<p><strong>ಚಾಮರಾಜನಗರ: </strong>ಮೇ 9ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಚುನಾವಣೆ ಭಾರಿ ಕುತೂಹಲಕ್ಕೆ ಕಾರಣವಾಗಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ (ಏ.7) ಆರು ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.</p>.<p>ಈಗಾಗಲೇ ಮೂವರು (ಪ್ರೊ.ಮಲೆಯೂರು ಗುರುಸ್ವಾಮಿ, ಬಿ.ಎಸ್.ವಿನಯ್ ಮತ್ತು ಸಿ.ಎಂ.ನರಸಿಂಹಮೂರ್ತಿ) ನಾಮಪತ್ರ ಸಲ್ಲಿಸಿದ್ದರು. ಇದರೊಂದಿಗೆ ಒಂಬತ್ತು ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.</p>.<p>ಇದರ ನಡುವೆಯೇ, ಅಧ್ಯಕ್ಷ ಸ್ಥಾನ ಬಯಸಿ, ಮೊದಲಿಗರಾಗಿ ನಾಮಪತ್ರ ಸಲ್ಲಿಸಿ ಎಲ್ಲರನ್ನೂ ಅಚ್ಚರಿಗೆ ಕೆಡವಿದ್ದ ಕಸಾಪ ಹಿರಿಯ ಸದಸ್ಯ ಪ್ರೊ.ಮಲೆಯೂರು ಗುರುಸ್ವಾಮಿ ಅವರು ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂಬ ಮಾತು ಸಾಹಿತ್ಯ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ.</p>.<p>ಆದರೆ, ಇದನ್ನು ಗುರುಸ್ವಾಮಿ ಅವರು ಖಚಿತ ಪಡಿಸಿಲ್ಲ. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಯೋಚಿಸುತ್ತಿದ್ದೇನೆ. ಮುಂದೆ ನೋಡೋಣ ಏನಾಗುತ್ತದೆ’ ಎಂದಷ್ಟೇ ಹೇಳಿದರು.</p>.<p>ಅವರು ಕಣದಿಂದ ಹಿಂದೆ ಸರಿಯಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಈ ನಿರ್ಧಾರಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.</p>.<p>ಗುರುಗಳಾದ ಗುರುಸ್ವಾಮಿ ಅವರು ಸ್ಪರ್ಧಿಸಿದರೆ ತಾವು ಕಣಕ್ಕಿಳಿಯುವುದು ಸರಿಯಾಗುವುದಿಲ್ಲ ಎಂದು ಹೇಳಿದ್ದ ಪತ್ರಕರ್ತ ನಾಗೇಶ್ ಸೋಸ್ಲೆ ಅವರು ಕೊನೆಯ ದಿನ ನಾಮಪತ್ರ ಸಲ್ಲಿಸಿರುವುದು ಊಹಾ ಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.</p>.<p class="Subhead">ಕಣದಲ್ಲಿ ಮುಂದುವರಿಯಲಿದ್ದಾರೆಯೇ ವಿನಯ್?: ಹಿಂದೆ ಅಧ್ಯಕ್ಷರಾಗಿದ್ದವರು ಸ್ಪರ್ಧಿಸಿದರೆ ತಾವು ಸ್ಪರ್ಧಿಸುವುದಾಗಿ ಬಿ.ಎಸ್.ವಿನಯ್ ಹೇಳಿದ್ದರು. ಒಂದು ವೇಳೆ, ಪ್ರೊ.ಗುರುಸ್ವಾಮಿ ಅವರು ನಾಮಪತ್ರ ವಾಪಸ್ ಪಡೆದರೆ ವಿನಯ್ ಅವರು ಕೂಡ ವಾಪಸ್ ಪಡೆಯುತ್ತಾರೋ ಎಂಬ ಕುತೂಹಲವೂ ಮೂಡಿದೆ. </p>.