<p><strong>ಚಾಮರಾಜನಗರ:</strong> ರಸ್ತೆಯಲ್ಲಿ ಸಿಕ್ಕಿದ್ದ 16 ಗ್ರಾಂ ತೂಕದ ಚಿನ್ನದ ಸರವನ್ನು ಪೊಲೀಸರ ನೆರವು ಪಡೆದು ವಾರಸುದಾರರಿಗೆ ಒಪ್ಪಿಸುವ ಮೂಲಕ ನಗರದ ಉದ್ಯಮಿ ಬಿ.ಮಹೇಶ್ ಕುಮಾರ್ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.</p>.<p>ಸಂತೇಮರಹಳ್ಳಿಯಲ್ಲಿ ಪ್ರೀಮಿಯಂ ಮೋಟಾರ್ಟ್ ಹೆಸರಿ ದ್ವಿಚಕ್ರವಾಹನಗಳ ಶೋ ರೂಂ ಮಾಲೀಕ ಹಾಗೂ ಚಾಮರಾಜನಗರದ ಮರ್ಚೆಂಟ್ ಕೊ–ಆಪರೇಟಿವ್ ಸಂಸ್ಥೆಯ ಅಧ್ಯಕ್ಷ ಬಿ.ಮಹೇಶ್ ಕುಮಾರ್ ಅವರು ನವೆಂಬರ್ 1ರಂದು ಬೆಳಿಗ್ಗೆ ನಗರದ ನ್ಯಾಯಾಲಯದ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಸರವೊಂದು ಸಿಕ್ಕಿತ್ತು.</p>.<p>ಅದನ್ನು ಪರಿಶೀಲಿಸಿದಾಗ ಚಿನ್ನದ ಸರ ಎಂಬುದು ಖಚಿತವಾಯಿತು. ಸ್ಥಳದಲ್ಲಿ ಯಾರೂ ಇಲ್ಲದೇ ಇದ್ದುದರಿಂದ, ಈ ಮಾಹಿತಿಯನ್ನು ಪಟ್ಟಣ ಪೊಲೀಸರಿಗೆ ತಿಳಿಸಿದ್ದು ಮಾತ್ರವಲ್ಲದೇ ವಾಟ್ಸ್ ಆ್ಯಪ್ ಗ್ರೂಪುಗಳು ಹಾಗೂ ಫೇಸ್ಬುಕ್ನಲ್ಲೂ ಅಪ್ಲೋಡ್ ಮಾಡಿದ್ದರು.</p>.<p>ಅದು ಕೊಳ್ಳೇಗಾಲ ನಿವಾಸಿ ಚಿದಾನಂದ ಎಂಬುವವರಿಗೆ ಸೇರಿದ್ದ ಸರವಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಅವರು ಪಟ್ಟಣ ಠಾಣೆಯ ಪೊಲೀಸರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಸರ ತಮ್ಮದೇ ಎಂಬುದಕ್ಕೆ ಪೂರಕವಾದ ಸಾಕ್ಷ್ಯ ಒದಗಿಸಿದರು.</p>.<p>ಮಂಗಳವಾರ ಪಟ್ಟಣ ಠಾಣೆ ಇನ್ಸ್ಪೆಕ್ಟರ್ ಅವರ ಸಮ್ಮುಖದಲ್ಲಿ ಮಹೇಶ್ ಕುಮಾರ್ ಅವರು ಸರವನ್ನು ಚಿದಾನಂದ ಅವರಿಗೆ ನೀಡಿದರು.</p>.<p>ಉದ್ಯಮಿ ಎ.