ತಾಲ್ಲೂಕಿನ ಬಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲಗಾಪುರ ನಿವಾಸಿಗಳಾದ ಶಿವಣ್ಣ (60), ರತ್ನಮ್ಮ (50), ಗುರುಸ್ವಾಮಿ (55), ಶಿವಮಲ್ಲಮ್ಮ(65) ಸಾಕಮ್ಮ (55), ಮಹಾದೇವಸ್ವಾಮಿ (50) ಕಲುಷಿತ ಆಹಾರ ಸೇವನೆ ಮಾಡಿ ನಿತ್ರಾಣಗೊಂಡಿದ್ದರು. ಇವರನ್ನು ಸ್ಥಳೀಯರು ಬಂಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದರು. ನಂತರ ತಾಲ್ಲೂಕು ವೈದ್ಯಾಧಿಕಾರಿ ಡಾ. ಪ್ರಕಾಶ್ ಅವರು ಚಿಕಿತ್ಸೆ ನೀಡಿದರು.