<p><strong>ಚಾಮರಾಜನಗರ:</strong> ರಾಮಸಮುದ್ರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳು ದಾಂಧಲೆ ನಡೆಸಿದ್ದು ಶಾಲಾ ಪರಿಕರಗಳನ್ನು ಧ್ವಂಸಗೊಳಿಸಿದ್ದಾರೆ.</p>.<p>ಶಾಲೆಯ 9 ಕೊಠಡಿಗಳ ಪೈಕಿ 6 ಕೊಠಡಿಗಳ ಬೀಗ ಹೊಡೆದು ಹಾಕಿರುವ ದುಷ್ಕರ್ಮಿಗಳು ಪೀಠೋಪಕರಣಗಳು, ಪುಸ್ತಕಗಳು ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಹಾಳುಗೆಡವಿದ್ದಾರೆ. </p>.<p>ಜಾತಿ ಜನಗಣತಿ ಕಾರ್ಯಕ್ಕೆ ಶಾಲೆಯ ಸೀಲ್ ತೆಗೆದುಕೊಂಡು ಹೋಗಲು ಬಂದಾಗ ದಾಂಧಲೆ ನಡೆಸಿರುವುದು ಗಮನಕ್ಕೆ ಬಂದಿದೆ ಎಂದು ಪ್ರಭಾರ ಮುಖ್ಯ ಶಿಕ್ಷಕಿ ಮಾದಲಾಂಭಿಕೆ ಪ್ರಜಾವಾಣಿಗೆ ಮಾಹಿತಿ ನೀಡಿದರು.</p>.<p>ಹಾನಿಯ ವಿವರ:</p>.<p>ಮುಖ್ಯ ಶಿಕ್ಷಕರ ಕೊಠಡಿಯ ಡೋರ್ ಮುರಿದು ಅಲ್ಮೆರಾಗಳನ್ನು ಒಡೆದು ಅದರೊಳಗಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಅಡುಗೆ ಮನೆಯಲ್ಲಿ ಮಲ–ಮೂತ್ರ ಎರಚಿದ್ದು, ವಿಜ್ಞಾನ ಮಾದರಿ, ಡಾ.ರಾಧಾಕೃಷ್ಣನ್ ಭಾವಚಿತ್ರ, ಹಾಲಿನ ಪುಡಿ, ರೇಡಿಯೋ ಸಹಿತ ಹಲವು ವಸ್ತುಗಳನ್ನು ಹಾಳುಗೆಡವಾಗಿದೆ.</p>.<p>ಮಕ್ಕಳಿಗೆ ಬಿಸಿಯೂಟ ತಯಾರಿಸಲು ದಾಸ್ತಾನು ಕೊಠಡಿಯಲ್ಲಿ ಇರಿಸಲಾಗಿದ್ದ ಆಹಾರ ಪದಾರ್ಥಗಳನ್ನು ಸಂಪೂರ್ಣ ನಾಶ ಮಾಡಲಾಗಿದ್ದು ಅಡುಗೆ ಎಣ್ಣೆಯನ್ನು ಬೇಳೆಯ ಚೀಲದೊಳಗೆ ಚೆಲ್ಲಲಾಗಿದೆ, ಹಾಲಿನ ಪುಡಿಯನ್ನು ಕೊಠಡಿಯು ತುಂಬೆಲ್ಲ ಎರಚಲಾಗಿದೆ ಎಂದು ಮಾದಲಾಂಭಿಕೆ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ರಾಮಸಮುದ್ರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳು ದಾಂಧಲೆ ನಡೆಸಿದ್ದು ಶಾಲಾ ಪರಿಕರಗಳನ್ನು ಧ್ವಂಸಗೊಳಿಸಿದ್ದಾರೆ.</p>.<p>ಶಾಲೆಯ 9 ಕೊಠಡಿಗಳ ಪೈಕಿ 6 ಕೊಠಡಿಗಳ ಬೀಗ ಹೊಡೆದು ಹಾಕಿರುವ ದುಷ್ಕರ್ಮಿಗಳು ಪೀಠೋಪಕರಣಗಳು, ಪುಸ್ತಕಗಳು ಸೇರಿದಂತೆ ಕೈಗೆ ಸಿಕ್ಕ ವಸ್ತುಗಳನ್ನು ಹಾಳುಗೆಡವಿದ್ದಾರೆ. </p>.<p>ಜಾತಿ ಜನಗಣತಿ ಕಾರ್ಯಕ್ಕೆ ಶಾಲೆಯ ಸೀಲ್ ತೆಗೆದುಕೊಂಡು ಹೋಗಲು ಬಂದಾಗ ದಾಂಧಲೆ ನಡೆಸಿರುವುದು ಗಮನಕ್ಕೆ ಬಂದಿದೆ ಎಂದು ಪ್ರಭಾರ ಮುಖ್ಯ ಶಿಕ್ಷಕಿ ಮಾದಲಾಂಭಿಕೆ ಪ್ರಜಾವಾಣಿಗೆ ಮಾಹಿತಿ ನೀಡಿದರು.</p>.<p>ಹಾನಿಯ ವಿವರ:</p>.<p>ಮುಖ್ಯ ಶಿಕ್ಷಕರ ಕೊಠಡಿಯ ಡೋರ್ ಮುರಿದು ಅಲ್ಮೆರಾಗಳನ್ನು ಒಡೆದು ಅದರೊಳಗಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಅಡುಗೆ ಮನೆಯಲ್ಲಿ ಮಲ–ಮೂತ್ರ ಎರಚಿದ್ದು, ವಿಜ್ಞಾನ ಮಾದರಿ, ಡಾ.ರಾಧಾಕೃಷ್ಣನ್ ಭಾವಚಿತ್ರ, ಹಾಲಿನ ಪುಡಿ, ರೇಡಿಯೋ ಸಹಿತ ಹಲವು ವಸ್ತುಗಳನ್ನು ಹಾಳುಗೆಡವಾಗಿದೆ.</p>.<p>ಮಕ್ಕಳಿಗೆ ಬಿಸಿಯೂಟ ತಯಾರಿಸಲು ದಾಸ್ತಾನು ಕೊಠಡಿಯಲ್ಲಿ ಇರಿಸಲಾಗಿದ್ದ ಆಹಾರ ಪದಾರ್ಥಗಳನ್ನು ಸಂಪೂರ್ಣ ನಾಶ ಮಾಡಲಾಗಿದ್ದು ಅಡುಗೆ ಎಣ್ಣೆಯನ್ನು ಬೇಳೆಯ ಚೀಲದೊಳಗೆ ಚೆಲ್ಲಲಾಗಿದೆ, ಹಾಲಿನ ಪುಡಿಯನ್ನು ಕೊಠಡಿಯು ತುಂಬೆಲ್ಲ ಎರಚಲಾಗಿದೆ ಎಂದು ಮಾದಲಾಂಭಿಕೆ ಮಾಹಿತಿ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>