<p><strong>ಗುಂಡ್ಲುಪೇಟೆ</strong>: ಕುಟುಂಬದ ಹಿರಿಯರಿಂದ ಬಳುವಳಿಯಾಗಿ ಬಂದ ಕಲೆಯಿಂದ ಜೀವನ ರೂಪಿಸಿಕೊಂಡವರು ತಾಲ್ಲೂಕಿನ ಬೆಟ್ಟದ ಮಾದಹಳ್ಳಿ ಗ್ರಾಮದ ಸಹೋದರರಾದ ನಾಗೇಂದ್ರ ಕುಮಾರ್ ಮತ್ತು ಪ್ರಸನ್ನ ಕುಮಾರ್.</p>.<p>ಇವರಿಬ್ಬರು ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು. ನಾಗೇಂದ್ರ ಕುಮಾರ್ ತಬಲ ಬಾರಿಸುವುದರಲ್ಲಿ ಪರಿಣಿತರಾದರೆ, ಪ್ರಸನ್ನ ಕುಮಾರ್ ಕೀಬೋರ್ಡ್ ನುಡಿಸುವುದರಲ್ಲಿ ನಿಷ್ಣಾತರು. ಅಣ್ಣ ನಾಗೇಂದ್ರ ಅವರಿಗೆ 15 ವರ್ಷಗಳ ಕಲಾ ಅನುಭವವಿದ್ದರೆ ಪ್ರಸನ್ನ ಅವರಿಗೆ 8 ವರ್ಷಗಳ ಅನುಭವ ಇದರು. ಇಬ್ಬರೂ ಜತೆಗೂಡಿ ಕಳೆದ ಎಂಟು ವರ್ಷಗಳಿಂದ ಜೊತೆಯಲ್ಲಿಯೇ ರಾಜ್ಯದಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ.</p>.<p>ಪಿಯುಸಿ ವ್ಯಾಸಂಗ ಮಾಡಿರುವ ನಾಗೇಂದ್ರ ಕಲೆಯ ಜೊತೆಯಲ್ಲಿ ವ್ಯವಸಾಯದಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಾತ ಚೆನ್ನವೀರ ದೇವರು ಹಾಗೂ ದೊಡ್ಡಪ್ಪ ಶಾಂತ ವೀರದೇವರ ಹಾದಿಯಲ್ಲಿ ಸಾಗುತ್ತಿರುವ ಸಹೋದರರು ಕಲೆಯಲ್ಲಿ ಬದುಕುಕೊಟ್ಟಿಕೊಳ್ಳುವುದರ ಜತೆಗೆ ಕಲೆಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.</p>.<p>ನಾಗೇಂದ್ರ ಕರ್ನಾಟಕ್ ಸಂಗೀತ ತರಬೇತಿ ಪಡೆದಿದ್ದು ತಾಳಬದ್ಧವಾಗಿ ತಬಲ ಬಾರಿಸುತ್ತಾ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಪ್ರವೀಣರು. ಬಿ.ಕಾಂ ಪದವೀದರ ಪ್ರಸನ್ನ ಕುಮಾರ್ ಕರ್ನಾಟಕ್ ಮತ್ತು ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿದ್ದು ಜೊತೆಯಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.</p>.<p>ಇಬ್ಬರು ಸಹೋದರರು ನಾಡಹಬ್ಬ ದಸರಾ ಸೇರಿದಂತೆ ಹಲವು ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಸರು ವಾಸಿಯಾಗಿದ್ದಾರೆ. ತಬಲ ಮಾಂತ್ರಿಕ ಕೊಳ್ಳೇಗಾಲದ ದಶಪಾಲ ಅವರ ಶಿಷ್ಯ ನಾಗೇಂದ್ರ ಕುಮಾರ್. </p>.<p>ಕುರುಕ್ಷೇತ್ರ, ದಕ್ಷಯಜ್ಞ, ಪ್ರಭುಲಿಂಗಲೀಲೆ ಮುಂತಾದ ನಾಟಕಗಳನ್ನು ಕಲಿಸುವಲ್ಲೂ ತೊಡಗಿಸಿಕೊಂಡಿದ್ದು ಸ್ವತಃ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸಹೋದರರ ಕಲಾ ಸಾಧನೆಗೆ ಸರ್ಕಾರದಿಂದ ಹಾಗೂ ಹಲವು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಗೌರವಗಳು ಸಂದಿವೆ.</p>.<p><strong>ಕಲೆಯ ಉಳಿವಿಗೆ ತರಬೇತಿ </strong></p><p>‘ಹಿರಿಯರಿಂದ ಬಂದ ಕಲೆ ನಮ್ಮ ತಲೆಮಾರಿಗಲ್ಲದೆ ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಉದ್ದೇಶದಿಂದ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಕಲೆಗಳನ್ನು ಶಿಸ್ತಿನಿಂದ ಕಲಿತು ಬದುಕಿಗೆ ಪೂರಕವಾಗಿಯೂ ಅಳವಡಿಸಿಕೊಳ್ಳಬಹುದು’ ಎಂದು ಸಹೋದರಾದ ನಾಗೇಂದ್ರ ಹಾಗೂ ಪ್ರಸನ್ನ ಕುಮಾರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಂಡ್ಲುಪೇಟೆ</strong>: ಕುಟುಂಬದ ಹಿರಿಯರಿಂದ ಬಳುವಳಿಯಾಗಿ ಬಂದ ಕಲೆಯಿಂದ ಜೀವನ ರೂಪಿಸಿಕೊಂಡವರು ತಾಲ್ಲೂಕಿನ ಬೆಟ್ಟದ ಮಾದಹಳ್ಳಿ ಗ್ರಾಮದ ಸಹೋದರರಾದ ನಾಗೇಂದ್ರ ಕುಮಾರ್ ಮತ್ತು ಪ್ರಸನ್ನ ಕುಮಾರ್.