರಿಂದ ಕಬ್ಬಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಕೆಲವು ಕೀಟಬಾಧೆ ಔಷಧೋಪಚಾರಕ್ಕೂ ಬಗ್ಗುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದರು.</p>.<p>‘ಗೊಣ್ಣೆಹುಳು ಸ್ಥಾನಿಕ ಪೀಡೆ. ಶೇ 30ರಷ್ಟು ಬೆಳೆ ಹಾನಿ ಮಾಡುತ್ತದೆ. ಇವು ಬೇರು ಭಕ್ಷಿಸಿ, ಪೈರು ಹಳದಿ ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ. ತೇವಾಂಶ ಕೊರತೆಯಾದಲ್ಲಿ ಕಾಟ ಹೆಚ್ಚಾಗುತ್ತದೆ. ಜೊತೆಗೆ ಅಲ್ಲಲ್ಲಿ ಸೋಗು ಬಿಳಿಚಿಕೊಂಡು ಬಿಳಿ ಹೇನು ಕಾಟಕೊಡುತ್ತದೆ. ಈ ಬಾಧೆ ಆಗಸ್ಟ್- ಸೆಪ್ಟೆಂಬರ್ ವೇಳೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮುಸುಕಿನ ಜೋಳಕ್ಕೆ ಸೈನಿಕ ಹುಳುಗಳ ಕಾಟವೂ ಇದೆ’ ಎಂದು ಕೀಟ ವಿಜ್ಞಾನಿ ನಾಗನಹಳ್ಳಿ ಕೃಷಿ ವಿಜ್ಞಾನಿ ಉಮಾಶಂಕರ್ ಹೇಳಿದರು.</p>.<p>‘ಕಬ್ಬಿಗೆ ನೀಲಿ ಹುಳು ಮತ್ತಿತರ ಬಾಧೆ ಕಂಡು ಬಂದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಕೆಲವು ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಎಷ್ಟು ಹೆಕ್ಟೇರ್ ಪ್ರದೇಶದಲ್ಲಿ ಈ ಸಮಸ್ಯೆ ಇದೆ ಎಂಬುದರ ಸಮೀಕ್ಷೆ ನಡೆದಿಲ್ಲ. ಆದರೆ, ನಿರ್ವಹಣೆಗೆ ಸಂಬಂಧಿಸಿದಂತೆ ಬೆಳೆಗಾರರಿಗೆ ಅಗತ್ಯ ಸಲಹೆ ಸೂಚನೆ ನೀಡಲಾಗಿದೆ’ ಎಂದು ಅವರು ಹೇಳಿದರು.</p>.<p>‘ಕೃಷಿಕರು ಆತಂಕಕ್ಕೆ ಒಳಗಾಗಬೇಕಿಲ್ಲ. ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆಯಬಹುದು. ಉತ್ತಮ ಮಳೆಯಾದಲ್ಲಿ ಹುಳು ಇಲ್ಲವೆ ರೋಗಗಳ ಹಾವಳಿ ತಗ್ಗುತ್ತದೆ. ನಿರ್ವಹಣೆಗೆ ಬೇಕಾದ ಔಷಧ ಲಭ್ಯ ಇದ್ದು, ಇಲಾಖೆಯಿಂದ ಕೊಳ್ಳಬಹುದು’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.</p>.<p>ನಾಗೇನಹಳ್ಳಿ ಕೃಷಿ ವಿಜ್ಞಾನಿ ಉಮಾಶಂಕರ್, ಕೀಟತಜ್ಞ ಯೋಗೀಶ್, ಶಕ್ತಿಕುಮಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿ ಎ.ವೆಂಕಟರಂಗ ಶೆಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಳಂದೂರು:</strong> ತಾಲ್ಲೂಕಿನ ಕಬ್ಬು ಬೆಳೆಗಾರರಿಗೆ ಈಗ ಹುಳುಗಳ ಕಾಟ ಆರಂಭವಾಗಿದೆ. ಅಪರೂಪದ ನೀಲಿ ಬಗ್ ಹಾವಳಿಯಿಂದ ಕಬ್ಬಿನ ಇಳುವರಿ ಕುಸಿಯುವ ಆತಂಕ ಎದುರಾಗಿದ್ದು, ಈ ಬಗ್ಗೆ ಕೀಟ ವಿಜ್ಞಾನಿಗಳು ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಕಬ್ಬಿನ ತಾಕಿಗೆ ಭೇಟಿ ನೀಡಿ ಮಂಗಳವಾರ ಪರಿಶೀಲಿಸಿದರು.</p>.