<p>ಚಾಮರಾಜನಗರ: ಜಿಲ್ಲೆಯಾದ್ಯಂತ ಗುರುವಾರ ಗೌರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಸಾಂಪ್ರದಾಯಿಕ ಹಾಗೂ ಸರಳವಾಗಿ ಆಚರಿಸಲಾಯಿತು.</p>.<p>ಮಹಿಳೆಯರು ಮನೆಗಳನ್ನು ಬಾಳೆ ಕಂದು, ತಳಿರು ತೋರಣ, ರಂಗೋಲಿಯಿಂದ ಶೃಂಗರಿಸಿದ್ದರು. ಗೌರಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ, ಮನೆಗೆ ಬಂದ ಸುಮಂಗಲಿಯರಿಗೆ ಬಾಗಿನ ನೀಡಿದರು. ಕೆಲವು ದೇವಾಲಯಗಳಲ್ಲೂ ಸಾರ್ವಜನಿಕವಾಗಿ ಗೌರಿ ಪೂಜೆ ನಡೆಯಿತು.</p>.<p>ಹಬ್ಬದ ಅಂಗವಾಗಿ ಹೋಳಿಗೆ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ತಯಾರಿಸಿದ್ದರು. ಎಲ್ಲವನ್ನೂ ಗೌರಿಗೆ ನೈವೇದ್ಯ ಮಾಡಿ, ಬಂಧು ಬಳಗ, ಸ್ನೇಹಿತರನ್ನು ಆಹ್ವಾನಿಸಿ ಹಬ್ಬದ ಊಟ ಬಡಿಸಿದರು.</p>.<p>ಶುಕ್ರವಾರ ಗಣೇಶನ ಹಬ್ಬ ಇರುವುದರಿಂದ ಜನರು ಹಬ್ಬದ ಆಚರಣೆಗೆ ಗುರುವಾರ ಸಿದ್ಧತೆ ನಡೆಸಿದರು. ಗಣೇಶ ಮೂರ್ತಿ, ಹೂವು ಹಣ್ಣು ಹಾಗೂ ಇತರ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದರು.</p>.<p>ಆದರೆ, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಕಾಣಲಿಲ್ಲ. ಹೂವುಗಳ ಅಂಗಡಿಗಳ ಮುಂದೆ ಒಂದಷ್ಟು ಜನರು ಖರೀದಿಯಲ್ಲಿ ತೊಡಗಿದ್ದುದು ಕಂಡು ಬಂತು.</p>.<p>ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಹೂವುಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಈ ಬಾರಿ ಅಂತಹ ಬೇಡಿಕೆ ಸೃಷ್ಟಿಯಾಗಲಿಲ್ಲ ಎಂದು ಹೇಳುತ್ತಾರೆ ವ್ಯಾಪಾರಿಗಳು.</p>.<p>ಹೂವುಗಳ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದರೂ ವಿಪರೀತ ಎಂಬಂತೆ ಇರಲಿಲ್ಲ. ನಗರಕ್ಕೆ ಸಮೀಪದ ಚೆನ್ನೀಪುರದ ಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಗುರುವಾರ ಕನಕಾಂಬರ ಹೂವಿಗೆ ಕೆಜಿಗೆ ₹ 800 ಇತ್ತು. ಕಾಕಡಕ್ಕೆ ₹ 280ರಿಂದ ₹ 300, ಸುಗಂಧರಾಜ ಹೂವಿಗೆ ₹ 200, ಮರ್ಲೆಗೆ ₹ 500ರಿಂದ ₹ 600, ಚೆಂಡು ಹೂವಿಗೆ ₹ 2ರಿಂದ ₹ 50ರವರೆಗೆ ಬೆಲೆ ಇತ್ತು.</p>.<p>‘ಈ ಬಾರಿ ವ್ಯಾಪಾರ ಸ್ವಲ್ಪ ಕಡಿಮೆಯಾಗಿದೆ. ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಹಬ್ಬದ ಸಮಯದಲ್ಲಿ ಇರುವಂತಹ ಬೇಡಿಕೆ ಇರಲಿಲ್ಲ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಾಮರಾಜನಗರ: ಜಿಲ್ಲೆಯಾದ್ಯಂತ ಗುರುವಾರ ಗೌರಿ ಹಬ್ಬವನ್ನು ಶ್ರದ್ಧಾಭಕ್ತಿಯಿಂದ ಸಾಂಪ್ರದಾಯಿಕ ಹಾಗೂ ಸರಳವಾಗಿ ಆಚರಿಸಲಾಯಿತು.</p>.<p>ಮಹಿಳೆಯರು ಮನೆಗಳನ್ನು ಬಾಳೆ ಕಂದು, ತಳಿರು ತೋರಣ, ರಂಗೋಲಿಯಿಂದ ಶೃಂಗರಿಸಿದ್ದರು. ಗೌರಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಿ, ಮನೆಗೆ ಬಂದ ಸುಮಂಗಲಿಯರಿಗೆ ಬಾಗಿನ ನೀಡಿದರು. ಕೆಲವು ದೇವಾಲಯಗಳಲ್ಲೂ ಸಾರ್ವಜನಿಕವಾಗಿ ಗೌರಿ ಪೂಜೆ ನಡೆಯಿತು.</p>.<p>ಹಬ್ಬದ ಅಂಗವಾಗಿ ಹೋಳಿಗೆ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ತಯಾರಿಸಿದ್ದರು. ಎಲ್ಲವನ್ನೂ ಗೌರಿಗೆ ನೈವೇದ್ಯ ಮಾಡಿ, ಬಂಧು ಬಳಗ, ಸ್ನೇಹಿತರನ್ನು ಆಹ್ವಾನಿಸಿ ಹಬ್ಬದ ಊಟ ಬಡಿಸಿದರು.</p>.<p>ಶುಕ್ರವಾರ ಗಣೇಶನ ಹಬ್ಬ ಇರುವುದರಿಂದ ಜನರು ಹಬ್ಬದ ಆಚರಣೆಗೆ ಗುರುವಾರ ಸಿದ್ಧತೆ ನಡೆಸಿದರು. ಗಣೇಶ ಮೂರ್ತಿ, ಹೂವು ಹಣ್ಣು ಹಾಗೂ ಇತರ ಪೂಜಾ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದರು.</p>.<p>ಆದರೆ, ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಕಾಣಲಿಲ್ಲ. ಹೂವುಗಳ ಅಂಗಡಿಗಳ ಮುಂದೆ ಒಂದಷ್ಟು ಜನರು ಖರೀದಿಯಲ್ಲಿ ತೊಡಗಿದ್ದುದು ಕಂಡು ಬಂತು.</p>.<p>ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಹೂವುಗಳಿಗೆ ಹೆಚ್ಚು ಬೇಡಿಕೆ ಇರುತ್ತದೆ. ಈ ಬಾರಿ ಅಂತಹ ಬೇಡಿಕೆ ಸೃಷ್ಟಿಯಾಗಲಿಲ್ಲ ಎಂದು ಹೇಳುತ್ತಾರೆ ವ್ಯಾಪಾರಿಗಳು.</p>.<p>ಹೂವುಗಳ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿದ್ದರೂ ವಿಪರೀತ ಎಂಬಂತೆ ಇರಲಿಲ್ಲ. ನಗರಕ್ಕೆ ಸಮೀಪದ ಚೆನ್ನೀಪುರದ ಮೋಳೆಯ ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಗುರುವಾರ ಕನಕಾಂಬರ ಹೂವಿಗೆ ಕೆಜಿಗೆ ₹ 800 ಇತ್ತು. ಕಾಕಡಕ್ಕೆ ₹ 280ರಿಂದ ₹ 300, ಸುಗಂಧರಾಜ ಹೂವಿಗೆ ₹ 200, ಮರ್ಲೆಗೆ ₹ 500ರಿಂದ ₹ 600, ಚೆಂಡು ಹೂವಿಗೆ ₹ 2ರಿಂದ ₹ 50ರವರೆಗೆ ಬೆಲೆ ಇತ್ತು.</p>.<p>‘ಈ ಬಾರಿ ವ್ಯಾಪಾರ ಸ್ವಲ್ಪ ಕಡಿಮೆಯಾಗಿದೆ. ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಹಬ್ಬದ ಸಮಯದಲ್ಲಿ ಇರುವಂತಹ ಬೇಡಿಕೆ ಇರಲಿಲ್ಲ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>