ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಂದ್ರನಾಥ್, ‘ನಾರ್ವೆಯ ಇಬ್ಸೆನ್ ಅವಾರ್ಡ್ ಮತ್ತು ರಂಗ ಶಂಕರದ ಸಹಕಾರದಲ್ಲಿ ನಾರ್ವೆಯ ಹೆನ್ರಿಕ್ ಇಬ್ಸೆನ್ ಅವರ ‘ಎನಿಮಿ ಆಫ್ ದ ಪೀಪಲ್’ ಎಂಬ ನಾಟಕವನ್ನು ಆಧರಿಸಿ ಜನ ಶತ್ರು ನಾಟಕವನ್ನು ರೂಪಿಸಲಾಗಿದೆ. ಸ್ಥಳೀಯ ಸಮಸ್ಯೆಯನ್ನು ನಾಟಕದ ಮೂಲಕ ತೋರಿಸಲಾಗುತ್ತದೆ. ಈಗಾಗಲೇ ಬೆಂಗಳೂರು, ಮೈಸೂರು, ಹೆಗ್ಗೋಡು, ಹಾವೇರಿ, ಮಂಗಳೂರುಗಳಲ್ಲಿ ಪ್ರದರ್ಶನ ನಡೆದಿದೆ. ಅಲ್ಲಿನ ಸ್ಥಳೀಯ ಸಮಸ್ಯೆಯನ್ನು ಕಥಾವಸ್ತುವಾಗಿ ತೆಗೆದುಕೊಳ್ಳಲಾಗಿದೆ. ಆಯಾ ಪ್ರದೇಶದ ಸ್ಥಳೀಯ ನಾಟಕ ತಂಡದ ಕಲಾವಿದರೇ ಅಭಿನಯಿಸುತ್ತಾರೆ’ ಎಂದರು.