<p class="Subhead">ಆರು ಮಂದಿ ನಾಮಪತ್ರ: ಈ ನಡುವೆ, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ಗುಂಡ್ಲುಪೇಟೆಯ ಶೈಲೇಶ್ ಕುಮಾರ್, ಕಸಾಪ ಹಾಲಿ ಕೋಶಾಧ್ಯಕ್ಷ ನಿರಂಜನ್ಕುಮಾರ್, ನಾಗೇಶ ಸೋಸ್ಲೆ, ಪತ್ರಕರ್ತೆ ಸ್ನೇಹಾ, ಯಳಂದೂರಿನ ಶಿವಾಲಂಕಾರಯ್ಯ ಮತ್ತು ರವಿಕುಮಾರ್ ಮಾದಾಪುರ ಅವರು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ್ದಾರೆ.</p>.<p>ಆರು ಮಂದಿಯ ಪೈಕಿ ನಿರಂಜನ್ ಕುಮಾರ್ ಹಾಗೂ ನಾಗೇಶ ಸೋಸ್ಲೆ ಅವರನ್ನು ಬಿಟ್ಟು ಉಳಿದವರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿ ಬಂದಿಲ್ಲ. ಕೊನೆಯ ದಿನ ಇಷ್ಟು ಪ್ರಮಾಣದಲ್ಲಿ ಜನರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ.</p>.<p class="Subhead">ಪರಿಶೀಲನಾ ಕಾರ್ಯ: ಗುರುವಾರ (ಏ.8) ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. 12ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.</p>.<p class="Briefhead">ನಾಮಪತ್ರ ಸಲ್ಲಿಸಿದ ಮೊದಲ ಮಹಿಳೆ</p>.<p>ಜಿಲ್ಲೆಯಲ್ಲಿ ಕಸಾಪ ಸ್ಥಾಪನೆಯಾಗಿ 20 ವರ್ಷಗಳಾಗಿವೆ. ಆರು ಅವಧಿ ಪೂರ್ಣಗೊಂಡಿದೆ. ಇದೇ ಮೊದಲು ಮಹಿಳೆಯೊಬ್ಬರು (ಸ್ನೇಹ) ಅಧ್ಯಕ್ಷ ಸ್ಥಾನ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.</p>.<p>ಪ್ರೊ.ಮಲೆಯೂರು ಗುರುಸ್ವಾಮಿ ಅವರು ಮೊದಲ ಮೂರು ಅವಧಿಗೆ (ಒಂಬತ್ತು ವರ್ಷ), ನಾಗಮಲ್ಲಪ್ಪ (3 ವರ್ಷ), ಸೋಮಶೇಖರ ಬಿಸಲ್ವಾಡಿ (3 ವರ್ಷ) ಹಾಗೂ ಬಿ.ಎಸ್.ವಿನಯ್ (ಐದು ವರ್ಷ) ತಲಾ ಒಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಅವಧಿಯಲ್ಲಿ ಯಾವೊಬ್ಬ ಮಹಿಳೆಯೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿಲ್ಲ. ಬುಧವಾರ ನಾಮಪತ್ರ ಸಲ್ಲಿಸಿರುವ ಸ್ನೇಹ ಅವರು ಅಧ್ಯಕ್ಷ ಸ್ಥಾನ ಬಯಸಿರುವ ಮೊದಲ ಮಹಿಳೆ.</p>.<p>‘ಆರಂಭದಿಂದಲೂ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಬಯಸಿದ್ದೆ. ಆದರೆ, ಹಿರಿಯರೆಲ್ಲ ಸ್ಪರ್ಧಿಸುವಾಗ ಬೇಡ ಎಂದು ಸುಮ್ಮನಾದೆ. ಈಗೀಗ ಏನೇನೋ ಬದಲಾವಣೆಗಳಾಗುತ್ತಿವೆ. ಹಾಗಾಗಿ ಕೊನೆಕ್ಷಣದಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ’ ಎಂದು ಸ್ನೇಹ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಕಸಾಪದಲ್ಲಿ ಮಹಿಳೆಯರಿಗೂ ಆದ್ಯತೆ ಸಿಗಲಿ, ಅವರು ಕೂಡ ಮುಂದೆ ಬರಲಿ ಎಂಬ ಉದ್ದೇಶ ನನ್ನದು’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ: </strong>ಮೇ 9ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರ ಚುನಾವಣೆ ಭಾರಿ ಕುತೂಹಲಕ್ಕೆ ಕಾರಣವಾಗಿದ್ದು, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ (ಏ.7) ಆರು ಮಂದಿ ಉಮೇದುವಾರಿಕೆ ಸಲ್ಲಿಸಿದ್ದಾರೆ.</p>.<p>ಈಗಾಗಲೇ ಮೂವರು (ಪ್ರೊ.ಮಲೆಯೂರು ಗುರುಸ್ವಾಮಿ, ಬಿ.ಎಸ್.ವಿನಯ್ ಮತ್ತು ಸಿ.ಎಂ.ನರಸಿಂಹಮೂರ್ತಿ) ನಾಮಪತ್ರ ಸಲ್ಲಿಸಿದ್ದರು. ಇದರೊಂದಿಗೆ ಒಂಬತ್ತು ಮಂದಿ ನಾಮಪತ್ರ ಸಲ್ಲಿಸಿದಂತಾಗಿದೆ.</p>.<p>ಇದರ ನಡುವೆಯೇ, ಅಧ್ಯಕ್ಷ ಸ್ಥಾನ ಬಯಸಿ, ಮೊದಲಿಗರಾಗಿ ನಾಮಪತ್ರ ಸಲ್ಲಿಸಿ ಎಲ್ಲರನ್ನೂ ಅಚ್ಚರಿಗೆ ಕೆಡವಿದ್ದ ಕಸಾಪ ಹಿರಿಯ ಸದಸ್ಯ ಪ್ರೊ.ಮಲೆಯೂರು ಗುರುಸ್ವಾಮಿ ಅವರು ನಾಮಪತ್ರ ವಾಪಸ್ ಪಡೆಯಲಿದ್ದಾರೆ ಎಂಬ ಮಾತು ಸಾಹಿತ್ಯ ವಲಯದಲ್ಲಿ ದಟ್ಟವಾಗಿ ಕೇಳಿ ಬರುತ್ತಿದೆ.</p>.<p>ಆದರೆ, ಇದನ್ನು ಗುರುಸ್ವಾಮಿ ಅವರು ಖಚಿತ ಪಡಿಸಿಲ್ಲ. ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ಈ ಬಗ್ಗೆ ಇನ್ನೂ ನಿರ್ಧಾರ ಕೈಗೊಂಡಿಲ್ಲ. ಯೋಚಿಸುತ್ತಿದ್ದೇನೆ. ಮುಂದೆ ನೋಡೋಣ ಏನಾಗುತ್ತದೆ’ ಎಂದಷ್ಟೇ ಹೇಳಿದರು.</p>.<p>ಅವರು ಕಣದಿಂದ ಹಿಂದೆ ಸರಿಯಲಿದ್ದಾರೆ ಎಂದು ಅವರ ಆಪ್ತ ಮೂಲಗಳು ತಿಳಿಸಿವೆ. ಈ ನಿರ್ಧಾರಕ್ಕೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.</p>.<p>ಗುರುಗಳಾದ ಗುರುಸ್ವಾಮಿ ಅವರು ಸ್ಪರ್ಧಿಸಿದರೆ ತಾವು ಕಣಕ್ಕಿಳಿಯುವುದು ಸರಿಯಾಗುವುದಿಲ್ಲ ಎಂದು ಹೇಳಿದ್ದ ಪತ್ರಕರ್ತ ನಾಗೇಶ್ ಸೋಸ್ಲೆ ಅವರು ಕೊನೆಯ ದಿನ ನಾಮಪತ್ರ ಸಲ್ಲಿಸಿರುವುದು ಊಹಾ ಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.</p>.<p class="Subhead">ಕಣದಲ್ಲಿ ಮುಂದುವರಿಯಲಿದ್ದಾರೆಯೇ ವಿನಯ್?: ಹಿಂದೆ ಅಧ್ಯಕ್ಷರಾಗಿದ್ದವರು ಸ್ಪರ್ಧಿಸಿದರೆ ತಾವು ಸ್ಪರ್ಧಿಸುವುದಾಗಿ ಬಿ.ಎಸ್.ವಿನಯ್ ಹೇಳಿದ್ದರು. ಒಂದು ವೇಳೆ, ಪ್ರೊ.ಗುರುಸ್ವಾಮಿ ಅವರು ನಾಮಪತ್ರ ವಾಪಸ್ ಪಡೆದರೆ ವಿನಯ್ ಅವರು ಕೂಡ ವಾಪಸ್ ಪಡೆಯುತ್ತಾರೋ ಎಂಬ ಕುತೂಹಲವೂ ಮೂಡಿದೆ. </p>.