ಗುಂಡ್ಲುಪೇಟೆ: ಬಂಡೀಪುರದ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯ ಯರಿಯೂರು ಗ್ರಾಮದ ಸೆಕ್ಷನ್ 4ರ ಪ್ರದೇಶದಲ್ಲಿ ಶನಿವಾರ ಗಂಡು ಚಿರತೆ ಮೃತಪಟ್ಟಿರುವುದು ಬೀಟ್ ಸಿಬ್ಬಂದಿ ಗಮನಕ್ಕೆ ಬಂದಿದೆ.
ಚಿರತೆಗೆ 6 ರಿಂದ 8 ವರ್ಷ ಇರಬಹುದು. ಅದು ಸಹಜವಾಗಿ ಮೃತಪಟ್ಟಿದೆ. ವೈದ್ಯರು ಪರಿಶೀಲನೆ ನಡೆಸಿದ್ದು, ದೇಹದಲ್ಲಿ ಗಾಯಗಳು ಕಂಡು ಬಂದಿಲ್ಲ ಎಂದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.