<p><strong>ಕೊಳ್ಳೇಗಾಲ</strong>: ಕೊಡಗು, ಕೇರಳದ ವಯನಾಡು ಭಾಗದಲ್ಲಿ ಮಳೆಯಾಗುತ್ತಿರುವುದು ಹಾಗೂ ಕೆಆರ್ಎಸ್, ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.</p>.<p>ಕಾವೇರಿ ನದಿ ಮೈದುಂಬಲು ಆರಂಭಿಸಿರುವುದು ತಾಲ್ಲೂಕಿನ ನದಿ ತಟದ ರೈತರಲ್ಲಿ ಮಂದಹಾಸ ಮೂಡಿಸಿದೆ.</p>.<p>ಮಳೆಯಾಗುತ್ತಿದ್ದರೂ, ಕೆಆರ್ಎಸ್, ಕಬಿನಿ ಜಲಾಶಯಗಳು ಇನ್ನೂ ಭರ್ತಿಯಾಗಿಲ್ಲ. ಹಾಗಿದ್ದರೂ, ಎರಡೂ ಜಲಾಶಯಗಳಿಂದನದಿಗೆ 5,500 ಕ್ಯುಸೆಕ್ಗಳಷ್ಟು ನೀರನ್ನು ಬಿಡಲಾಗುತ್ತಿದೆ.</p>.<p>ತಾಲ್ಲೂಕಿನ ಮೂಲಕ ಹಾದು ಹೋಗುವ ಕಾವೇರಿ ಹನೂರು ತಾಲ್ಲೂಕಿನ ಹೊಗೆನಕಲ್ ನಂತರ ತಮಿಳುನಾಡಿನತ್ತ ಹರಿಯುತ್ತದೆ.</p>.<p class="Subhead">ಸ್ಥಳೀಯರಿಂದ ಕಾವೇರಿ ನದಿ ಪೂಜೆ: ಮಳೆಗಾಲದಲ್ಲಿ ನದಿಯ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆಯೇ ನದಿ ದಂಡೆಯಲ್ಲಿರುವ ಗ್ರಾಮಗಳ ಜನರು ಕಾವೇರಿ ನದಿಗೆ ಪೂಜೆ ಸಲ್ಲಿಸುತ್ತಾರೆ. ನೂರಾರು ವರ್ಷಗಳಿಂದ ಈ ಸಂಪ್ರದಾಯ ಜಾಲ್ತಿಯಲ್ಲಿದ್ದು, ಈಗಲೂ ಜನರು ಅದನ್ನು ಪಾಲಿಸುತ್ತಾ ಬಂದಿದ್ದಾರೆ.</p>.<p>ಪ್ರತಿ ವರ್ಷ ಜೂನ್ ಹಾಗೂ ಜುಲೈ ತಿಂಗಳಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತದೆ. ಆ ಸಮಯದಲ್ಲಿ ನದಿ ತೀರದ ಗ್ರಾಮದವರು ನದಿಗೆ ಸಾಂಪ್ರದಾಯದಂತೆ ಪೂಜೆ ಮಾಡಿ, ನದಿಯಿಂದ ನೀರನ್ನು ಮನೆಗೆ ತಂದು ಬೆಲ್ಲದ ಅನ್ನವನ್ನು ಮಾಡಿ ಸೇವಿಸುತ್ತಾರೆ’ ಎಂದು ದಾಸನಪುರ ಗ್ರಾಮದ ಗಣೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead">ಕೊಚ್ಚಿಕೊಂಡು ಬಂದ ಕಸದ ರಾಶಿ: ನದಿಯ ಹರಿವು ಹೆಚ್ಚಾದ ಕಾರಣ ನದಿಪಾತ್ರದಲ್ಲಿ ಅಲ್ಲಲ್ಲಿ ನಿಂತ ಕಸದ ರಾಶಿಗಳು ಈಗ ನೀರಿನೊಂದಿಗೆ ಬರುತ್ತಿವೆ. ನದಿಯ ಇಕ್ಕೆಲ್ಲಗಳಲ್ಲೂ ಕೊಚ್ಚಿಕೊಂಡು ಕಸದ ರಾಶಿ, ನದಿತೀರದ ಗ್ರಾಮಗಳ ವ್ಯಾಪ್ತಿಯ ದಂಡೆಯಲ್ಲಿ ರಾಶಿ ಬಿದ್ದಿವೆ.</p>.<p class="Briefhead"><strong>ರೈತರಲ್ಲಿ ಮಂದಹಾಸ</strong></p>.<p>ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ನದಿಯ ನೀರನ್ನು ಕೆರೆ–ಕಟ್ಟೆಗಳಿಗೆ ಹಾಗೂ ನಾಲೆಗಳಿಗೆ ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಕಾವೇರಿ ನೀರಾವರಿ ನಿಗಮವನ್ನು ಒತ್ತಾಯಿಸಿದ್ದಾರೆ.</p>.<p>‘ಅನೇಕ ಗ್ರಾಮಗಳಲ್ಲಿ ಕೆರೆ–ಕಟ್ಟೆಗಳು ನೀರಿಲ್ಲದೆ ಒಣಗಿವೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ ಕಾವೇರಿ ನದಿ ಸಮೀಪದ ಕೆರೆ–ಕಟ್ಟೆಗಳು ಭರ್ತಿಯಾಗುತ್ತಿವೆ. ಈ ನೀರನ್ನೇ ನಂಬಿ ಅನೇಕ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತೇವೆ’ ಎಂದು ಧನಗರೆ ಗ್ರಾಮದ ರೈತ ಜೀವನ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಳ್ಳೇಗಾಲ</strong>: ಕೊಡಗು, ಕೇರಳದ ವಯನಾಡು ಭಾಗದಲ್ಲಿ ಮಳೆಯಾಗುತ್ತಿರುವುದು ಹಾಗೂ ಕೆಆರ್ಎಸ್, ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದರಿಂದ ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದೆ.