‘ಕಾಡುಪ್ರಾಣಿಗಳೂ ಬಲಿ’ ಪ್ರಾಣಿಗಳನ್ನು ಬೇಟೆಯಾಡಲು ಇಡುತ್ತಿರುವ ಸಿಡಿ ಮುದ್ದುಗಳಿಗೆ ಜಾನುವಾರುಗಳು ಬಲಿಯಾಗುತ್ತಿವೆ. ಕೆಲವೊಮ್ಮೆ ಹಂದಿ ಜಿಂಕೆ ಕಾಡೆಮ್ಮೆಗಳು ಸಾವನ್ನಪ್ಪುತ್ತಿವೆ. ಕಾಡುಪ್ರಾಣಿಗಳ ಮಾಂಸದಾಸೆಗೆ ಹೀನಕೃತ್ಯಕ್ಕೆ ಇಳಿದಿರುವವರನ್ನು ಬಂಧಿಸಬೇಕು. ಪರಿಸ್ಥಿತಿ ಹೀಗೆ ಮುಂದುವರಿದರೆ ಪ್ರಾಣಿ ಸಂಕುಲ ನಾಶವಾಗುತ್ತದೆ.–ಶೈಲೇಂದ್ರ ರೈತ ಮುಖಂಡ
ಕಠಿಣ ಕ್ರಮ ಜರುಗಿಸಲಿ ಒಂದೆರಡು ಹಸುಗಳನ್ನು ಸಾಕಿಕೊಂಡು ಬಹಳಷ್ಟು ಹೈನುಗಾರರು ಜೀವನ ಮಾಡುತ್ತಿದ್ದಾರೆ. ಜೀವನಕ್ಕೆ ಆಧಾರವಾಗಿದ್ದ ಹಸುಗಳನ್ನು ಕಳೆದುಕೊಂಡು ದಿಕ್ಕು ತೋಚದಂತಾಗಿದೆ. ಕಾಡು ಪ್ರಾಣಿಗಳ ಬೇಟೆಯಾಡಲು ಹಸುಗಳನ್ನು ಸಾಯಿಸುತ್ತಿದ್ದಾರೆ. ಕಾಡಂಚಿನ ಗ್ರಾಮಗಳಲ್ಲಿ ಹಸುಗಳನ್ನು ಮೇಯಲು ಬಿಡಲು ಹೆದರಿಕೆಯಾಗುತ್ತಿದೆ. ಈಗಾಗಲೇ ಬೇಸಿಗೆ ಆರಂಭವಾಗಿದ್ದು ನೀರು ಹಾಗೂ ಮೇವಿನ ಕೊರತೆ ಕಾಡುತ್ತಿದೆ. ಇಂತಹ ಸಮಯದಲ್ಲಿ ಸಿಡಿಮದ್ದು ಹಾಕುವವರ ವಿರುದ್ಧ ಅರಣ್ಯ ಇಲಾಖೆ ಪೊಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.–ಜಗದೀಶ್ ಹೈನುಗಾರ ಮುಡಿಗುಂಡ
ಸಂಪೂರ್ಣ ನಿಲ್ಲಿಸಬೇಕು ಪೊಲೀಸರು ಸಿಡಿಮದ್ದು ಸ್ಫೋಟ ಪ್ರಕರಣದ ಜಾಡು ಹಿಡಿದು ಮೂಲವನ್ನು ಬೇಧಿಸಬೇಕು ಅಕ್ರಮವಾಗಿ ಪ್ರಾಣಿ ಬೇಟೆಕೋರರನ್ನು ಪತ್ತೆಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.–ಚಂಗಡಿ ಕರಿಯಪ್ಪ ರೈತ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.