<p><strong>ಚಾಮರಾಜನಗರ</strong>: ಮಾರುಕಟ್ಟೆಗೆ ತೊಗರಿಕಾಯಿ ಹಾಗೂ ಅವರೆಕಾಯಿ ಲಗ್ಗೆ ಇಟ್ಟಿದ್ದು, ಖರೀದಿ ಜೋರಾಗಿದೆ. ಚಳಿಗಾಲದಲ್ಲಿ ಮಾತ್ರ ವಿಶೇಷವಾಗಿ ದೊರೆಯುವ ಕಾರಣಕ್ಕೆ ತೊಗರಿ ಹಾಗೂ ಅವರೆ ಖರೀದಿಗೆ ಗ್ರಾಹಕರು ಹೆಚ್ಚು ಆಸಕ್ತಿ ತೋರುತ್ತಿರುವುದು ಕಂಡುಬರುತ್ತಿದೆ. ಪರಿಣಾಮ ಇತರ ತರಕಾರಿಗಳ ಬೇಡಿಕೆ ಕುಗ್ಗಿದೆ ಎನ್ನುತ್ತಾರೆ ವ್ಯಾಪಾರಿಗಳು.</p><p>‘ಸಾಂಬಾರ್, ಪಲ್ಯ, ಸಾಗು ಸಹಿತ ವಿವಿಧ ಖಾದ್ಯಗಳಿಗೆ ತೊಗರಿ ಹಾಗೂ ಅವರೆಕಾಯಿ ವಿಶೇಷ ರುಚಿ ಕೊಡುತ್ತದೆ. ಬೆಳಗಿನ ಉಪಾಹಾರಕ್ಕೂ ಬಳಕೆ ಮಾಡುವುದರಿಂದ ಅಡುಗೆ ಮನೆಯಲ್ಲಿ ತೊಗರಿ ಹಾಗೂ ಅವರೆ ಘಮಲು ಹೆಚ್ಚು ಆವರಿಸಿಕೊಂಡಿದೆ’ ಎನ್ನುತ್ತಾರೆ ಗೃಹಿಣಿ ಲಾವಣ್ಯ.</p><p>‘ಬೀನ್ಸ್, ಕ್ಯಾರೆಟ್, ಬೆಂಡೆ, ಬದನೆ ಸಹಿತ ಇತರ ತರಕಾರಿಗಳು ವರ್ಷಪೂರ್ತಿ ಲಭ್ಯವಾಗುತ್ತವೆ. ಆದರೆ, ಹಸಿ ತೊಗರಿ ಹಾಗೂ ಅವರೆ ಸೀಸನ್ನಲ್ಲಿ ಮಾತ್ರ ಲಭ್ಯವಾಗುವುದರಿಂದ ಸಹಜವಾಗಿ ಬಳಕೆ ಹೆಚ್ಚಾಗುತ್ತದೆ. ತಾಜಾ ಹಾಗೂ ರುಚಿಕರವಾಗಿರುವುದರಿಂದ ಮನೆ ಮಂದಿ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ’ ಎನ್ನುತ್ತಾರೆ ಅವರು.</p><p><strong>ದರ ದುಬಾರಿ: ‘</strong>ಬೇಡಿಕೆ ಹೆಚ್ಚಾಗಿರುವ ಕಾರಣಕ್ಕೆ ತೊಗರಿ ಹಾಗೂ ಅವರೆ ದರ ದುಬಾರಿಯಾಗಿದ್ದು ಕೆ.ಜಿಗೆ ತಲಾ ₹60ಕ್ಕೆ ಮಾರಾಟವಾಗುತ್ತಿದೆ. ಸೀಸನ್ ಮುಗಿಯುತ್ತಾ ಬಂದರೆ ಸ್ವಲ್ಪ ಇಳಿಮುಖವಾಗಬಹುದು’ ಎನ್ನುತ್ತಾರೆ ವ್ಯಾಪಾರಿ ಚಂದ್ರಶೇಖರ್.</p><p><strong>ತರಕಾರಿ ದರ ಸ್ಥಿರ:</strong> ಮಾರುಕಟ್ಟೆ ಯಲ್ಲಿ ಬಹುತೇಕ ತರಕಾರಿಗಳ ದರ ಸ್ಥಿರವಾಗಿದೆ. ಗಗನಕ್ಕೇರಿ ಕುಳಿತಿರುವ ಬೆಳ್ಳುಳ್ಳಿ ದರ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಗುಣಮಟ್ಟ ಹಾಗೂ ಗಾತ್ರದ ಮೇಲೆ ಕೆ.