‘ಸಮಾಜದ ಅಭಿವೃದ್ಧಿ, ಕಾಳಜಿ, ಕಳಕಳಿ ಹಾಗೂ ಸಾಮಾಜಿಕ ಜವಾಬ್ದಾರಿ ಇರುವಂತಹವರು ಸಿಗುವುದು ಬಹಳ ಕಡಿಮೆ. ವಿಶ್ವದಲ್ಲಿಯೇ ಬೆಂಗಳೂರು ನಗರ ಪ್ರಬುದ್ಧ ಸ್ಥಾನದಲ್ಲಿದೆ ಎಂದರೆ, ಅದರ ಹಿಂದೆ ಇದ್ದ ಕೆಂಪೇಗೌಡ ಅವರ ಚಿಂತನೆ ಹಾಗೂ ತ್ಯಾಗ ಅಪಾರವಾದದ್ದು. ಇವರಂತಹ ನಾಯಕರು ಕೇವಲ ಒಂದು ಜಾತಿ, ಜನಾಂಗ, ಸಮುದಾಯ ಹಾಗೂ ಧರ್ಮಕ್ಕೆ ಸೇರಿದವರಲ್ಲ. ಅವರು ಜಾತಿ, ಧರ್ಮ ಮೀರಿ ಬೆಳೆದವರು’ ಎಂದು ಡಾ.ಎಂ.ಆರ್.ರವಿ ಅವರು ಬಣ್ಣಿಸಿದರು.