</p>.<p>ಕಾವೇರಿ ನದಿ ಮೈದುಂಬಲು ಆರಂಭಿಸಿರುವುದು ತಾಲ್ಲೂಕಿನ ನದಿ ತಟದ ರೈತರಲ್ಲಿ ಮಂದಹಾಸ ಮೂಡಿಸಿದೆ.</p>.<p>ಮಳೆಯಾಗುತ್ತಿದ್ದರೂ, ಕೆಆರ್ಎಸ್, ಕಬಿನಿ ಜಲಾಶಯಗಳು ಇನ್ನೂ ಭರ್ತಿಯಾಗಿಲ್ಲ. ಹಾಗಿದ್ದರೂ, ಎರಡೂ ಜಲಾಶಯಗಳಿಂದನದಿಗೆ 5,500 ಕ್ಯುಸೆಕ್ಗಳಷ್ಟು ನೀರನ್ನು ಬಿಡಲಾಗುತ್ತಿದೆ.</p>.<p>ತಾಲ್ಲೂಕಿನ ಮೂಲಕ ಹಾದು ಹೋಗುವ ಕಾವೇರಿ ಹನೂರು ತಾಲ್ಲೂಕಿನ ಹೊಗೆನಕಲ್ ನಂತರ ತಮಿಳುನಾಡಿನತ್ತ ಹರಿಯುತ್ತದೆ.</p>.<p class="Subhead">ಸ್ಥಳೀಯರಿಂದ ಕಾವೇರಿ ನದಿ ಪೂಜೆ: ಮಳೆಗಾಲದಲ್ಲಿ ನದಿಯ ನೀರಿನ ಹರಿವು ಹೆಚ್ಚಾಗುತ್ತಿದ್ದಂತೆಯೇ ನದಿ ದಂಡೆಯಲ್ಲಿರುವ ಗ್ರಾಮಗಳ ಜನರು ಕಾವೇರಿ ನದಿಗೆ ಪೂಜೆ ಸಲ್ಲಿಸುತ್ತಾರೆ. ನೂರಾರು ವರ್ಷಗಳಿಂದ ಈ ಸಂಪ್ರದಾಯ ಜಾಲ್ತಿಯಲ್ಲಿದ್ದು, ಈಗಲೂ ಜನರು ಅದನ್ನು ಪಾಲಿಸುತ್ತಾ ಬಂದಿದ್ದಾರೆ.</p>.<p>ಪ್ರತಿ ವರ್ಷ ಜೂನ್ ಹಾಗೂ ಜುಲೈ ತಿಂಗಳಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತದೆ. ಆ ಸಮಯದಲ್ಲಿ ನದಿ ತೀರದ ಗ್ರಾಮದವರು ನದಿಗೆ ಸಾಂಪ್ರದಾಯದಂತೆ ಪೂಜೆ ಮಾಡಿ, ನದಿಯಿಂದ ನೀರನ್ನು ಮನೆಗೆ ತಂದು ಬೆಲ್ಲದ ಅನ್ನವನ್ನು ಮಾಡಿ ಸೇವಿಸುತ್ತಾರೆ’ ಎಂದು ದಾಸನಪುರ ಗ್ರಾಮದ ಗಣೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.</p>.<p class="Subhead">ಕೊಚ್ಚಿಕೊಂಡು ಬಂದ ಕಸದ ರಾಶಿ: ನದಿಯ ಹರಿವು ಹೆಚ್ಚಾದ ಕಾರಣ ನದಿಪಾತ್ರದಲ್ಲಿ ಅಲ್ಲಲ್ಲಿ ನಿಂತ ಕಸದ ರಾಶಿಗಳು ಈಗ ನೀರಿನೊಂದಿಗೆ ಬರುತ್ತಿವೆ. ನದಿಯ ಇಕ್ಕೆಲ್ಲಗಳಲ್ಲೂ ಕೊಚ್ಚಿಕೊಂಡು ಕಸದ ರಾಶಿ, ನದಿತೀರದ ಗ್ರಾಮಗಳ ವ್ಯಾಪ್ತಿಯ ದಂಡೆಯಲ್ಲಿ ರಾಶಿ ಬಿದ್ದಿವೆ.</p>.<p class="Briefhead"><strong>ರೈತರಲ್ಲಿ ಮಂದಹಾಸ</strong></p>.<p>ಕಾವೇರಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿರುವುದು ರೈತರ ಸಂತಸಕ್ಕೆ ಕಾರಣವಾಗಿದೆ. ನದಿಯ ನೀರನ್ನು ಕೆರೆ–ಕಟ್ಟೆಗಳಿಗೆ ಹಾಗೂ ನಾಲೆಗಳಿಗೆ ಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಕಾವೇರಿ ನೀರಾವರಿ ನಿಗಮವನ್ನು ಒತ್ತಾಯಿಸಿದ್ದಾರೆ.</p>.<p>‘ಅನೇಕ ಗ್ರಾಮಗಳಲ್ಲಿ ಕೆರೆ–ಕಟ್ಟೆಗಳು ನೀರಿಲ್ಲದೆ ಒಣಗಿವೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾದ ಕಾರಣ ಕಾವೇರಿ ನದಿ ಸಮೀಪದ ಕೆರೆ–ಕಟ್ಟೆಗಳು ಭರ್ತಿಯಾಗುತ್ತಿವೆ. ಈ ನೀರನ್ನೇ ನಂಬಿ ಅನೇಕ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತೇವೆ’ ಎಂದು ಧನಗರೆ ಗ್ರಾಮದ ರೈತ ಜೀವನ್ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>