ಚಾಮರಾಜನಗರ: ಈ ಸಾಲಿನ ಬಜೆಟ್ನಲ್ಲಿ ಘೋಷಿಸಲಾಗಿದ್ದ, ಬಿಳಿಗಿರಿರಂಗನಾಥಸ್ವಾಮಿ ದೇವಾಲಯ (ಬಿಆರ್ಟಿ) ಹುಲಿ ಸಂರಕ್ಷಿತ ಪ್ರದೇಶದ ಬೂದಿಪಡಗ ವ್ಯಾಪ್ತಿಯಲ್ಲಿ ಆನೆ ಶಿಬಿರ ಸ್ಥಾಪನೆ ಯೋಜನೆ ಕಾರ್ಯಸಾಧುವಲ್ಲ ಎಂಬ ಅಭಿಪ್ರಾಯವನ್ನು ತಜ್ಞರ ಸಮಿತಿ ವ್ಯಕ್ತಪಡಿಸಿದ್ದು, ಕೆ.ಗುಡಿಯಲ್ಲೇ ಇರುವ ಶಿಬಿರವನ್ನು ಇನ್ನಷ್ಟು ವಿಸ್ತರಿಸಿ ಅಲ್ಲೇ ಮುಂದುವರಿಸುವ ಪ್ರಸ್ತಾವವನ್ನು ಅರಣ್ಯ ಇಲಾಖೆಯ ಮುಂದಿಟ್ಟಿದೆ.