‘ಮಳೆ ಬಂದ ತಕ್ಷಣ ಸುಗಂಧರಾಜ ಹೂವಿನ ಇಳುವರಿ ಹೆಚ್ಚಾಗುತ್ತದೆ. ಪೂರೈಕೆ ಜಾಸ್ತಿಯಾಗುವುದರಿಂದ ಬೆಲೆ ಕುಸಿಯುತ್ತದೆ. ಅದೇ ರೀತಿ ಚೆಂಡು ಹೂ, ಸೇವಂತಿಗೆ ಹೂವಿಗೆ ಮಳೆ ಬಿದ್ದರೆ, ಹೆಚ್ಚು ದಿನಕ್ಕೆ ಇಡುವುದಕ್ಕೆ ಆಗುವುದಿಲ್ಲ. ಒಂದೇ ದಿನಕ್ಕೆ ಕೊಳೆಯುತ್ತದೆ. ಹೀಗಾಗಿ, ಗ್ರಾಹಕರು ಖರೀದಿ ಮಾಡುವುದಿಲ್ಲ. ಮೂರ್ನಾಲ್ಕು ದಿನಗಳಿಂದ ಮಳೆಯಾಗುತ್ತಿರುವುದರಿಂದ, ಕಳೆದ ವಾರಕ್ಕೆ ಹೋಲಿಸಿದರೆ ಸೇವಂತಿಗೆ, ಚೆಂಡುಹೂ, ಸುಗಂಧರಾಜದ ಬೆಲೆ ಇಳಿದಿದೆ’ ಎಂದು ಚೆನ್ನಿಪುರಮೋಳೆಯ ಬಿಡಿ ಹೂವಿನ ವ್ಯಾಪಾರಿ ರವಿ ‘ಪ್ರಜಾವಾಣಿ’ಗೆ ತಿಳಿಸಿದರು.