<p class="Subhead">ಆರು ಮಂದಿ ನಾಮಪತ್ರ: ಈ ನಡುವೆ, ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಬುಧವಾರ ಗುಂಡ್ಲುಪೇಟೆಯ ಶೈಲೇಶ್ ಕುಮಾರ್, ಕಸಾಪ ಹಾಲಿ ಕೋಶಾಧ್ಯಕ್ಷ ನಿರಂಜನ್ಕುಮಾರ್, ನಾಗೇಶ ಸೋಸ್ಲೆ, ಪತ್ರಕರ್ತೆ ಸ್ನೇಹಾ, ಯಳಂದೂರಿನ ಶಿವಾಲಂಕಾರಯ್ಯ ಮತ್ತು ರವಿಕುಮಾರ್ ಮಾದಾಪುರ ಅವರು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಉಮೇದುವಾರಿಕೆ ಸಲ್ಲಿಸಿದ್ದಾರೆ.</p>.<p>ಆರು ಮಂದಿಯ ಪೈಕಿ ನಿರಂಜನ್ ಕುಮಾರ್ ಹಾಗೂ ನಾಗೇಶ ಸೋಸ್ಲೆ ಅವರನ್ನು ಬಿಟ್ಟು ಉಳಿದವರ ಹೆಸರು ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿ ಬಂದಿಲ್ಲ. ಕೊನೆಯ ದಿನ ಇಷ್ಟು ಪ್ರಮಾಣದಲ್ಲಿ ಜನರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿರುವುದು ಅಚ್ಚರಿಗೆ ಕಾರಣವಾಗಿದೆ.</p>.<p class="Subhead">ಪರಿಶೀಲನಾ ಕಾರ್ಯ: ಗುರುವಾರ (ಏ.8) ನಾಮಪತ್ರ ಪರಿಶೀಲನಾ ಕಾರ್ಯ ನಡೆಯಲಿದೆ. 12ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.</p>.<p class="Briefhead">ನಾಮಪತ್ರ ಸಲ್ಲಿಸಿದ ಮೊದಲ ಮಹಿಳೆ</p>.<p>ಜಿಲ್ಲೆಯಲ್ಲಿ ಕಸಾಪ ಸ್ಥಾಪನೆಯಾಗಿ 20 ವರ್ಷಗಳಾಗಿವೆ. ಆರು ಅವಧಿ ಪೂರ್ಣಗೊಂಡಿದೆ. ಇದೇ ಮೊದಲು ಮಹಿಳೆಯೊಬ್ಬರು (ಸ್ನೇಹ) ಅಧ್ಯಕ್ಷ ಸ್ಥಾನ ಬಯಸಿ ನಾಮಪತ್ರ ಸಲ್ಲಿಸಿದ್ದಾರೆ.</p>.<p>ಪ್ರೊ.ಮಲೆಯೂರು ಗುರುಸ್ವಾಮಿ ಅವರು ಮೊದಲ ಮೂರು ಅವಧಿಗೆ (ಒಂಬತ್ತು ವರ್ಷ), ನಾಗಮಲ್ಲಪ್ಪ (3 ವರ್ಷ), ಸೋಮಶೇಖರ ಬಿಸಲ್ವಾಡಿ (3 ವರ್ಷ) ಹಾಗೂ ಬಿ.ಎಸ್.ವಿನಯ್ (ಐದು ವರ್ಷ) ತಲಾ ಒಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಅವಧಿಯಲ್ಲಿ ಯಾವೊಬ್ಬ ಮಹಿಳೆಯೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಮುಂದಾಗಿಲ್ಲ. ಬುಧವಾರ ನಾಮಪತ್ರ ಸಲ್ಲಿಸಿರುವ ಸ್ನೇಹ ಅವರು ಅಧ್ಯಕ್ಷ ಸ್ಥಾನ ಬಯಸಿರುವ ಮೊದಲ ಮಹಿಳೆ.</p>.<p>‘ಆರಂಭದಿಂದಲೂ ಚುನಾವಣೆಗೆ ಸ್ಪರ್ಧಿಸಬೇಕು ಎಂದು ಬಯಸಿದ್ದೆ. ಆದರೆ, ಹಿರಿಯರೆಲ್ಲ ಸ್ಪರ್ಧಿಸುವಾಗ ಬೇಡ ಎಂದು ಸುಮ್ಮನಾದೆ. ಈಗೀಗ ಏನೇನೋ ಬದಲಾವಣೆಗಳಾಗುತ್ತಿವೆ. ಹಾಗಾಗಿ ಕೊನೆಕ್ಷಣದಲ್ಲಿ ಸ್ಪರ್ಧಿಸಲು ನಿರ್ಧರಿಸಿದೆ’ ಎಂದು ಸ್ನೇಹ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ಕಸಾಪದಲ್ಲಿ ಮಹಿಳೆಯರಿಗೂ ಆದ್ಯತೆ ಸಿಗಲಿ, ಅವರು ಕೂಡ ಮುಂದೆ ಬರಲಿ ಎಂಬ ಉದ್ದೇಶ ನನ್ನದು’ ಎಂದು ಅವರು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>