ಜಿಗೆ ₹320 ರಿಂದ ₹400ರವರೆಗೆ ಮಾರಾಟವಾಗುತ್ತಿದೆ. ಈರುಳ್ಳಿ ದರವೂ ತಿಂಗಳಿಗೂ ಹೆಚ್ಚು ಕಾಲದಿಂದ ಸ್ಥಿರವಾಗಿದ್ದು ಬೇಡಿಕೆ ಉಳಿಸಿಕೊಂಡಿದೆ. ದಪ್ಪ ಈರುಳ್ಳಿಗೆ ಕೆ.ಜಿಗೆ ₹60 ಇದ್ದರೆ, ಸಣ್ಣ ಈರುಳ್ಳಿ ಕೆ.ಜಿಗೆ ₹50 ದರ ಇದೆ ಎನ್ನುತ್ತಾರೆ ವ್ಯಾಪಾರಿಗಳು.</p><p>ಟೊಮೆಟೊ, ಕ್ಯಾರೆಟ್, ಬೀನ್ಸ್ ಬೆಂಡೆ, ಗೋರಿ ಕಾಯಿ, ಬೀಟ್ರೂಟ್ ದರ ಕೆ.ಜಿಗೆ ₹40 ಇದ್ದು ಗುಣಮಟ್ಟದಲ್ಲಿ ಕೊರತೆ ಕಾಣುತ್ತಿದೆ. ಶೀತದ ವಾತಾವರಣ ತರಕಾರಿ ಬೇಗ ಕೆಡಲು ಕಾರಣ ಎನ್ನುತ್ತಾರೆ ವ್ಯಾಪಾರಿಗಳು.</p><p><strong>ಹೂವಿನ ದರ ದುಬಾರಿ:</strong> ‘ಕಾರ್ತೀಕ ಮಾಸದ ಹಿನ್ನೆಲೆಯಲ್ಲಿ ಹೂವಿನ ದರವೂ ದುಬಾರಿಯಾಗಿದ್ದು ಎರಡು ದಿನಗಳ ಹಿಂದೆ ಚೆಂಡು ಹೂ ಕೆ.ಜಿಗೆ₹ 20 ರಿಂದ ₹30, ಗುಲಾಬಿ ₹240 ದರ ಇದೆ. ಕಾರ್ತೀಕ ಮಾಸ ಮುಗಿಯುತ್ತಾ ಬರುತ್ತಿರುವುದರಿಂದ ಮುಂದಿನ ವಾರ ದರ ಬಹುತೇಕ ಇಳಿಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ’ ಎನ್ನುತ್ತಾರೆ ವ್ಯಾಪಾರಿಗಳು.</p><p><strong>ಹಣ್ಣಿನ ದರ</strong>: ಮಾರುಕಟ್ಟೆಗೆ ಸೇಬಿನ ಪೂರೈಕೆ ಹೆಚ್ಚಿದ್ದು ಶಿಮ್ಲಾ ಸೇಬು ಕೆ.ಜಿಗೆ ₹120 ಇದ್ದರೆ, ಇರಾನ್ ಆ್ಯಪಲ್ ₹160ರವರೆಗೂ ಇದೆ. ದಾಳಿಂಬೆ ಕೆ.ಜಿಗೆ ₹120 ರಿಂದ ₹160, ಪಪ್ಪಾಯ ₹30 ರಿಂದ ₹40, ದ್ರಾಕ್ಷಿ ₹120 ರಿಂದ ₹140, ಕಿತ್ತಳೆ ₹50 ರಿಂದ ₹70, ಮೋಸಂಬಿ ₹90ರಿಂದ ₹100, ಸೀಬೆ ₹80 ರಿಂದ ₹100 ದರ ಇದೆ. ಏಲಕ್ಕಿ ಬಾಳೆ ಕೆ.ಜಿಗೆ 40, ಪಚ್ಚಬಾಳೆ ಕೆ.