</p>.<p>ಇವರಿಬ್ಬರು ದೊಡ್ಡಪ್ಪ-ಚಿಕ್ಕಪ್ಪನ ಮಕ್ಕಳು. ನಾಗೇಂದ್ರ ಕುಮಾರ್ ತಬಲ ಬಾರಿಸುವುದರಲ್ಲಿ ಪರಿಣಿತರಾದರೆ, ಪ್ರಸನ್ನ ಕುಮಾರ್ ಕೀಬೋರ್ಡ್ ನುಡಿಸುವುದರಲ್ಲಿ ನಿಷ್ಣಾತರು. ಅಣ್ಣ ನಾಗೇಂದ್ರ ಅವರಿಗೆ 15 ವರ್ಷಗಳ ಕಲಾ ಅನುಭವವಿದ್ದರೆ ಪ್ರಸನ್ನ ಅವರಿಗೆ 8 ವರ್ಷಗಳ ಅನುಭವ ಇದರು. ಇಬ್ಬರೂ ಜತೆಗೂಡಿ ಕಳೆದ ಎಂಟು ವರ್ಷಗಳಿಂದ ಜೊತೆಯಲ್ಲಿಯೇ ರಾಜ್ಯದಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದಾರೆ.</p>.<p>ಪಿಯುಸಿ ವ್ಯಾಸಂಗ ಮಾಡಿರುವ ನಾಗೇಂದ್ರ ಕಲೆಯ ಜೊತೆಯಲ್ಲಿ ವ್ಯವಸಾಯದಲ್ಲೂ ತೊಡಗಿಸಿಕೊಂಡಿದ್ದಾರೆ. ಇವರ ತಾತ ಚೆನ್ನವೀರ ದೇವರು ಹಾಗೂ ದೊಡ್ಡಪ್ಪ ಶಾಂತ ವೀರದೇವರ ಹಾದಿಯಲ್ಲಿ ಸಾಗುತ್ತಿರುವ ಸಹೋದರರು ಕಲೆಯಲ್ಲಿ ಬದುಕುಕೊಟ್ಟಿಕೊಳ್ಳುವುದರ ಜತೆಗೆ ಕಲೆಯನ್ನು ಬೆಳೆಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.</p>.<p>ನಾಗೇಂದ್ರ ಕರ್ನಾಟಕ್ ಸಂಗೀತ ತರಬೇತಿ ಪಡೆದಿದ್ದು ತಾಳಬದ್ಧವಾಗಿ ತಬಲ ಬಾರಿಸುತ್ತಾ ಪ್ರೇಕ್ಷಕರನ್ನು ರಂಜಿಸುವುದರಲ್ಲಿ ಪ್ರವೀಣರು. ಬಿ.ಕಾಂ ಪದವೀದರ ಪ್ರಸನ್ನ ಕುಮಾರ್ ಕರ್ನಾಟಕ್ ಮತ್ತು ಹಿಂದೂಸ್ತಾನಿ ಸಂಗೀತ ಅಭ್ಯಾಸ ಮಾಡಿದ್ದು ಜೊತೆಯಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ.</p>.<p>ಇಬ್ಬರು ಸಹೋದರರು ನಾಡಹಬ್ಬ ದಸರಾ ಸೇರಿದಂತೆ ಹಲವು ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಬೆಂಗಳೂರು, ಮೈಸೂರು, ರಾಮನಗರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳಲ್ಲಿ ಹೆಸರು ವಾಸಿಯಾಗಿದ್ದಾರೆ. ತಬಲ ಮಾಂತ್ರಿಕ ಕೊಳ್ಳೇಗಾಲದ ದಶಪಾಲ ಅವರ ಶಿಷ್ಯ ನಾಗೇಂದ್ರ ಕುಮಾರ್. </p>.<p>ಕುರುಕ್ಷೇತ್ರ, ದಕ್ಷಯಜ್ಞ, ಪ್ರಭುಲಿಂಗಲೀಲೆ ಮುಂತಾದ ನಾಟಕಗಳನ್ನು ಕಲಿಸುವಲ್ಲೂ ತೊಡಗಿಸಿಕೊಂಡಿದ್ದು ಸ್ವತಃ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಸಹೋದರರ ಕಲಾ ಸಾಧನೆಗೆ ಸರ್ಕಾರದಿಂದ ಹಾಗೂ ಹಲವು ಸಂಘ ಸಂಸ್ಥೆಗಳಿಂದ ಪ್ರಶಸ್ತಿ ಗೌರವಗಳು ಸಂದಿವೆ.</p>.<p><strong>ಕಲೆಯ ಉಳಿವಿಗೆ ತರಬೇತಿ </strong></p><p>‘ಹಿರಿಯರಿಂದ ಬಂದ ಕಲೆ ನಮ್ಮ ತಲೆಮಾರಿಗಲ್ಲದೆ ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಉದ್ದೇಶದಿಂದ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಕಲೆಗಳನ್ನು ಶಿಸ್ತಿನಿಂದ ಕಲಿತು ಬದುಕಿಗೆ ಪೂರಕವಾಗಿಯೂ ಅಳವಡಿಸಿಕೊಳ್ಳಬಹುದು’ ಎಂದು ಸಹೋದರಾದ ನಾಗೇಂದ್ರ ಹಾಗೂ ಪ್ರಸನ್ನ ಕುಮಾರ್ ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>