ತನ್ನೀರ್ ಕೊಂಬನ್ ಎನ್ನುವ ಈ ಆನೆಯನ್ನು ಜನವರಿ 16ರಂದು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿಯ ಹೆದ್ದರವಳ್ಳಿ ಗ್ರಾಮದಲ್ಲಿ ಸೆರೆ ಹಿಡಿದು ರೇಡಿಯೊ ಕಾಲರ್ ಅಳವಡಿಸಿ ಬಂಡೀಪುರ ಅರಣ್ಯಕ್ಕೆ ಬಿಡಲಾಗಿತ್ತು.
ಬಂಡೀಪುರ ಅರಣ್ಯದಲ್ಲಿ ಓಡಾಡಿಕೊಂಡಿದ್ದ ಆನೆ, ನೆರೆಯ ಕೇರಳದ ವಯನಾಡು ಸಂರಕ್ಷಿತ ಪ್ರದೇಶದಲ್ಲಿ ಸಾಗಿ ಶುಕ್ರವಾರ ಮಾನಂದವಾಡಿ ಪಟ್ಟದಾದ್ಯಂತ ಓಡಾಡಿ, ಜನರಲ್ಲಿ ಭಯ ಹುಟ್ಟುಹಾಕಿತ್ತು.
ಕೇರಳದ ಅರಣ್ಯ ಇಲಾಖೆ ಸಂಜೆಯ ಹೊತ್ತಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ಸೆರೆ ಹಿಡಿದಿತ್ತು. ಕೇರಳ ಹಾಗೂ ಕರ್ನಾಟಕದ ಅರಣ್ಯ ಇಲಾಖೆ ಸಿಬ್ಬಂದಿಯು ಶುಕ್ರವಾರ ತಡ ರಾತ್ರಿ ಆನೆಯನ್ನು ಬಂಡೀಪುರದ ರಾಂಪುರ ಆನೆ ಶಿಬಿರಕ್ಕೆ ಕರೆದುಕೊಂಡು ಬಂದಿದ್ದರು.