<p>ತಾಲ್ಲೂಕಿನ 3 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಕಬ್ಬಿನ ಹಿಡುವಳಿ ವಿಸ್ತರಿಸಿದೆ. ಕಳೆದೆರಡು ವರ್ಷಗಳಿಂದ ಬರದಿಂದ ಕಂಗೆಟ್ಟಿದ್ದ ರೈತರು, ಮುಂಗಾರು ಹಂಗಾಮಿನಲ್ಲಿ ಹೈಬ್ರಿಡ್ ತಳಿಗಳ ನಾಟಿಗೆ ಮುಂದಾಗಿದ್ದಾರೆ. ಆದರೆ, ಈ ಸಾಲಿನಲ್ಲಿ ಕಬ್ಬಿಗೆ ಹುಳುಗಳ ಕಾಟ ಹಾಗೂ ಬಿಳಿ ಮಾರು ಕಾಣಿಸಿಕೊಂಡು ನಿರೀಕ್ಷಿತ ಇಳುವರಿ ಕಾಣದಾಗಿದೆ.</p>.<p>ಕೆಲವು ಗದ್ದೆಗಳಲ್ಲಿ ಗೊಣ್ಣೆಹುಳು ಬಾಧೆಯೂ ಕಂಡು ಬಂದಿದೆ. ನೀಲಿ ಬಗ್ ಸೋಗನ್ನು ತಿಂದು, ಕಬ್ಬಿನ ಗಾತ್ರ ಕುಸಿಯುವಂತೆ ಮಾಡುತ್ತದೆ. ಇದರಿಂದ ಕಬ್ಬಿನ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಕೆಲವು ಕೀಟಬಾಧೆ ಔಷಧೋಪಚಾರಕ್ಕೂ ಬಗ್ಗುತ್ತಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದರು.</p>.<p>‘ಗೊಣ್ಣೆಹುಳು ಸ್ಥಾನಿಕ ಪೀಡೆ. ಶೇ 30ರಷ್ಟು ಬೆಳೆ ಹಾನಿ ಮಾಡುತ್ತದೆ. ಇವು ಬೇರು ಭಕ್ಷಿಸಿ, ಪೈರು ಹಳದಿ ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ. ತೇವಾಂಶ ಕೊರತೆಯಾದಲ್ಲಿ ಕಾಟ ಹೆಚ್ಚಾಗುತ್ತದೆ. ಜೊತೆಗೆ ಅಲ್ಲಲ್ಲಿ ಸೋಗು ಬಿಳಿಚಿಕೊಂಡು ಬಿಳಿ ಹೇನು ಕಾಟಕೊಡುತ್ತದೆ. ಈ ಬಾಧೆ ಆಗಸ್ಟ್- ಸೆಪ್ಟೆಂಬರ್ ವೇಳೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮುಸುಕಿನ ಜೋಳಕ್ಕೆ ಸೈನಿಕ ಹುಳುಗಳ ಕಾಟವೂ ಇದೆ’ ಎಂದು ಕೀಟ ವಿಜ್ಞಾನಿ ನಾಗನಹಳ್ಳಿ ಕೃಷಿ ವಿಜ್ಞಾನಿ ಉಮಾಶಂಕರ್ ಹೇಳಿದರು.</p>.<p>‘ಕಬ್ಬಿಗೆ ನೀಲಿ ಹುಳು ಮತ್ತಿತರ ಬಾಧೆ ಕಂಡು ಬಂದಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಕೆಲವು ತಾಕುಗಳಿಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಎಷ್ಟು ಹೆಕ್ಟೇರ್ ಪ್ರದೇಶದಲ್ಲಿ ಈ ಸಮಸ್ಯೆ ಇದೆ ಎಂಬುದರ ಸಮೀಕ್ಷೆ ನಡೆದಿಲ್ಲ. ಆದರೆ, ನಿರ್ವಹಣೆಗೆ ಸಂಬಂಧಿಸಿದಂತೆ ಬೆಳೆಗಾರರಿಗೆ ಅಗತ್ಯ ಸಲಹೆ ಸೂಚನೆ ನೀಡಲಾಗಿದೆ’ ಎಂದು ಅವರು ಹೇಳಿದರು.</p>.<p>‘ಕೃಷಿಕರು ಆತಂಕಕ್ಕೆ ಒಳಗಾಗಬೇಕಿಲ್ಲ. ಸಮೀಪದ ರೈತ ಸಂಪರ್ಕ ಕೇಂದ್ರದಲ್ಲಿ ಮಾಹಿತಿ ಪಡೆಯಬಹುದು. ಉತ್ತಮ ಮಳೆಯಾದಲ್ಲಿ ಹುಳು ಇಲ್ಲವೆ ರೋಗಗಳ ಹಾವಳಿ ತಗ್ಗುತ್ತದೆ. ನಿರ್ವಹಣೆಗೆ ಬೇಕಾದ ಔಷಧ ಲಭ್ಯ ಇದ್ದು, ಇಲಾಖೆಯಿಂದ ಕೊಳ್ಳಬಹುದು’ ಎಂದು ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಎ.ವೆಂಕಟರಂಗಶೆಟ್ಟಿ ಹೇಳಿದರು.</p>.<p>ನಾಗೇನಹಳ್ಳಿ ಕೃಷಿ ವಿಜ್ಞಾನಿ ಉಮಾಶಂಕರ್, ಕೀಟತಜ್ಞ ಯೋಗೀಶ್, ಶಕ್ತಿಕುಮಾರ್ ಹಾಗೂ ಕೃಷಿ ಇಲಾಖೆ ಅಧಿಕಾರಿ ಎ.ವೆಂಕಟರಂಗ ಶೆಟ್ಟಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>