ಸಿ.ಮಾದೇಗೌಡ ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ
ಸಿ.ಎಂ.ನರಸಿಂಹ ಮೂರ್ತಿ
ಕೆ.ವೆಂಕಟರಾಜು
ಯಾರು ಏನಂತಾರೆ ? ‘ಮೂಲನಿವಾಸಿಗಳ ಸಮಸ್ಯೆಗೆ ಸ್ಪಂದಿಸಿ‘ ನೆಲದ ಮೂಲನಿವಾಸಿಗಳಾದ ಆದಿವಾಸಿಗಳು ಇಂದಿಗೂ ಸಮಾಜದ ಮುಖ್ಯವಾಹಿನಿಗೆ ತೆರೆದುಕೊಂಡಿಲ್ಲ. ಅರಣ್ಯ ಹಕ್ಕು ಕಾಯ್ದೆಯ ಲಾಭ ಎಲ್ಲರಿಗೂ ದೊರೆತಿಲ್ಲ. ಸಮುದಾಯ ಶಿಕ್ಷಣದಿಂದ ವಂಚಿತವಾಗಿದೆ. ಸರ್ಕಾರ ಆಶ್ರಮ ಶಾಲೆಗಳನ್ನು ಮೇಲ್ದರ್ಜೆಗೇರಿಸಿದ್ದರೂ ಕಾಯಂ ಶಿಕ್ಷಕರನ್ನು ನೇಮಕ ಮಾಡಿಲ್ಲ ಹೊಸ ಕೊಠಡಿಗಳ ನಿರ್ಮಾಣ ಮಾಡಿಲ್ಲ. ಹಾಡಿಗಳಿಗೆ ಮೂಲಸೌಲಭ್ಯಗಳು ದೊರೆತಿಲ್ಲ. ಹೊಸ ವರ್ಷ ನಿರೀಕ್ಷೆಗಳನ್ನು ಹುಸಿ ಮಾಡುವುದಿಲ್ಲ ಎಂಬ ನಂಬಿಕೆ ಇದೆ.
ಡಾ.ಸಿ.ಮಾದೇಗೌಡ
ಆದಿವಾಸಿ ಸಮುದಾಯಗಳ ಮುಖಂಡ ‘ವೈದ್ಯಕೀಯ ಕ್ಷೇಮನಿಧಿ ಸ್ಥಾಪಿಸಿ’ ಜನಪದ ಕಲಾವಿದರು ಅನಾರೋಗ್ಯಕ್ಕೆ ತುತ್ತಾಗುಗುತ್ತಿದ್ದು ವೈದ್ಯಕೀಯ ನೆರವು ಸಿಗಬೇಕು ಜಾನಪದ ಕಲಾವಿದರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸಬೇಕು
ಪುಟ್ಟಮಲ್ಲೇಗೌಡ
ಜಾನಪದ ಟ್ರಸ್ಟ್ ನಿರ್ಮಾಣಕ್ಕೆ ಸರ್ಕಾರ ಹಸಿರು ನಿಶಾನೆ ತೋರಿದ್ದರೂ ಇದುವರೆಗೂ ಅನುಷ್ಠಾನಗೊಂಡಿಲ್ಲ ಕಲಾವಿದರಿಗೆ ತರಬೇತಿ ಆರ್ಥಿಕ ನೆರವು ದೊರೆಯಬೇಕು. ಸಿಎಂ. ಕೃಷ್ಣಮೂರ್ತಿ ಜಾನಪದ ಕಲಾವಿದ ‘ಕೃಷಿ ಜಮೀನು ಪೋಡು ಮಾಡಿ’ ಹಿಂದಿನ ಜಿಲ್ಲಾಧಿಕಾರಿ ಶಿಲ್ಪಾನಾಗ್ ಕೈಗೆತ್ತಿಕೊಂಡಿದ್ದ ಅಭಿವೃದ್ಧಿ ಕಾಮಗಾರಿಗಳನ್ನು ಇಂದಿನ ಜಿಲ್ಲಾಧಿಕಾರಿ ಮುಂದುವರಿಸಬೇಕು. ಕೃಷಿ ಜಮೀನು ಪೋಡುಗಳಾಗದೆ ಸರ್ಕಾರದ ಸವಲತ್ತುಗಳು ಸಿಗದೆ ವಂಚಿತವಾಗಿದ್ದು ಪೋಡು ಅಭಿಯಾನ ನಡೆಯಬೇಕು. ಜಿಲ್ಲೆಯಲ್ಲಿ ಹಸಿರೀಕರಣಕ್ಕೆ ಒತ್ತು ನೀಡಬೇಕು ಚಾಮರಾಜೇಶ್ವರ ನಿರ್ಮಾಣವಾಗಿ 200 ವರ್ಷಗಳು ಸಲ್ಲುತ್ತಿದ್ದು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಬೇಕು.