‘ಹಿಂದುತ್ವ ಬೇಡ. ಮುಂದುತ್ವ ಬೇಕು’
‘ಸ್ಮೃತಿ ಧರ್ಮದಲ್ಲಿ ಮನುಷ್ಯತ್ವವೇ ಇಲ್ಲ. ಆದ್ದರಿಂದಲೇ ಅದನ್ನು ಬುದ್ದ ಬಸವ ಅಂಬೇಡ್ಕರ್ ತಿರಸ್ಕರಿಸಿದರು’ ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಹೇಳಿದರು. ‘ವಿಜ್ಞಾನಕ್ಕೆ ವಿರುದ್ಧವಾದ ಧರ್ಮವನ್ನು ತಿರಸ್ಕರಿಸಿ ಎಂದು ವಿವೇಕಾನಂದರು ಹೇಳಿದ್ದಾರೆ. 2600 ವರ್ಷಗಳಿಂದಲೂ ಪುರೋಹಿತರು ಜ್ಞಾನವನ್ನು ಸುಡುತ್ತಿದ್ದಾರೆ. ಆದ್ದರಿಂದ ನಮಗೆ ಹಿಂದುತ್ವ ಬೇಡ. ಮುಂದುತ್ವ ಬೇಕು. 1030ನೇ ಇಸವಿಯಿಂದ ಈಚೆಗೆ ಹಿಂದೂ ಪದ ಬಂದಿದ್ದು ಹೀನ ಧೂಷಣೆಗೊಳಗಾದವನು ಹಿಂದೂ ಎನ್ನುತ್ತಾರೆ. ಆದ್ದರಿಂದ ನಾವು ಹಿಂದೂ ಎಂದು ಹೇಳಲು ಅವಮಾನ ಪಡಬೇಕು. ಆರ್ಎಸ್ಎಸ್ ರಾಷ್ಟ್ರೀಯ ಸುಳ್ಳುಗಾರರ ಸಂಘವಾಗಿದೆ’ ಎಂದು ಟೀಕಿಸಿದರು.