ಪಕ್ಷ ಬೆಳೆಯುತ್ತಿದೆ:‘ಆಕಾಂಕ್ಷಿಗಳು ಟಿಕೆಟ್ಗಾಗಿ ಅರ್ಜಿ ಹಾಕುವ ಸಂಸ್ಕೃತಿ ನಮ್ಮಲ್ಲಿಲ್ಲ. ಪಕ್ಷವು ಕಾರ್ಯ, ಸಿದ್ಧಾಂತ, ಅವರ ನಿಷ್ಠೆಗಳನ್ನು ನೋಡಿಕೊಂಡು ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತದೆ. ಒಂದು ಕಾಲದಲ್ಲಿ ಹಳೆ ಮೈಸೂರು ಭಾಗ, ಚಾಮರಾಜನಗರದಲ್ಲಿ ಪಕ್ಷಕ್ಕೆ ಅಭ್ಯರ್ಥಿಗಳು ಸಿಗುತ್ತಿರಲಿಲ್ಲ. ಅಂತಹದ್ದರಲ್ಲಿ ಈಗಅಭ್ಗರ್ಥಿಗಳ ದಂಡೇ ಇದೆ ಅಂದರೆ ಪಕ್ಷ ಬೆಳೆದಿದೆ ಎಂದರ್ಥ’ ಎಂದು ಪ್ರಶ್ನೆಯೊಂದಕ್ಕೆ ನಳಿನ್ ಉತ್ತರಿಸಿದರು.