ಜಿಗೆ ₹30 ರಿಂದ₹ 40 ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ</strong>: ಮಾರುಕಟ್ಟೆಗೆ ತೊಗರಿಕಾಯಿ ಹಾಗೂ ಅವರೆಕಾಯಿ ಲಗ್ಗೆ ಇಟ್ಟಿದ್ದು, ಖರೀದಿ ಜೋರಾಗಿದೆ. ಚಳಿಗಾಲದಲ್ಲಿ ಮಾತ್ರ ವಿಶೇಷವಾಗಿ ದೊರೆಯುವ ಕಾರಣಕ್ಕೆ ತೊಗರಿ ಹಾಗೂ ಅವರೆ ಖರೀದಿಗೆ ಗ್ರಾಹಕರು ಹೆಚ್ಚು ಆಸಕ್ತಿ ತೋರುತ್ತಿರುವುದು ಕಂಡುಬರುತ್ತಿದೆ. ಪರಿಣಾಮ ಇತರ ತರಕಾರಿಗಳ ಬೇಡಿಕೆ ಕುಗ್ಗಿದೆ ಎನ್ನುತ್ತಾರೆ ವ್ಯಾಪಾರಿಗಳು.</p><p>‘ಸಾಂಬಾರ್, ಪಲ್ಯ, ಸಾಗು ಸಹಿತ ವಿವಿಧ ಖಾದ್ಯಗಳಿಗೆ ತೊಗರಿ ಹಾಗೂ ಅವರೆಕಾಯಿ ವಿಶೇಷ ರುಚಿ ಕೊಡುತ್ತದೆ. ಬೆಳಗಿನ ಉಪಾಹಾರಕ್ಕೂ ಬಳಕೆ ಮಾಡುವುದರಿಂದ ಅಡುಗೆ ಮನೆಯಲ್ಲಿ ತೊಗರಿ ಹಾಗೂ ಅವರೆ ಘಮಲು ಹೆಚ್ಚು ಆವರಿಸಿಕೊಂಡಿದೆ’ ಎನ್ನುತ್ತಾರೆ ಗೃಹಿಣಿ ಲಾವಣ್ಯ.</p><p>‘ಬೀನ್ಸ್, ಕ್ಯಾರೆಟ್, ಬೆಂಡೆ, ಬದನೆ ಸಹಿತ ಇತರ ತರಕಾರಿಗಳು ವರ್ಷಪೂರ್ತಿ ಲಭ್ಯವಾಗುತ್ತವೆ. ಆದರೆ, ಹಸಿ ತೊಗರಿ ಹಾಗೂ ಅವರೆ ಸೀಸನ್ನಲ್ಲಿ ಮಾತ್ರ ಲಭ್ಯವಾಗುವುದರಿಂದ ಸಹಜವಾಗಿ ಬಳಕೆ ಹೆಚ್ಚಾಗುತ್ತದೆ. ತಾಜಾ ಹಾಗೂ ರುಚಿಕರವಾಗಿರುವುದರಿಂದ ಮನೆ ಮಂದಿ ಎಲ್ಲರೂ ಇಷ್ಟಪಟ್ಟು ತಿನ್ನುತ್ತಾರೆ’ ಎನ್ನುತ್ತಾರೆ ಅವರು.</p><p><strong>ದರ ದುಬಾರಿ: ‘</strong>ಬೇಡಿಕೆ ಹೆಚ್ಚಾಗಿರುವ ಕಾರಣಕ್ಕೆ ತೊಗರಿ ಹಾಗೂ ಅವರೆ ದರ ದುಬಾರಿಯಾಗಿದ್ದು ಕೆ.ಜಿಗೆ ತಲಾ ₹60ಕ್ಕೆ ಮಾರಾಟವಾಗುತ್ತಿದೆ. ಸೀಸನ್ ಮುಗಿಯುತ್ತಾ ಬಂದರೆ ಸ್ವಲ್ಪ ಇಳಿಮುಖವಾಗಬಹುದು’ ಎನ್ನುತ್ತಾರೆ ವ್ಯಾಪಾರಿ ಚಂದ್ರಶೇಖರ್.</p><p><strong>ತರಕಾರಿ ದರ ಸ್ಥಿರ:</strong> ಮಾರುಕಟ್ಟೆ ಯಲ್ಲಿ ಬಹುತೇಕ ತರಕಾರಿಗಳ ದರ ಸ್ಥಿರವಾಗಿದೆ. ಗಗನಕ್ಕೇರಿ ಕುಳಿತಿರುವ ಬೆಳ್ಳುಳ್ಳಿ ದರ ಇಳಿಕೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಗುಣಮಟ್ಟ ಹಾಗೂ ಗಾತ್ರದ ಮೇಲೆ ಕೆ.