ಜಯಸಿಂಹ, ವೆಂಕಟೇಶ್, ವಿಜಯಕುಮಾರ್, ಶಿವಣ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ರಸ್ತೆಯಲ್ಲಿ ಸಿಕ್ಕಿದ್ದ 16 ಗ್ರಾಂ ತೂಕದ ಚಿನ್ನದ ಸರವನ್ನು ಪೊಲೀಸರ ನೆರವು ಪಡೆದು ವಾರಸುದಾರರಿಗೆ ಒಪ್ಪಿಸುವ ಮೂಲಕ ನಗರದ ಉದ್ಯಮಿ ಬಿ.ಮಹೇಶ್ ಕುಮಾರ್ ಅವರು ಪ್ರಾಮಾಣಿಕತೆ ಮೆರೆದಿದ್ದಾರೆ.</p>.<p>ಸಂತೇಮರಹಳ್ಳಿಯಲ್ಲಿ ಪ್ರೀಮಿಯಂ ಮೋಟಾರ್ಟ್ ಹೆಸರಿ ದ್ವಿಚಕ್ರವಾಹನಗಳ ಶೋ ರೂಂ ಮಾಲೀಕ ಹಾಗೂ ಚಾಮರಾಜನಗರದ ಮರ್ಚೆಂಟ್ ಕೊ–ಆಪರೇಟಿವ್ ಸಂಸ್ಥೆಯ ಅಧ್ಯಕ್ಷ ಬಿ.ಮಹೇಶ್ ಕುಮಾರ್ ಅವರು ನವೆಂಬರ್ 1ರಂದು ಬೆಳಿಗ್ಗೆ ನಗರದ ನ್ಯಾಯಾಲಯದ ರಸ್ತೆಯಲ್ಲಿ ವಾಯುವಿಹಾರಕ್ಕೆ ತೆರಳಿದ್ದ ಸಂದರ್ಭದಲ್ಲಿ ಸರವೊಂದು ಸಿಕ್ಕಿತ್ತು.</p>.<p>ಅದನ್ನು ಪರಿಶೀಲಿಸಿದಾಗ ಚಿನ್ನದ ಸರ ಎಂಬುದು ಖಚಿತವಾಯಿತು. ಸ್ಥಳದಲ್ಲಿ ಯಾರೂ ಇಲ್ಲದೇ ಇದ್ದುದರಿಂದ, ಈ ಮಾಹಿತಿಯನ್ನು ಪಟ್ಟಣ ಪೊಲೀಸರಿಗೆ ತಿಳಿಸಿದ್ದು ಮಾತ್ರವಲ್ಲದೇ ವಾಟ್ಸ್ ಆ್ಯಪ್ ಗ್ರೂಪುಗಳು ಹಾಗೂ ಫೇಸ್ಬುಕ್ನಲ್ಲೂ ಅಪ್ಲೋಡ್ ಮಾಡಿದ್ದರು.</p>.<p>ಅದು ಕೊಳ್ಳೇಗಾಲ ನಿವಾಸಿ ಚಿದಾನಂದ ಎಂಬುವವರಿಗೆ ಸೇರಿದ್ದ ಸರವಾಗಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಅವರು ಪಟ್ಟಣ ಠಾಣೆಯ ಪೊಲೀಸರನ್ನು ಸಂಪರ್ಕಿಸಿ ವಿಷಯ ತಿಳಿಸಿದರು. ಸರ ತಮ್ಮದೇ ಎಂಬುದಕ್ಕೆ ಪೂರಕವಾದ ಸಾಕ್ಷ್ಯ ಒದಗಿಸಿದರು.</p>.<p>ಮಂಗಳವಾರ ಪಟ್ಟಣ ಠಾಣೆ ಇನ್ಸ್ಪೆಕ್ಟರ್ ಅವರ ಸಮ್ಮುಖದಲ್ಲಿ ಮಹೇಶ್ ಕುಮಾರ್ ಅವರು ಸರವನ್ನು ಚಿದಾನಂದ ಅವರಿಗೆ ನೀಡಿದರು.</p>.<p>ಉದ್ಯಮಿ ಎ.ಜಯಸಿಂಹ, ವೆಂಕಟೇಶ್, ವಿಜಯಕುಮಾರ್, ಶಿವಣ್ಣ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>