<p><strong>ಸಂತೇಮರಹಳ್ಳಿ</strong>: ಸಮೀಪದ ಕುದೇರು ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಹಿಡಲಾಗಿದ್ದ ಬೋನಿಗೆ ಶನಿವಾರ ಚಿರತೆ ಬಿದ್ದಿದೆ.</p>.<p>ಕುದೇರು, ತೊರವಳ್ಳಿ, ಬಡಗಮೋಳೆ, ತೆಂಕಲಮೋಳೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ 2 ವಾರದ ಹಿಂದೆ ಚಿರತೆ ರೈತರ ಜಮೀನಿನಲ್ಲಿ ತಿರುಗಾಡಿರುವುದರ ಹೆಜ್ಜೆ ಗುರುತು ಕಾಣಿಸಿಕೊಂಡಿತ್ತು. ಕುದೇರು ಗ್ರಾಮದ ಬವವರಾಜು ಎಂಬುವರ ಜಮೀನಿನಲ್ಲಿ ಸಾಕಿದ ನಾಯಿ ಹಾಗೂ ತೊರವಳ್ಳಿ, ತೆಂಕಲಮೋಳೆ, ಬಡಗಲಮೋಳೆ ಗ್ರಾಮಗಳ ಜನರು ಆಡು, ಕುರಿಗಳನ್ನು ಮೇಯಿಸಲು ಬಿಟ್ಟ ವೇಳೆಯಲ್ಲಿ ಚಿರತೆ ದಾಳಿ ನಡೆಸಿತ್ತು. </p> <p>ಈ ಹಿನ್ನೆಲೆಯಲ್ಲಿ ಕುದೇರು ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಚಾಮರಾಜನಗರ ಅರಣ್ಯ ಇಲಾಖೆ ವತಿಯಿಂದ ಬೋನ್ ಹಾಕಲಾಗಿತ್ತು. </p> <p>ಈ ಹಿನ್ನೆಲೆಯಲ್ಲಿ ಶನಿವಾರ ಬೋನಿಗೆ ಚಿರತೆ ಬಿದ್ದಿದೆ. ಸ್ಥಳಕ್ಕೆ ಚಾಮರಾಜನಗರದ ಡಿಆರ್ಎಫ್ ಚಂದ್ರಕುಮಾರ್, ಗೌರಿಶಂಕರ್, ಅರಣ್ಯ ರಕ್ಷಕರಾದ ಪೃಥ್ವಿರಾಜು ಸಿಬ್ಬಂದಿ ಮಹೇಶ್, ರೇವಣ್ಣ ಸ್ಥಳಕ್ಕೆ ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಂತೇಮರಹಳ್ಳಿ</strong>: ಸಮೀಪದ ಕುದೇರು ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಹಿಡಲಾಗಿದ್ದ ಬೋನಿಗೆ ಶನಿವಾರ ಚಿರತೆ ಬಿದ್ದಿದೆ.</p>.<p>ಕುದೇರು, ತೊರವಳ್ಳಿ, ಬಡಗಮೋಳೆ, ತೆಂಕಲಮೋಳೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ 2 ವಾರದ ಹಿಂದೆ ಚಿರತೆ ರೈತರ ಜಮೀನಿನಲ್ಲಿ ತಿರುಗಾಡಿರುವುದರ ಹೆಜ್ಜೆ ಗುರುತು ಕಾಣಿಸಿಕೊಂಡಿತ್ತು. ಕುದೇರು ಗ್ರಾಮದ ಬವವರಾಜು ಎಂಬುವರ ಜಮೀನಿನಲ್ಲಿ ಸಾಕಿದ ನಾಯಿ ಹಾಗೂ ತೊರವಳ್ಳಿ, ತೆಂಕಲಮೋಳೆ, ಬಡಗಲಮೋಳೆ ಗ್ರಾಮಗಳ ಜನರು ಆಡು, ಕುರಿಗಳನ್ನು ಮೇಯಿಸಲು ಬಿಟ್ಟ ವೇಳೆಯಲ್ಲಿ ಚಿರತೆ ದಾಳಿ ನಡೆಸಿತ್ತು. </p> <p>ಈ ಹಿನ್ನೆಲೆಯಲ್ಲಿ ಕುದೇರು ಗ್ರಾಮದ ಕರಿಕಲ್ಲು ಕ್ವಾರಿ ಬಳಿ ಚಾಮರಾಜನಗರ ಅರಣ್ಯ ಇಲಾಖೆ ವತಿಯಿಂದ ಬೋನ್ ಹಾಕಲಾಗಿತ್ತು. </p> <p>ಈ ಹಿನ್ನೆಲೆಯಲ್ಲಿ ಶನಿವಾರ ಬೋನಿಗೆ ಚಿರತೆ ಬಿದ್ದಿದೆ. ಸ್ಥಳಕ್ಕೆ ಚಾಮರಾಜನಗರದ ಡಿಆರ್ಎಫ್ ಚಂದ್ರಕುಮಾರ್, ಗೌರಿಶಂಕರ್, ಅರಣ್ಯ ರಕ್ಷಕರಾದ ಪೃಥ್ವಿರಾಜು ಸಿಬ್ಬಂದಿ ಮಹೇಶ್, ರೇವಣ್ಣ ಸ್ಥಳಕ್ಕೆ ಭೇಟಿ ನೀಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>