ಜಿಗೆ ₹320 ರಿಂದ ₹400ರವರೆಗೆ ಮಾರಾಟವಾಗುತ್ತಿದೆ. ಈರುಳ್ಳಿ ದರವೂ ತಿಂಗಳಿಗೂ ಹೆಚ್ಚು ಕಾಲದಿಂದ ಸ್ಥಿರವಾಗಿದ್ದು ಬೇಡಿಕೆ ಉಳಿಸಿಕೊಂಡಿದೆ. ದಪ್ಪ ಈರುಳ್ಳಿಗೆ ಕೆ.ಜಿಗೆ ₹60 ಇದ್ದರೆ, ಸಣ್ಣ ಈರುಳ್ಳಿ ಕೆ.ಜಿಗೆ ₹50 ದರ ಇದೆ ಎನ್ನುತ್ತಾರೆ ವ್ಯಾಪಾರಿಗಳು.</p><p>ಟೊಮೆಟೊ, ಕ್ಯಾರೆಟ್, ಬೀನ್ಸ್ ಬೆಂಡೆ, ಗೋರಿ ಕಾಯಿ, ಬೀಟ್ರೂಟ್ ದರ ಕೆ.ಜಿಗೆ ₹40 ಇದ್ದು ಗುಣಮಟ್ಟದಲ್ಲಿ ಕೊರತೆ ಕಾಣುತ್ತಿದೆ. ಶೀತದ ವಾತಾವರಣ ತರಕಾರಿ ಬೇಗ ಕೆಡಲು ಕಾರಣ ಎನ್ನುತ್ತಾರೆ ವ್ಯಾಪಾರಿಗಳು.</p><p><strong>ಹೂವಿನ ದರ ದುಬಾರಿ:</strong> ‘ಕಾರ್ತೀಕ ಮಾಸದ ಹಿನ್ನೆಲೆಯಲ್ಲಿ ಹೂವಿನ ದರವೂ ದುಬಾರಿಯಾಗಿದ್ದು ಎರಡು ದಿನಗಳ ಹಿಂದೆ ಚೆಂಡು ಹೂ ಕೆ.ಜಿಗೆ₹ 20 ರಿಂದ ₹30, ಗುಲಾಬಿ ₹240 ದರ ಇದೆ. ಕಾರ್ತೀಕ ಮಾಸ ಮುಗಿಯುತ್ತಾ ಬರುತ್ತಿರುವುದರಿಂದ ಮುಂದಿನ ವಾರ ದರ ಬಹುತೇಕ ಇಳಿಕೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ’ ಎನ್ನುತ್ತಾರೆ ವ್ಯಾಪಾರಿಗಳು.</p><p><strong>ಹಣ್ಣಿನ ದರ</strong>: ಮಾರುಕಟ್ಟೆಗೆ ಸೇಬಿನ ಪೂರೈಕೆ ಹೆಚ್ಚಿದ್ದು ಶಿಮ್ಲಾ ಸೇಬು ಕೆ.ಜಿಗೆ ₹120 ಇದ್ದರೆ, ಇರಾನ್ ಆ್ಯಪಲ್ ₹160ರವರೆಗೂ ಇದೆ. ದಾಳಿಂಬೆ ಕೆ.ಜಿಗೆ ₹120 ರಿಂದ ₹160, ಪಪ್ಪಾಯ ₹30 ರಿಂದ ₹40, ದ್ರಾಕ್ಷಿ ₹120 ರಿಂದ ₹140, ಕಿತ್ತಳೆ ₹50 ರಿಂದ ₹70, ಮೋಸಂಬಿ ₹90ರಿಂದ ₹100, ಸೀಬೆ ₹80 ರಿಂದ ₹100 ದರ ಇದೆ. ಏಲಕ್ಕಿ ಬಾಳೆ ಕೆ.ಜಿಗೆ 40, ಪಚ್ಚಬಾಳೆ ಕೆ.ಜಿಗೆ ₹30 ರಿಂದ₹ 40 ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>