ನಮ್ಮ ಕುಟುಂಬದವರು ನೀಲಗಿರಿ ಜಿಲ್ಲೆಯ ಎಸ್ಟೇಟ್ಗಳಲ್ಲಿ ಇದ್ದಾರೆ. ಶುಕ್ರವಾರ ಮಧ್ಯರಾತ್ರಿ ನಮ್ಮ ಚಿಕ್ಕಮ್ಮ ತೀರಿ ಹೋಗಿದ್ದಾರೆ, ವಿಷಯ ತಿಳಿದ ತಕ್ಷಣವೇ ಬೆಂಗಳೂರಿನಿಂದ ಹೊರಟು ಬಂದಿದ್ದೇವೆ, ನಮ್ಮನ್ನು ಬಿಡುತ್ತಿಲ್ಲ, ಪಾಸ್ ಅರ್ಜಿ ಸಲ್ಲಿಸಬೇಕಾದರೆ ಮರಣ ಪ್ರಮಾಣ ಪತ್ರ ಕೇಳುತ್ತಿದೆ. ಅಲ್ಲಿ ನೆಟ್ವರ್ಕ್ ಇಲ್ಲ, ಬಸ್ ವ್ಯವಸ್ಥೆ ಇಲ್ಲ’ ಎಂದು ಬೆಂಗಳೂರಿನಿಂದ ಬಂದು, ಕೆಕ್ಕನ ಹಳ್ಳ ಚೆಕ್ಪೋಸ್ಟ್ನಲ್ಲಿ ಸಿಕ್ಕಿಹಾಕಿಕೊಂಡ ಪ್ರಕಾಶ್ ಅವರು ಹೇಳಿದರು.